ಮುಂಬೈಯಲ್ಲಿ ಸುರಿದ ಭಾರೀ ಮಳೆಗೆ ನೀರು ತುಂಬಿಕೊಂಡ ರಸ್ತೆಯಲ್ಲಿ ಜನರ ಸಂಚಾರ  
ದೇಶ

Mumbai: 24 ಗಂಟೆಯಲ್ಲಿ 106 ಮಿ.ಮೀ ಮಳೆ; ಹಗುರದಿಂದ ಕೂಡಿದ ಭಾರೀ ವರ್ಷಧಾರೆ ನಿರೀಕ್ಷೆ

ಇಂದು ಬೆಳಗ್ಗೆ ಹೊತ್ತಿಗೆ ದ್ವೀಪ ನಗರದಲ್ಲಿ ಸರಾಸರಿ 106 ಮಿಮೀ ಮಳೆಯಾಗಿದೆ, ಆದರೆ ಪಶ್ಚಿಮ ಉಪನಗರಗಳಲ್ಲಿ 72 ಮಿಮೀ ಮತ್ತು ಪೂರ್ವ ಉಪನಗರಗಳಲ್ಲಿ 63 ಮಿಮೀ ಮಳೆಯಾಗಿದೆ ಎಂದು ಬಿಎಂಸಿ ತಿಳಿಸಿದೆ.

ಮುಂಬೈ: ವಾರದ ಆರಂಭದಲ್ಲಿಯೇ ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ತತ್ತರಿಸಿದ್ದ ಮುಂಬೈ ದ್ವೀಪ ನಗರದಲ್ಲಿ 24 ಗಂಟೆಗಳಲ್ಲಿ ಸರಾಸರಿ 106 ಮಿಮೀ ಮಳೆಯಾಗಿದೆ ಎಂದು ಬೃಹನ್ ಮುಂಬೈ ಅಧಿಕಾರಿಗಳು ಹೇಳಿದ್ದಾರೆ.

ಮುಂಬೈ ಉಪನಗರ ರೈಲುಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ಸೇವೆಗಳು ಪುನಾರಂಭಗೊಂಡಿವೆ, ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಸಂಸ್ಥೆಯ ಬಸ್‌ಗಳು ಮತ್ತು ಮೆಟ್ರೋ ಸೇವೆಗಳು ಚಾಲನೆಯಲ್ಲಿವೆ ಎಂದು ಅವರು ಹೇಳಿದರು.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಪ್ರಕಾರ, ನಾರಿಮನ್ ಪಾಯಿಂಟ್‌ನಲ್ಲಿ ಮೇ 25ರ ರಾತ್ರಿ 10 ರಿಂದ ಮೇ 26 ರಂದು ಬೆಳಗ್ಗೆ 11 ರವರೆಗೆ ಅತಿ ಹೆಚ್ಚು 252 ಮಿಮೀ ಮಳೆಯಾಗಿದ್ದು, ನಂತರ ಬಿಎಂಸಿ ಪ್ರಧಾನ ಕಚೇರಿ (216 ಮಿಮೀ) ಮತ್ತು ಕೊಲಾಬಾ ಪಂಪಿಂಗ್ ಸ್ಟೇಷನ್ (207 ಮಿಮೀ) ಮಳೆಯಾಗಿದೆ.

ಇಂದು ಬೆಳಗ್ಗೆ ಹೊತ್ತಿಗೆ ದ್ವೀಪ ನಗರದಲ್ಲಿ ಸರಾಸರಿ 106 ಮಿಮೀ ಮಳೆಯಾಗಿದೆ, ಆದರೆ ಪಶ್ಚಿಮ ಉಪನಗರಗಳಲ್ಲಿ 72 ಮಿಮೀ ಮತ್ತು ಪೂರ್ವ ಉಪನಗರಗಳಲ್ಲಿ 63 ಮಿಮೀ ಮಳೆಯಾಗಿದೆ ಎಂದು ಬಿಎಂಸಿ ತಿಳಿಸಿದೆ.

ಮುಂದಿನ 24 ಗಂಟೆಗಳಲ್ಲಿ ಮುಂಬೈ ನಗರ ಮತ್ತು ಉಪನಗರಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಮಧ್ಯಮ ಪ್ರಮಾಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆ ಮತ್ತು ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ನಗರದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ದಕ್ಷಿಣ ಮುಂಬೈನಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮರ ಅಥವಾ ಕೊಂಬೆಗಳು ಬಿದ್ದ ಕಾರಣದಿಂದ ನೀರು ನಿಲ್ಲುವಿಕೆ ಮತ್ತು ವಿದ್ಯುತ್ ಸರಬರಾಜು ಅಡಚಣೆಯು ಉಪನಗರ ರೈಲು ಸೇವೆಗಳನ್ನು ಸ್ಥಗಿತಗೊಳಿಸಲು ಕಾರಣವಾಯಿತು.

ವರ್ಲಿ ನಾಕಾದಲ್ಲಿ ಹೊಸದಾಗಿ ಉದ್ಘಾಟಿಸಲಾದ ಆಚಾರ್ಯ ಅತ್ರೆ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಮಳೆನೀರು ತುಂಬಿಕೊಂಡು ಮುಂಬೈ ಮೆಟ್ರೋ ರೈಲು ನಿಗಮವು ಅಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ಪೆದ್ದರ್ ರಸ್ತೆ ಮತ್ತು ನೆಪಿಯನ್ ಸೀ ರಸ್ತೆಯಂತಹ ಎತ್ತರ ಪ್ರದೇಶಗಳು ಸೇರಿದಂತೆ ಪ್ರವಾಹಕ್ಕೆ ಅಪರೂಪವಾಗಿ ಸಾಕ್ಷಿಯಾಗಿದ್ದ ದಕ್ಷಿಣ ಮುಂಬೈನ ಹಲವಾರು ತಗ್ಗು ಪ್ರದೇಶಗಳು ಜಲಾವೃತಗೊಂಡವು.

ಬಿಎಂಸಿ ಪ್ರಕಾರ ಇಂದು ಮಧ್ಯಾಹ್ನ 12.13 ಕ್ಕೆ 4.88 ಮೀಟರ್ ಎತ್ತರದ ಉಬ್ಬರವಿಳಿತ ಮತ್ತು ರಾತ್ರಿ 11.56 ಕ್ಕೆ 4.18 ಮೀಟರ್ ಎತ್ತರದ ಉಬ್ಬರವಿಳಿತದ ನಿರೀಕ್ಷೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಹಿಮಾಚಲದಲ್ಲಿ ಭಾರಿ ಭೂಕುಸಿತ: ಬಸ್‌ ಮೇಲೆಯೇ ಬಿದ್ದ ಪರ್ವತ; ಕನಿಷ್ಠ 18 ಮಂದಿ ಸಾವು

ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣ: ಹಿರಿಯ ಅಧಿಕಾರಿ ಅಮಾನತು

BiggBoss Kannada: ಜಾಲಿವುಡ್​ ಸ್ಟುಡಿಯೋಸ್​ಗೆ ಬೀಗ; ಮನೆಯಿಂದ ಹೊರಬಂದ ಬಿಗ್‌ಬಾಸ್‌ ಸ್ಪರ್ಧಿಗಳು ಹೋಗಿದ್ದೇಲ್ಲಿಗೆ?

ಥಿಯೇಟರ್ ಹಾಗೂ ರಸ್ತೆಗಳಲ್ಲಿ ದೈವದ ಅನುಕರಣೆ ಮಾಡಬೇಡಿ: ಪ್ರೇಕ್ಷಕರಲ್ಲಿ ಕಾಂತಾರ: ಅಧ್ಯಾಯ 1 ಚಿತ್ರತಂಡ ಮನವಿ!

ಸುಪ್ರೀಂಕೋರ್ಟ್ ನಲ್ಲಿ ತಮ್ಮತ್ತ ಶೂ ಎಸೆದಿದ್ದವನಿಗೆ ಕ್ಷಮೆ ನೀಡಿದ CJI

SCROLL FOR NEXT