ಮಮತಾ ಬ್ಯಾನರ್ಜಿ- ಅಭಿಷೇಕ್ ಬ್ಯಾನರ್ಜಿ online desk
ದೇಶ

ವಿದೇಶಗಳಿಗೆ ಸರ್ವಪಕ್ಷ ನಿಯೋಗ: Mamata ಜೊತೆ Kiren Rijiju ಚರ್ಚೆ; ಪಠಾಣ್ ಔಟ್, ಅಭಿಷೇಕ್ ಬ್ಯಾನರ್ಜಿ ಇನ್!

ನಿಯೋಗಗಳಿಗೆ ಪಕ್ಷದ ಅಭ್ಯರ್ಥಿಯನ್ನು ಏಕಪಕ್ಷೀಯವಾಗಿ ಆಯ್ಕೆ ಮಾಡಿದ್ದಕ್ಕಾಗಿ ಕೇಂದ್ರವನ್ನು ಮಮತಾ ಬ್ಯಾನರ್ಜಿ ತೀವ್ರವಾಗಿ ಟೀಕಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ.

ನವದೆಹಲಿ: ಪಾಕ್ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂದೂರ್ ಬಗ್ಗೆ ಜಾಗತಿಕ ಸಮುದಾಯಕ್ಕೆ ಮಾಹಿತಿ ನೀಡುವುದಕ್ಕಾಗಿ ವಿದೇಶಗಳಿಗೆ ತೆರಳುತ್ತಿರುವ ನಿಯೋಗದಲ್ಲಿ ಭಾಗಿಯಾಗುವುದಿಲ್ಲ ಎಂದು ಟಿಎಂಸಿ ಹೇಳಿದ ಬೆನ್ನಲ್ಲೇ ಕೇಂದ್ರ ಸಚಿವ ಕಿರಣ್ ರಿಜಿಜು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಜೊತೆ ಚರ್ಚೆ ನಡೆಸಿದ್ದಾರೆ.

ಈ ಚರ್ಚೆಯ ಬಳಿಕ ಸರ್ವಪಕ್ಷ ನಿಯೋಗದಲ್ಲಿ ಟಿಎಂಸಿಯಿಂದ ಸಂಸದ ಯೂಸೂಫ್ ಪಠಾಣ್ ಬದಲಾಗಿ ಸಂಸದ ಅಭಿಷೇಕ್ ಬ್ಯಾನರ್ಜಿ ತೆರಳುವುದು ಖಚಿತಗೊಂಡಿದೆ. ಇದಕ್ಕೂ ಮೊದಲು ಯೂಸೂಫ್ ಪಠಾಣ್ ನಿಯೋಗದಲ್ಲಿರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು ಆದರೆ ಮೇ.19 ರಂದು ಏಕಾಏಕಿ ಟಿಎಂಸಿ ನಿಯೋಗದಲ್ಲಿ ತಾನು ಭಾಗಿಯಾಗುವುದಿಲ್ಲ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿತ್ತು.

ಮೇ.20 ರಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿ ಸಮಾಧಾನಪಡಿಸಿದರು ಮತ್ತು ಎಐಟಿಸಿಯ ಪ್ರತಿನಿಧಿಗಾಗಿ ಸಲಹೆ ಕೇಳಿದರು ಎಂದು ತಿಳಿದುಬಂದಿದೆ.

ಸರ್ಕಾರ ಪಕ್ಷದೊಂದಿಗೆ ಸಮಾಲೋಚಿಸಬೇಕಿತ್ತು ಎಂದು ರಿಜಿಜು ಬ್ಯಾನರ್ಜಿಗೆ ತಿಳಿಸಿದರು. ಆದಾಗ್ಯೂ, ಬಹುಪಕ್ಷ ನಿಯೋಗಗಳಿಗೆ ಸರ್ಕಾರ ರಾಜಕೀಯ ಪಕ್ಷಗಳಿಂದ ಹೆಸರುಗಳನ್ನು ಕೋರಿಲ್ಲ ಎಂದು ರಿಜಿಜು ಸ್ಪಷ್ಟಪಡಿಸಿದ್ದಾರೆ.

"ಪಾಕಿಸ್ತಾನದಿಂದ ಹುಟ್ಟಿಕೊಂಡಿರುವ ಭಯೋತ್ಪಾದನೆಯ ವಿರುದ್ಧ ಭಾರತದ ಯುದ್ಧಕ್ಕೆ ಜಾಗತಿಕ ಬೆಂಬಲವನ್ನು ಒಟ್ಟುಗೂಡಿಸುವ ಬಹುಪಕ್ಷ ನಿಯೋಗಗಳಿಗೆ ಹೆಸರುಗಳನ್ನು ಸೂಚಿಸಲು ಯಾವುದೇ ಪಕ್ಷವನ್ನು ಕೇಳಲಾಗಿಲ್ಲ" ಎಂದು ರಿಜಿಜು ಹೇಳಿದ್ದಾರೆ.

ನಿಯೋಗಗಳಿಗೆ ಪಕ್ಷದ ಅಭ್ಯರ್ಥಿಯನ್ನು ಏಕಪಕ್ಷೀಯವಾಗಿ ಆಯ್ಕೆ ಮಾಡಿದ್ದಕ್ಕಾಗಿ ಕೇಂದ್ರವನ್ನು ಮಮತಾ ಬ್ಯಾನರ್ಜಿ ತೀವ್ರವಾಗಿ ಟೀಕಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ.

“ಸಂಸದೀಯ ಪಕ್ಷವು ಸಂಸತ್ತಿನಲ್ಲಿ ಮಸೂದೆಗಳನ್ನು ಚರ್ಚಿಸುತ್ತದೆ. ಪಕ್ಷದೊಂದಿಗೆ ಸಮಾಲೋಚಿಸಿದ ನಂತರವೇ ಸಂಸತ್ತಿನ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ನಾನು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸಂಸದೀಯ ಪಕ್ಷದ ಅಧ್ಯಕ್ಷಳಾಗಿದ್ದೇನೆ” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮಗೆ ಎಂದಿಗೂ ಮಾಹಿತಿ ನೀಡಲಾಗುವುದಿಲ್ಲ. ಅವರು ನಮಗೆ ತಿಳಿಸಿದರೆ ನಾವು ಪ್ರತಿನಿಧಿಯನ್ನು ಕಳುಹಿಸುತ್ತೇವೆ. ನಾವು ಏಕೆ ಕಳುಹಿಸುವುದಿಲ್ಲ? ಇಲ್ಲಿ ವಿವಾದದ ಅರ್ಥವಿಲ್ಲ. ನಾವು ಸಂಪೂರ್ಣವಾಗಿ ಸರ್ಕಾರದೊಂದಿಗಿದ್ದೇವೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸುವ ಗುರಿಯನ್ನು ಹೊಂದಿರುವ ಕೇಂದ್ರದ ಬಹು-ಪಕ್ಷೀಯ ರಾಜತಾಂತ್ರಿಕ ಅಭಿಯಾನವನ್ನು ತಮ್ಮ ಪಕ್ಷ ಬಹಿಷ್ಕರಿಸುತ್ತಿಲ್ಲ ಮತ್ತು ಕೇಂದ್ರದಿಂದ ಔಪಚಾರಿಕ ವಿನಂತಿಯನ್ನು ಸ್ವೀಕರಿಸಿದ ನಂತರ ತನ್ನ ಪ್ರತಿನಿಧಿಗಳನ್ನು ಕಳುಹಿಸುತ್ತದೆ ಎಂದು ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

"ಯಾವ ಪಕ್ಷವನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದನ್ನು ಕೇಂದ್ರವು ಏಕಪಕ್ಷೀಯವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಇದನ್ನು ಆಯಾ ಪಕ್ಷದ ನಾಯಕತ್ವ ನಿರ್ಧರಿಸಬೇಕು" ಎಂದು ಅಭಿಷೇಕ್ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT