ಸಾಂಕೇತಿಕ ಚಿತ್ರ 
ದೇಶ

ನೋಯ್ಡಾ: ಮದುವೆಯಾಗಲು ನಿರಾಕರಿಸಿದ ಗರ್ಲ್​​ಫ್ರೆಂಡ್ ಗೆ ಗುಂಡಿಕ್ಕಿ ಕೊಂದ ಯುವಕ!

ಶುಕ್ರವಾರ ಸಂಜೆ ಫೇಸ್ 2 ಪ್ರದೇಶದಲ್ಲಿ ಕೃಷ್ಣ(26) ಎಂಬ ಯುವಕ ತನ್ನ ಗೆಳತಿ ಸೋನು(25) ಅವರು ತಂಗಿದ್ದ ಪೇಯಿಂಗ್ ಗೆಸ್ಟ್ ಗೆ ತೆರಳಿ, ಅಲ್ಲಿ ಅಕೆಯೊಂದಿಗೆ ಜಗಳ ಮಾಡಿದ ನಂತರ ಗುಂಡು ಹಾರಿಸಿದ್ದಾನೆ.

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿ ಯುವಕನೊಬ್ಬ ತನ್ನನ್ನು ಮದುವೆಯಾಗಲು ನಿರಾಕರಿಸಿದ ಗರ್ಲ್​​ಫ್ರೆಂಡ್ ಗೆ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಶುಕ್ರವಾರ ಸಂಜೆ ಫೇಸ್ 2 ಪ್ರದೇಶದಲ್ಲಿ ಕೃಷ್ಣ(26) ಎಂಬ ಯುವಕ ತನ್ನ ಗೆಳತಿ ಸೋನು(25) ಅವರು ತಂಗಿದ್ದ ಪೇಯಿಂಗ್ ಗೆಸ್ಟ್ ಗೆ ತೆರಳಿ, ಅಲ್ಲಿ ಅಕೆಯೊಂದಿಗೆ ಜಗಳ ಮಾಡಿದ ನಂತರ ಗುಂಡು ಹಾರಿಸಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ(ಸೆಂಟ್ರಲ್ ನೋಯ್ಡಾ) ಶಕ್ತಿ ಮೋಹನ್ ಅವಸ್ಥಿ ಅವರು ತಿಳಿಸಿದ್ದಾರೆ.

ಪಿಜಿಯಲ್ಲಿ ಯುವತಿ ಮೇಲೆ ಗುಂಡು ಹಾರಿಸಿದ ಘಟನೆ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಅಧಿಕಾರಿ ಹೇಳಿದ್ದಾರೆ.

ವಿಧಿವಿಜ್ಞಾನ ತಂಡ ಅಪರಾಧ ನಡೆದ ಸ್ಥಳವನ್ನು ಪರಿಶೀಲಿಸಿದೆ ಮತ್ತು ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು ಎಂದರು.

"ಆರಂಭಿಕ ತನಿಖೆಯಲ್ಲಿ ಕೃಷ್ಣ ಯುವತಿಯ ಕೋಣೆಗೆ ಹೋಗಿದ್ದು, ಇಬ್ಬರ ನಡುವೆ ಜಗಳದ ಬಳಿಕ ಗುಂಡು ಹಾರಿಸಿದ್ದಾನೆ" ಎಂದು ಡಿಸಿಪಿ ತಿಳಿಸಿದರು.

ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದ್ದು, ಗುಂಡು ಹಾರಿಸಿ ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ಪೊಲೀಸ್ ತಂಡ ನಿಯೋಜಿಸಲಾಗಿದೆ. ಇತರ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮ್ರೋಹಾ ಮೂಲದ ಮಹಿಳೆ ಮತ್ತು ಬಿಹಾರ ಮೂಲದ ಕೃಷ್ಣ, ಈ ಹಿಂದೆ ಕಾರ್ಖಾನೆಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಮತ್ತು ಅಂದಿನಿಂದ ಸಂಬಂಧದಲ್ಲಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೀದಿ ಬುಡಕ್ಕೇ ಬಂದ SIR: ಬಂಗಾಳ ಸರ್ಕಾರದ ಸಚಿವೆಗೆ ಚುನಾವಣಾ ಆಯೋಗ ನೋಟಿಸ್!

'ನೈತಿಕ ಪೊಲೀಸ್‌ಗಿರಿ'ಯ ಭಯ: Hindu ಕಾರ್ಯಕರ್ತರಿಗೆ ಹೆದರಿ Pizza ಔಟ್ಲೆಟ್ 2ನೇ ಮಹಡಿಯಿಂದ ಜಿಗಿದ ಜೋಡಿ, ಕಾಲು ಮುರಿತ!

'ನೀನ್ ನಂಗೇ ಬೇಕು..': ಪ್ರಿಯಕರನ ಪತ್ನಿಗೆ HIV virus ಎಂಜೆಕ್ಷನ್ ಚುಚ್ಚಿದ ಮಾಜಿ ಪ್ರಿಯತಮೆ!

ಬಾಂಗ್ಲಾದೇಶದಲ್ಲಿ 23 ವರ್ಷದ ಹಿಂದೂ ವ್ಯಕ್ತಿಯ ಸಜೀವ ದಹನ: 'ಯೋಜಿತ ಕೊಲೆ' ಎಂದ ಕುಟುಂಬ

ತಮಿಳುನಾಡಿನ ಕೆಲವೆಡೆ ಭಾರೀ ಮಳೆ ಸಾಧ್ಯತೆ; ಕರ್ನಾಟಕದಲ್ಲಿ ಒಣಹವೆ: IMD

SCROLL FOR NEXT