ಉಷಾಬೆನ್ ಇಂದ್ರಸಿನ್ಹ್ ಸೋಲಂಕಿ 
ದೇಶ

SIR ಹೊರೆ: ಕರ್ತವ್ಯದ ವೇಳೆ ವಡೋದರಾ BLO ಸಹಾಯಕಿ ಸಾವು; ಗುಜರಾತ್‌ನಲ್ಲಿ ನಾಲ್ಕು ದಿನಗಳಲ್ಲಿ ನಾಲ್ವರು ಸಾವು

ಗುಜರಾತ್‌ನ ವಡೋದರಾದಲ್ಲಿ ನಡೆದ ಈ ಘಟನೆಯು ಎಸ್‌ಐಆರ್ ಕೆಲಸದ ಒತ್ತಡ ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ಹುಟ್ಟುಹಾಕಿದೆ.

ಅಹಮದಾಬಾದ್: ವಡೋದರಾ ಶಾಲೆಯಲ್ಲಿ ಶನಿವಾರ ಕರ್ತವ್ಯದ ವೇಳೆ ಬಿಎಲ್‌ಒ ಸಹಾಯಕಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದು, ಎಸ್‌ಐಆರ್ ಕೆಲಸದ ಒತ್ತಡದಿಂದ ಗುಜರಾತ್‌ನಾದ್ಯಂತ ನಾಲ್ಕು ದಿನಗಳಲ್ಲಿ ನಾಲ್ವರು ಬಿಎಲ್‌ಒ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಇಬ್ಬರು ಹಠಾತ್ ಹೃದಯಾಘಾತದಿಂದ ಮತ್ತು ಒಬ್ಬರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ.

ಗುಜರಾತ್‌ನ ವಡೋದರಾದಲ್ಲಿ ನಡೆದ ಈ ಘಟನೆಯು ಎಸ್‌ಐಆರ್ ಕೆಲಸದ ಒತ್ತಡ ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ಹುಟ್ಟುಹಾಕಿದೆ. ಏಕೆಂದರೆ ಬಿಎಲ್‌ಒ ಸಹಾಯಕಿ ಉಷಾಬೆನ್ ಇಂದ್ರಸಿನ್ಹ್ ಸೋಲಂಕಿ ಅವರು ಕಡಕ್ ಬಜಾರ್‌ನ ಪ್ರತಾಪ್ ಶಾಲೆಯಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಗೋರ್ವಾ ಮಹಿಳಾ ಐಟಿಐನಲ್ಲಿ ಕೆಲಸ ಮಾಡುತ್ತಿದ್ದ ಉಷಾಬೆನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಬಿಎಲ್‌ಒ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಪತಿ ಇಂದ್ರಸಿನ್ಹ್ ಸೋಲಂಕಿ ಕುಟುಂಬವು ಅಧಿಕಾರಿಗಳಿಗೆ ಮೊದಲೇ ಎಚ್ಚರಿಕೆ ನೀಡಿತ್ತು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

"ನನ್ನ ಹೆಂಡತಿಯ ಆರೋಗ್ಯ ಚೆನ್ನಾಗಿರಲಿಲ್ಲ. ನಾವು ಸುಭಾನ್‌ಪುರದ ಪಿಡಬ್ಲ್ಯೂ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದೇವೆ. ಅವಳು ಗೋರ್ವಾ ಐಟಿಐನಲ್ಲಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಈ ಬಿಎಲ್‌ಒ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ನಾವು ವಿನಂತಿಸಿದ್ದೆವು. ಆದರೆ ನಮ್ಮ ಮನವಿಯ ಹೊರತಾಗಿಯೂ, ಅವಳನ್ನು ಕರ್ತವ್ಯಕ್ಕೆ ನಿಯೋಜಿಸಲಾಯಿತು" ಎಂದು ಪತಿ ಹೇಳಿದ್ದಾರೆ.

ಕ್ಷೇತ್ರಕಾರ್ಯದ ಸಮಯದಲ್ಲಿಉಷಾಬೆನ್, ತನ್ನ ಮೇಲ್ವಿಚಾರಕರಿಗಾಗಿ ಕಾಯುತ್ತಿದ್ದಾಗ, ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಅವಳಿಗೆ ಹೊಟ್ಟೆನೋವು ಬಂದಂತೆ ಕಾಣುತ್ತಿದೆ ಎಂದು ನಾವು ತಕ್ಷಣ ಸಯಾಜಿ ಆಸ್ಪತ್ರೆಗೆ ಕರೆದೊಯ್ದೆವು. ಆದರೆ ವೈದ್ಯರು ಅವಳು ಮೃತಪಟ್ಟಿರುವುದಾಗಿ" ತಿಳಿಸಿದರು ಎಂದರು.

ಮತ್ತೊಬ್ಬ ಸಂಬಂಧಿ ವಿಕ್ರಮಸಿಂಹ ಸುಹಾದಿಯಾ ಅವರು, ಅವಳಿಗೆ ಅತಿಯಾದ ಕೆಲಸದ ಒತ್ತಡ ಇತ್ತು ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು ಎಟಿಎಂ ವ್ಯಾನ್ ದರೋಡೆ: 54 ಗಂಟೆಗಳಲ್ಲಿ ಮೂವರ ಬಂಧನ; 5.76 ಕೋಟಿ ಹಣ ವಶ; ತನಿಖೆಗೆ 11 ತಂಡ ರಚನೆ

G20 Summit: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆಗೆ ಪ್ರಧಾನಿ ಮೋದಿಯ ಆತ್ಮೀಯತೆ! Video ವೈರಲ್

CJI ಬಿಆರ್ ಗವಾಯಿ ಅಧಿಕಾರವಧಿಯಲ್ಲಿ ದಲಿತರಿಗೆ ಮಣೆ ಹಾಕಿದ್ರಾ? ನೇಮಕವಾದ SC,OBC ಜಡ್ಜ್ ಗಳ ಸಂಖ್ಯೆ ಎಷ್ಟು ಗೊತ್ತಾ?

Operation Sindoor: ಭಾರತ-ಪಾಕಿಸ್ತಾನ ಯುದ್ಧವನ್ನು ಚೀನಾ ತನ್ನ ಯುದ್ಧೋಪಕರಣಗಳ ಪರೀಕ್ಷೆಗೆ ಬಳಸಿತ್ತು: ಅಮೆರಿಕ

ಚಲಿಸುವ ರೈಲಿನೊಳಗೆ ಕೆಟಲ್‌ನಲ್ಲಿ ನೂಡಲ್ಸ್ ಬೇಯಿಸಿದ ಪ್ರಯಾಣಕಿ; ಕ್ರಮಕ್ಕೆ ಮುಂದಾದ ರೈಲ್ವೆ

SCROLL FOR NEXT