ಹಾನಿಗೊಳಗಾದ ಇಂಡಿಯೋ ವಿಮಾನ 
ದೇಶ

ಅಪಾಯಕ್ಕೆ ಸಿಲುಕಿದ್ದ ದೆಹಲಿ-ಶ್ರೀನಗರ ಇಂಡಿಗೋ ವಿಮಾನಕ್ಕೆ ತನ್ನ ವಾಯುಸೀಮೆ ಬಳಸಲು ಮನವಿ ತಿರಸ್ಕರಿಸಿದ ಪಾಕಿಸ್ತಾನ; Video

ಅಮೃತಸರದ ಬಳಿಕ ನಡೆಸುತ್ತಿರುವಾಗ ಅಸ್ಥಿರ ಹವಾಮಾನವನ್ನು ಗಮನಿಸಿದ ಪೈಲಟ್, ಸುರಕ್ಷತಾ ಕಾರಣಗಳಿಗಾಗಿ ತನ್ನ ವಾಯುಸೀಮೆ ಮೂಲಕ ಹಾರಾಟ ನಟಡೆಸಲು ಪಾಕಿಸ್ತಾನಿ ವಾಯು ಸಂಚಾರ ನಿಯಂತ್ರಣ ಸಂಪರ್ಕಿಸಿದರು.

ನವದೆಹಲಿ: ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವು ಗಾಳಿಯಲ್ಲಿ ತೀವ್ರ ಹವಾಮಾನ ಪ್ರಕ್ಷುಬ್ಧತೆ ಅನುಭವಿಸಿತು. ಈ ವೇಳೆ ಪ್ರಕ್ಷುಬ್ಧತೆ ತಪ್ಪಿಸಲು ಪಾಕ್‌ ವಾಯುಸೀಮೆ ಬಳಸಲು ಇಂಡಿಗೋ ಮಾಡಿದ್ದ ಮನವಿಯನ್ನು ಪಾಕಿಸ್ತಾನ ನಿರಾಕರಿಸಿದೆ ಎಂದು ವರದಿಗಳು ತಿಳಿಸಿವೆ.

ಇಂಡಿಗೋ ವಿಮಾನವು ಪ್ರಕ್ಷುಬ್ಧತೆಯನ್ನು ತಪ್ಪಿಸಲು ಸ್ವಲ್ಪ ಸಮಯದವರೆಗೆ ಪಾಕಿಸ್ತಾನದ ವಾಯುಸೀಮೆ ಬಳಸಲು ಅನುಮತಿ ಕೋರಿತ್ತು. ಆದ್ರೆ ಲಾಹೋರ್‌ ವಾಯು ಸಂಚಾರ ನಿಯಂತ್ರಣವು ಈ ವಿನಂತಿಯನ್ನು ತಿರಸ್ಕರಿಸಿತು ಎಂದು ತಿಳಿದು ಬಂದಿದೆ.

ಅಮೃತಸರದ ಬಳಿಕ ನಡೆಸುತ್ತಿರುವಾಗ ಅಸ್ಥಿರ ಹವಾಮಾನವನ್ನು ಗಮನಿಸಿದ ಪೈಲಟ್, ಸುರಕ್ಷತಾ ಕಾರಣಗಳಿಗಾಗಿ ತನ್ನ ವಾಯುಸೀಮೆ ಮೂಲಕ ಹಾರಾಟ ನಟಡೆಸಲು ಪಾಕಿಸ್ತಾನಿ ವಾಯು ಸಂಚಾರ ನಿಯಂತ್ರಣ ಸಂಪರ್ಕಿಸಿದರು. ಆದಾಗ್ಯೂ, ವಿನಂತಿಯನ್ನು ಪಾಕ್‌ ನಿರಾಕರಿಸಿತು. ಆದಾಗ್ಯೂ ವಿಮಾನವು ತನ್ನ ನಿಗದಿತ ಮಾರ್ಗದಲ್ಲಿ ತಲುಪಿ ಶ್ರೀನಗರದಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಆಯಿತು.

ದೆಹಲಿಯಿಂದ ಹೊರಟು ಶ್ರೀನಗರ ಸಮೀಪಿಸುತ್ತಿದ್ದಾಗ ಆಲಿಕಲ್ಲು ಮಳೆಯಿಂದ ತೀವ್ರ ಹಾನಿಗೆ ಒಳಗಾಯಿತು. ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಡ್ಯಾಮೇಜ್‌ ಆಯಿತು. ಆದರೆ ಸಿಬ್ಬಂದಿ ಸಂಜೆ 6:30 ಕ್ಕೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು.

ವಿಮಾನ ಇಳಿದ ನಂತರ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ವಿಮಾನ ವ್ಯವಸ್ಥೆಯನ್ನು ಭೇದಿಸಿ ಸಾಧ್ಯವಾದಷ್ಟು ಕಡಿಮೆ ಮಾರ್ಗದ ಮೂಲಕ ಶ್ರೀನಗರ ತಲುಪಲು ನಿರ್ಧರಿಸಿದರು ಎಂದು ಡಿಜಿಸಿಎ ಹೇಳಿಕೆಯಲ್ಲಿ ತಿಳಿಸಿದೆ.

ಕಷ್ಟಕರ ಪರಿಸ್ಥಿತಿಗಳ ಹೊರತಾಗಿಯೂ, ಪ್ರಯಾಣಿಕರಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ. ಆದಾಗ್ಯೂ, ವಿಮಾನದ ಮೂಗಿನ ಭಾಗಕ್ಕೆ, ನಿರ್ದಿಷ್ಟವಾಗಿ ಹವಾಮಾನ ರಾಡಾರ್ ಉಪಕರಣಗಳನ್ನು ಹೊಂದಿರುವ ರಾಡೋಮ್‌ಗೆ ಹಾನಿಯಾಗಿದೆ.

ವಿಮಾನದಲ್ಲಿದ್ದ ಎಲ್ಲ 227 ಮಂದಿಯೂ‌ ಸೇಫ್ ಆಗಿದ್ದಾರೆ. ಪೈಲಟ್‌ಗಳ‌ ಚಾಕಚಕ್ಯತೆಯಿಂದ ಎಲ್ಲ ಪ್ರಯಾಣಿಕರು ಸೇಫ್ ಆಗಿ ಬದುಕುಳಿದಿದ್ದಾರೆ. ವಿಮಾನದ ಮುಂಭಾಗ ಭಾರೀ ಪ್ರಮಾಣದಲ್ಲಿ‌ ಹಾನಿಗೀಡಾಗಿದ್ದು, ಈ ಹಾನಿಯನ್ನು ನೋಡಿದವರು ಪ್ರಯಾಣಿಕರು ಪವಾಡಸದೃಶರಾಗಿ ಬದುಕುಳಿದಿದ್ದಾರೆ ಎನ್ನುವಷ್ಟು ಗಂಭೀರ ಪ್ರಮಾಣದಲ್ಲಿ ವಿಮಾನ ಹಾನಿಗೊಳಗಾಗಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT