ಮದುವೆಯಾದ ಎರಡೇ ದಿನಕ್ಕೆ ಗಡಿಗೆ ತೆರಳಿದ ಸೈನಿಕ 
ದೇಶ

ದೇಶ ರಕ್ಷಣೆಗಾಗಿ ನನ್ನ ಸಿಂಧೂರ ಕಳಿಸುತ್ತಿದ್ದೇನೆ: ಮದುವೆಯಾದ ಎರಡೇ ದಿನಕ್ಕೆ ಗಡಿಗೆ ತೆರಳಿದ ಸೈನಿಕ; ಹೆಮ್ಮೆಯಿಂದ ಕಳಿಸಿಕೊಟ್ಟ ಪತ್ನಿ!

ಮಹಾರಾಷ್ಟ್ರದ ಜಲಗಾಂವ್ ಮೂಲದ ಮನೋಜ್ ಪಾಟೀಲ್ ಅವರು ಅರಿಶಿಣದ ಮೈಯಲ್ಲೇ ದೇಶ ಸೇವೆಗೆ ತೆರಳಿರುವುದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮಹಾರಾಷ್ಟ್ರ: ಮದುವೆಯಾದ ಮೂರೇ ದಿನಕ್ಕೆ ಸೈನಿಕರೊಬ್ಬರು ದೇಶ ಸೇವೆಗೆ ವಾಪಸ್ ತೆರಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂವ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಸಶಸ್ತ್ರ ಸಂಘರ್ಷ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲಾ ಸೈನಿಕರ ರಜೆಯನ್ನು ರದ್ದುಗೊಳಿಸಿದೆ. ಇದರಿಂದ, ಮನೆಗೆ ಮರಳಿದ ಸೈನಿಕರು ತಮ್ಮ ಕರ್ತವ್ಯಕ್ಕೆ ತುರ್ತಾಗಿ ಮರಳಬೇಕಾಗಿದೆ. ಅಂತೆಯೇ, ತನ್ನ ಮದುವೆಗಾಗಿ ರಜೆಗೆ ಆಗಮಿಸಿದ್ದ ಯೋಧರೊಬ್ಬರು ಮದುವೆಯಾದ ಎರಡೇ ದಿನಕ್ಕೆ ವಾಪಸ್ ದೇಶ ಸೇವೆಗೆ ತೆರಳಿದ್ದಾರೆ.

ಮಹಾರಾಷ್ಟ್ರದ ಜಲಗಾಂವ್ ಮೂಲದ ಮನೋಜ್ ಪಾಟೀಲ್ ಅವರು ಅರಿಶಿಣದ ಮೈಯಲ್ಲೇ ದೇಶ ಸೇವೆಗೆ ತೆರಳಿರುವುದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಮನೋಜ್ ಪಾಟೀಲ್ ಅವರ ದೇಶ ಭಕ್ತಿಯನ್ನು ಜನರು ಕೊಂಡಾಡುತ್ತಿದ್ದಾರೆ.

ದೇಶ ಸೇವೆಗಾಗಿ 2017ರಲ್ಲಿ ಭಾರತೀಯ ಸೇನೆಗೆ ಸೇರಿರುವ ಮನೋಜ್ ಇದೇ ಮೇ 5 ರಂದು ಹಸೆಮಣೆ ಏರಿದ್ದರು. ಬಳಿಕ ಜೀವನ ಸಂಗಾತಿಯೊಂದಿಗೆ ಕನಸುಗಳನ್ನು ಕಟ್ಟಿಕೊಂಡು ಪ್ರಯಾಣಿಸುವ ಯೋಜನೆಗಳನ್ನು ಹಾಕಿಕೊಂಡಿದ್ದರು. ಆದರೆ ಈ ಮಧ್ಯೆ ಭಾರತ, ಪಾಕ್ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವುದರಿಂದ ಎಲ್ಲ ರಜೆಗಳನ್ನು ರದ್ದುಪಡಿಸಿ, ತಕ್ಷಣವೇ ವಾಪಸ್ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ಬಂದಿದೆ. ಇದರಿಂದಾಗಿ ತಕ್ಷಣವೇ ದೇಶ ಸೇವೆಗೆ ಮನೋಜ್ ಮೇ 8 ರಂದು ತೆರಳಿದ್ದಾರೆ.

ಪಚೋರಾ ತಾಲೂಕಿನ ನಾಚಂಖೇಡೆಯ ರಾಮಚಂದ್ರ ಪಾಟೀಲ್ ಅವರ ಪುತ್ರಿ ಯಾಮಿನಿ ಮತ್ತು ಖೇಡ್ಗಾಂವ್ ನಂದಿಚೆಯ ಜ್ಞಾನೇಶ್ವರ್ ಲುಭಾನ್ ಪಾಟೀಲ್ ಅವರ ಪುತ್ರ ಮನೋಜ್ ಅವರ ವಿವಾಹ ಮೇ 5 ರಂದು ಅದ್ಧೂರಿಯಾಗಿ ನೆರವೇರಿದೆ. "ಮನೋಜ್ ಮದುವೆಗೆ ರಜೆ ಹಾಕಿ ಹಳ್ಳಿಗೆ ಬಂದಿದ್ದ. ಮನೋಜ್‌ನನ್ನು ತುರ್ತಾಗಿ ಕರ್ತವ್ಯ ಕರೆದಿದ್ದಾರೆ. ಕುಟುಂಬದೊಂದಿಗೆ ಮದುವೆ ಸಂಭ್ರಮದಲ್ಲಿದ್ದಾಗ ಮನೋಜ್ ವಾಪಸ್ ತೆರಳಿರುವುದು ನಮಗೆ ಹೆಮ್ಮೆ ಇದೆ" ಎಂದು ಅವರ ತಂದೆ ಹೇಳಿದ್ದಾರೆ.

ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ: ಮದುವೆಯಾದ ಎರಡೇ ದಿನದಲ್ಲಿ ಪತಿ ದೇಶದ ರಕ್ಷಣೆಗೆ ಹೋಗಿರುವ ಬಗ್ಗೆ ಮನೋಜ್ ಪತ್ನಿ ಯಾಮಿನಿ ಹೆಮ್ಮೆ ಪಟ್ಟಿದ್ದಾರೆ. ಜೊತೆಗೆ ಕಠಿಣ ಪರಿಸ್ಥಿತಿಯಲ್ಲಿ ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ, ದೇಶ ಸೇವೆಯೇ ಪ್ರಮುಖ ಆದ್ಯತೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT