ಹಿರಿಯ ನಕ್ಸಲೈಟ್ ಮಲ್ಲೋಜುಲ ವೇಣುಗೋಪಾಲ್ ಅಲಿಯಾಸ್ ಭೂಪತಿ Photo | ANI
ದೇಶ

Maharashtra: 'ಮಾಸ್ ಸರೆಂಡರ್'; ಹಿರಿಯ ನಕ್ಸಲೀಯ ನಾಯಕ ಭೂಪತಿ ಸೇರಿ 60 ಮಂದಿ ಶರಣಾಗತಿ!

ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಹಿರಿಯ ನಕ್ಸಲೀಯ ನಾಯಕ ಭೂಪತಿ ಸೇರಿದಂತೆ ಬರೊಬ್ಬರಿ 60 ಇತರ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ.

ಮುಂಬೈ: ಮಹಾರಾಷ್ಟ್ರದಲ್ಲಿ ನಕ್ಸಲ್ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ನಕ್ಸಲರ ಗುಂಪೊಂದು ಸಾಮೂಹಿಕ ಶರಣಾಗತಿಯಾಗಿದೆ.

ಹೌದು.. ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಹಿರಿಯ ನಕ್ಸಲೀಯ ನಾಯಕ ಭೂಪತಿ ಸೇರಿದಂತೆ ಬರೊಬ್ಬರಿ 60 ಇತರ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ.

ಶರಣಾದ ನಕ್ಸಲೀಯರಲ್ಲಿ ನಕ್ಸಲೀಯ ನಾಯಕರಲ್ಲಿ ಒಬ್ಬರಾದ ಮಲ್ಲೊಜುಲ ವೇಣುಗೋಪಾಲ್ ಅಲಿಯಾಸ್ ಭೂಪತಿ ಸೋಮವಾರ ತಡರಾತ್ರಿ ಶಸ್ತ್ರಾಸ್ತ್ರ ತ್ಯಜಿಸಿ, ಇತರ 60 ಕಾರ್ಯಕರ್ತರನ್ನು ಕರೆದುಕೊಂಡು ಬಂದು ಪೊಲೀಸರ ಮುಂದೆ ಶರಣಾಗಿದ್ದಾರೆ. ಇದು ಭಾರತ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ)ಕ್ಕೆ ಗಮನಾರ್ಹ ಹಿನ್ನಡೆಯಾಗಿದೆ.

ಭೂಪತಿ, ಕೇಂದ್ರ ಸಮಿತಿಯ ಸದಸ್ಯರು ಮತ್ತು ವಿಭಾಗೀಯ ಸಮಿತಿಯ ಹತ್ತು ಸದಸ್ಯರು ಸೇರಿದಂತೆ ಕಾರ್ಯಕರ್ತರೊಂದಿಗೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ವೇಣುಗೋಪಾಲ್ ಅಲಿಯಾಸ್ ಭೂಪತಿ ಅಲಿಯಾಸ್ ಸೋನು ಮಾವೋವಾದಿ ಸಂಘಟನೆಯಲ್ಲಿ ಅತ್ಯಂತ ಪ್ರಭಾವಶಾಲಿ ತಂತ್ರಜ್ಞರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು ಮತ್ತು ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಪ್ಲಟೂನ್ ಕಾರ್ಯಾಚರಣೆಗಳನ್ನು ದೀರ್ಘಕಾಲ ಮೇಲ್ವಿಚಾರಣೆ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಭೂಪತಿ ಅಲಿಯಾಸ್ ಸೋನು ಪಕ್ಷದ ಸೈದ್ಧಾಂತಿಕ ಮುಖ್ಯಸ್ಥರಷ್ಟೇ ಅಲ್ಲ, ಅದರ ಸಂವಹನ ತಜ್ಞರೂ ಮತ್ತು ಛತ್ತೀಸ್‌ಗಢದ ಕಾಡುಗಳ ಹೊರಗಿನ ಜಗತ್ತಿಗೆ ಅದನ್ನು ಸಂಪರ್ಕಿಸುವ ದಾರವೂ ಆಗಿದ್ದರು.

"ಸೋನು ಹೊರಗಿನ ಪ್ರಪಂಚದೊಂದಿಗೆ ಸಂಬಂಧ ಹೊಂದಿದ್ದರು. ಅವರು ಮಾವೋವಾದಿ ಸಹಾನುಭೂತಿದಾರರು ಮತ್ತು ಮುಂಭಾಗದ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದರು. ಅವರ ನಿರ್ಗಮನದೊಂದಿಗೆ, ಮಾವೋವಾದಿ ಹೋರಾಟವು ಹಿನ್ನಡೆಯನ್ನು ಅನುಭವಿಸಿದೆ ಎಂಬುದು ಸ್ಪಷ್ಟವಾಗಿದೆ" ಎಂದು ಗುಪ್ತಚರ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿಯ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಭೂಪತಿ ಮತ್ತು ಉನ್ನತ ನಕ್ಸಲ್ ನಾಯಕತ್ವದ ನಡುವೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳು ನಕ್ಸಲೀಯ ಸಂಘಟನೆಯಲ್ಲಿ ಆಂತರಿಕ ಸಂಘರ್ಷಕ್ಕೆ ಕಾರಣವಾಗಿವೆ, ಇದು ಅವರ ನಿರ್ಗಮನಕ್ಕೆ ವೇಗವರ್ಧಕವಾಗಿರಬಹುದು ಎಂದು ಹೇಳಲಾಗಿದೆ.

ಭೂಪತಿ ಸಶಸ್ತ್ರ ಹೋರಾಟ ವಿಫಲವಾಗಿದೆ ಎಂದು ಹೇಳಿಕೊಂಡಿದ್ದರು ಮತ್ತು ಸಾರ್ವಜನಿಕ ಬೆಂಬಲ ಕಡಿಮೆಯಾಗುತ್ತಿದೆ ಮತ್ತು ನೂರಾರು ಕಾರ್ಯಕರ್ತರ ನಷ್ಟವನ್ನು ಉಲ್ಲೇಖಿಸಿ ಶಾಂತಿ ಮತ್ತು ಸಂವಾದದತ್ತ ಸಾಗುವಂತೆ ಮನವಿ ಮಾಡಿದ್ದರು ಎಂದು ಹೇಳಲಾಗಿದೆ.

ಅವರ ನಿಲುವು ಇತರ ಹಿರಿಯ ಕಾರ್ಯಕರ್ತರಿಂದ ಪ್ರತಿರೋಧವನ್ನು ಎದುರಿಸಿತು. ಭೂಪತಿ ಅವರು ಇನ್ನೊಬ್ಬ ನಾಯಕನ ಅಡಿಯಲ್ಲಿ ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ. ಕೇಂದ್ರ ನಕ್ಸಲ್ ನಾಯಕತ್ವದ ಒತ್ತಡಕ್ಕೆ ಮಣಿದ ಭೂಪತಿ ಅಂತಿಮವಾಗಿ ಶಸ್ತ್ರಾಸ್ತ್ರ ತ್ಯಜಿಸಲು ಒಪ್ಪಿಕೊಂಡರು. ಸಂಘಟನೆಯಿಂದ ಹೊರಬರುವುದಾಗಿ ಘೋಷಿಸಿದರು ಮತ್ತು ತಮ್ಮ ಅನುಯಾಯಿಗಳೊಂದಿಗೆ ಗಡ್ಚಿರೋಲಿ ಪೊಲೀಸರ ಮುಂದೆ ಶರಣಾದರು ಎಂದು ಹೇಳಲಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ, ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರ ಮುಂದೆ ನಿರಂತರವಾಗಿ ನಕ್ಸಲರು ಶರಣಾಗುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ, ಭೂಪತಿ ಅವರ ಪತ್ನಿ ತಾರಕ್ಕಾ ಕೂಡ ಶರಣಾಗಿದ್ದರು. ಅವರು ನಿಷೇಧಿತ ಚಳವಳಿಯ ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಸದಸ್ಯರಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜೈಸಲ್ಮೇರ್‌ನಲ್ಲಿ ಹೊತ್ತಿ ಉರಿದ ಬಸ್: 15 ಮಂದಿ ಸಜೀವದಹನ; ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ಪ್ರಯಾಣಿಕರು, Video!

ಟೀಕೆ ಬದಲು ಸಾಮೂಹಿಕ ಪ್ರಯತ್ನ ಅಗತ್ಯ: ಕಿರಣ್​ ಮಜುಂದಾರ್​ಗೆ ಡಿ.ಕೆ ಶಿವಕುಮಾರ್ ತಿರುಗೇಟು

ಕದನ ವಿರಾಮಕ್ಕೆ ಕಿಮ್ಮತ್ತಿಲ್ಲ: ಗಾಜಾದಲ್ಲಿ ಮಾರಣ ಹೋಮ ಮುಂದುವರೆಸಿದ ಇಸ್ರೇಲ್; 9 ಪ್ಯಾಲೆಸ್ತೇನಿಯರು ಸಾವು!

ಅಯೋಧ್ಯೆ ಅರ್ಚಕರ ಆಶೀರ್ವಾದ ಪಡೆದ ಮುಸ್ಕಾನ್ ಮಿಶ್ರಾ; ಅಖಿಲೇಶ್ 'ಉಗ್ರ' ಕ್ರಮ; ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ವಜಾ!

ರಾಜ್ಯದ ಕೈತಪ್ಪಿದ ₹10,000 ಕೋಟಿ ಆದಾಯ, 30,000 ಉದ್ಯೋಗ! Google AI Data Centre ಯೋಜನೆ ಆಂಧ್ರಪ್ರದೇಶದ ಪಾಲು!

SCROLL FOR NEXT