ಸುಪ್ರೀಂ ಕೋರ್ಟ್  
ದೇಶ

ವಕ್ಫ್ (ತಿದ್ದುಪಡಿ) ಕಾಯ್ದೆ: ಮಧ್ಯಂತರ ಆದೇಶ ಹೊರಡಿಸಲು ವಿಚಾರಣೆಯನ್ನು ಮೂರು ವಿಷಯಗಳಿಗೆ ಸೀಮಿತಗೊಳಿಸಿ; ಕೇಂದ್ರ ಸುಪ್ರೀಂ ಕೋರ್ಟ್‌ಗೆ ಒತ್ತಾಯ

ವಿಚಾರಣೆ ಪ್ರಗತಿಯಲ್ಲಿದೆ ಮತ್ತು ಸಿಬಲ್ ಅವರು ವಾದಗಳನ್ನು ಮುಂದುವರಿಸಲು ಪ್ರಾರಂಭಿಸಿದರು ಮತ್ತು ಪ್ರಕರಣದ ಹಿನ್ನೆಲೆಯನ್ನು ಉಲ್ಲೇಖಿಸುತ್ತಿದ್ದಾರೆ.

ನವದೆಹಲಿ: ಸುಪ್ರೀಂ ಕೋರ್ಟ್ ವಕ್ಫ್ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಆರಂಭಿಸಿದೆ. ಕೇಂದ್ರ ಸರ್ಕಾರವು ಮಧ್ಯಂತರ ಆದೇಶಗಳನ್ನು ನೀಡುವ ಉದ್ದೇಶಕ್ಕಾಗಿ ವಿಚಾರಣೆಯನ್ನು ಮೂರು ಪ್ರಮುಖ ವಿಷಯಗಳಿಗೆ ಸೀಮಿತಗೊಳಿಸುವಂತೆ ಕೇಂದ್ರ ಸರ್ಕಾರವು ನ್ಯಾಯಪೀಠವನ್ನು ಒತ್ತಾಯಿಸಿದೆ.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಾನೂನಿನ ಸುತ್ತಲಿನ ಪ್ರಶ್ನೆಗಳಿಗೆ ಮುಂದುವರಿಯುವ ಮೊದಲು ನ್ಯಾಯಾಲಯವು ಮೂರು ನಿರ್ದಿಷ್ಟ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಬೇಕು. ನ್ಯಾಯಾಲಯಗಳಿಂದ ವಕ್ಫ್ ಆಸ್ತಿ ಎಂದು ಘೋಷಿಸಲಾದ ಆಸ್ತಿಗಳನ್ನು ಡಿನೋಟಿಫೈ ಮಾಡಬಹುದೇ, ವಕ್ಫ್ ಬೈ ಯೂಸರ್(ವಕ್ಫ್ ಆಸ್ತಿ ಎಂದು ಹಲವು ವರ್ಷಗಳಿಂದ ಬಳಸುತ್ತಿರುವವರ ಕಾನೂನುಬದ್ಧತೆ ಮತ್ತು ವಕ್ಫ್ ಬೈ ಡೀಡ್(ಬೇರೆಯವರಿಂದ ಮಾರಾಟ ಮಾಡಿದ ಆಸ್ತಿಗಳನ್ನು ಖರೀದಿಸಿದ ವಕ್ಫ್ ಆಸ್ತಿ) ಎಂಬವುಗಳ ಬಗ್ಗೆ ಚರ್ಚಿಸಬೇಕು ಎಂದು ಒತ್ತಾಯಿಸಿದರು.

ನ್ಯಾಯಾಲಯವು ಈ ಮೂರು ವಿಷಯಗಳಿಗೆ ಆದ್ಯತೆ ನೀಡಿತು. ನಾವು ಈ ಮೂರು ವಿಷಯಗಳಿಗೆ ನಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಿದ್ದೇವೆ. ಆದಾಗ್ಯೂ, ಅರ್ಜಿದಾರರ ಲಿಖಿತ ಸಲ್ಲಿಕೆಗಳು ಈಗ ಹಲವಾರು ಇತರ ವಿಷಯಗಳನ್ನು ಮೀರಿದೆ. ಈ ಮೂರು ವಿಷಯಗಳಿಗೆ ಪ್ರತಿಕ್ರಿಯೆಯಾಗಿ ನಾನು ನನ್ನ ಅಫಿಡವಿಟ್ ನ್ನು ಸಲ್ಲಿಸಿದ್ದೇನೆ. ಅದನ್ನು ಮೂರು ವಿಷಯಗಳಿಗೆ ಮಾತ್ರ ಸೀಮಿತಗೊಳಿಸುವುದು ನನ್ನ ವಿನಂತಿಯಾಗಿದೆ" ಎಂದು ಸಾಲಿಸಿಟರ್ ಜನರಲ್ ಹೇಳಿದರು.

ಆದಾಗ್ಯೂ, ಪ್ರಸ್ತುತ ವಕ್ಫ್ ಚೌಕಟ್ಟನ್ನು ವಿರೋಧಿಸುವ ಅರ್ಜಿದಾರರಲ್ಲಿ ಒಬ್ಬರನ್ನು ಪ್ರತಿನಿಧಿಸುವ ಹಿರಿಯ ವಕೀಲ ಕಪಿಲ್ ಸಿಬಲ್ ಕೇಂದ್ರದ ಪ್ರಸ್ತಾವನೆಯನ್ನು ಬಲವಾಗಿ ಆಕ್ಷೇಪಿಸಿದರು. ಈ ವಿಷಯವು ಸಾಂವಿಧಾನಿಕ ಪ್ರಶ್ನೆಗಳನ್ನು ಒಳಗೊಂಡಿದ್ದು, ಅದನ್ನು ಪ್ರತ್ಯೇಕವಾಗಿ ನಿರ್ಣಯಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ನೀವು ಸವಾಲನ್ನು ವಿಶ್ಲೇಷಿಸಲು ಸಾಧ್ಯವಿಲ್ಲ. ಕಾನೂನನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು ಎಂದರು.

ನ್ಯಾಯಾಲಯಗಳು ವಕ್ಫ್, ಬಳಕೆದಾರರಿಂದ ವಕ್ಫ್ ಅಥವಾ ಮಾರಾಟ ಪತ್ರದ ಮೂಲಕ ವಕ್ಫ್ ಎಂದು ಘೋಷಿಸಿದ ಆಸ್ತಿಗಳನ್ನು ಡಿನೋಟಿಫೈ ಮಾಡುವ ಅಧಿಕಾರವು ಒಂದು ಸಮಸ್ಯೆಯಾಗಿದೆ. ಅರ್ಜಿದಾರರು ಎತ್ತಿರುವ ಎರಡನೇ ಸಮಸ್ಯೆ ರಾಜ್ಯ ವಕ್ಫ್ ಮಂಡಳಿಗಳು ಮತ್ತು ಕೇಂದ್ರ ವಕ್ಫ್ ಮಂಡಳಿಯ ಸಂಯೋಜನೆಗೆ ಸಂಬಂಧಿಸಿದೆ, ಅಲ್ಲಿ ಅವರು ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿ ಮುಸ್ಲಿಮರು ಮಾತ್ರ ಕಾರ್ಯನಿರ್ವಹಿಸಬೇಕು ಎಂದು ವಾದಿಸುತ್ತಾರೆ.

ಮೂರನೇ ಸಮಸ್ಯೆಯು ವಕ್ಫ್ ಆಸ್ತಿಯು ಸರ್ಕಾರಿ ಭೂಮಿಯೇ ಎಂದು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿ ವಿಚಾರಣೆ ನಡೆಸಿದಾಗ ಅದನ್ನು ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳುವ ನಿಬಂಧನೆಗೆ ಸಂಬಂಧಿಸಿದೆ.

ವಿಚಾರಣೆ ಪ್ರಗತಿಯಲ್ಲಿದೆ ಮತ್ತು ಸಿಬಲ್ ಅವರು ವಾದಗಳನ್ನು ಮುಂದುವರಿಸಲು ಪ್ರಾರಂಭಿಸಿದರು ಮತ್ತು ಪ್ರಕರಣದ ಹಿನ್ನೆಲೆಯನ್ನು ಉಲ್ಲೇಖಿಸುತ್ತಿದ್ದಾರೆ.

ಏಪ್ರಿಲ್ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಒಪ್ಪಿಗೆ ಪಡೆದ ನಂತರ ಕೇಂದ್ರವು ಕಳೆದ ತಿಂಗಳು ವಕ್ಫ್ (ತಿದ್ದುಪಡಿ) ಕಾಯ್ದೆ 2025 ಕ್ಕೆ ಅಧಿಸೂಚನೆ ಮಾಡಿತು. ಈ ಮಸೂದೆಯನ್ನು ಲೋಕಸಭೆಯು 288 ಸದಸ್ಯರ ಬೆಂಬಲದೊಂದಿಗೆ ಅಂಗೀಕರಿಸಿತ್ತು. 232 ಸಂಸದರು ಇದನ್ನು ವಿರೋಧಿಸಿದ್ದರು.

ರಾಜ್ಯಸಭೆಯಲ್ಲಿ 128 ಸದಸ್ಯರು ಇದರ ಪರವಾಗಿ ಮತ್ತು 95 ಸದಸ್ಯರು ಇದರ ವಿರುದ್ಧ ಮತ ಚಲಾಯಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಕ್ರಮ ನಡೆದರೆ ಮಧ್ಯಪ್ರವೇಶಿಸುತ್ತೇವೆ- ಸುಪ್ರೀಂ ಕೋರ್ಟ್: ಬಿಹಾರ SIR ವಿರುದ್ಧದ ಅರ್ಜಿಗಳ ಅಂತಿಮ ವಿಚಾರಣೆ ಅಕ್ಟೋಬರ್ 7ಕ್ಕೆ ನಿಗದಿ

ಜಾರ್ಖಂಡ್‌: ತಲೆಗೆ 1 ಕೋಟಿ ರೂ. ಬಹುಮಾನ ಹೊಂದಿದ್ದ ನಕ್ಸಲ್ ನಾಯಕ ಸೇರಿ ಮೂವರ ಹತ್ಯೆ!

ಬಿಹಾರದಲ್ಲಿ 36,000 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ದೆಹಲಿ: ಬೈಕ್​ಗೆ BMW ಕಾರು ಡಿಕ್ಕಿ; ಕೇಂದ್ರ ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ಸಾವು, ಪತ್ನಿಗೆ ಗಾಯ

Waqf Amendment Act: ಕೆಲವೊಂದು ಅಂಶಗಳಿಗೆ ತಡೆ ನೀಡಿ ಸುಪ್ರೀಂ ಕೋರ್ಟ್ 'ಮಧ್ಯಂತರ ಆದೇಶ' ಪ್ರಕಟ

SCROLL FOR NEXT