ಮಹಿಳೆಯೊಬ್ಬರು ಆಭರಣ ಮಳಿಗೆಯಲ್ಲಿ ಚಿನ್ನದ ಸರ ನೋಡುತ್ತಿರುವುದು (ಸಂಗ್ರಹ ಚಿತ್ರ) online desk
ದೇಶ

ಧನ್ತೇರಸ್ ಅಂಗವಾಗಿ 60 ಟನ್ ಚಿನ್ನ ಆಭರಣ ಮಾರಾಟ; ದೀಪಾವಳಿ ಮುಕ್ತಾಯಕ್ಕೂ ಮುನ್ನ ವಹಿವಾಟು 1 ಲಕ್ಷ ಕೋಟಿ ದಾಟುವ ನಿರೀಕ್ಷೆ!

ರಡು ದಿನಗಳಲ್ಲಿ ಬಲವಾದ ಬೇಡಿಕೆಯು ಅಂದಾಜು 85,000 ಕೋಟಿ ರೂ.ಗಳಿಗೆ ಚಿನ್ನದ ಮಾರಾಟವನ್ನು ಹೆಚ್ಚಿಸಿದೆ ಎಂದು ಅಖಿಲ ಭಾರತ ರತ್ನ ಮತ್ತು ಆಭರಣ ಮಂಡಳಿ (GJC) ತಿಳಿಸಿದೆ.

ನವದೆಹಲಿ: ಈ ವರ್ಷ ಭಾರತದಾದ್ಯಂತ ಆಭರಣ ಮಾರುಕಟ್ಟೆಗಳು ಧನ್ತೇರಸ್‌ ಅಂಗವಾಗಿ ಭರ್ಜರಿ ವಹಿವಾಟು ಕಂಡಿವೆ. ಎರಡು ದಿನಗಳಲ್ಲಿ ಬಲವಾದ ಬೇಡಿಕೆಯು ಅಂದಾಜು 85,000 ಕೋಟಿ ರೂ.ಗಳಿಗೆ ಚಿನ್ನದ ಮಾರಾಟವನ್ನು ಹೆಚ್ಚಿಸಿದೆ ಎಂದು ಅಖಿಲ ಭಾರತ ರತ್ನ ಮತ್ತು ಆಭರಣ ಮಂಡಳಿ (GJC) ತಿಳಿಸಿದೆ.

ಜಿಜೆಸಿ ಅಧ್ಯಕ್ಷ ರಾಜೇಶ್ ರೋಕ್ಡೆ ಮಾತನಾಡಿ, "ಭಾರತದಾದ್ಯಂತ, ಧನ್ತೇರಸ್‌ನ ಎರಡು ದಿನಗಳಲ್ಲಿ ಸುಮಾರು 50 ರಿಂದ 60 ಟನ್ ಆಭರಣಗಳು ಮಾರಾಟವಾಗಿದೆ. ಇದರ ಮೌಲ್ಯ ಸುಮಾರು 85 ಸಾವಿರ ಕೋಟಿ ರೂ.ಗಳಷ್ಟಾಗಿದ್ದು. ಪ್ರತಿಕ್ರಿಯೆ ಅದ್ಭುತವಾಗಿದೆ, ಎಲ್ಲಾ ವರ್ಗದ ಆಭರಣಗಳು ಬಲವಾದ ಬೇಡಿಕೆಯನ್ನು ಕಂಡಿವೆ. ಕಳೆದ ವರ್ಷದಷ್ಟೇ ಪ್ರಮಾಣದಲ್ಲಿ ಈ ಬಾರಿಯೂ ಚಿನ್ನಾಭರಣಗಳು ಮಾರಾಟವಾಗಿದೆ. ಆದರೆ ಮೌಲ್ಯದ ವಿಷಯದಲ್ಲಿ, ನಾವು ಶೇಕಡಾ 35-40 ರಷ್ಟು ಗಮನಾರ್ಹ ಬೆಳವಣಿಗೆಯನ್ನು ಕಂಡಿದ್ದೇವೆ." ಎಂದು ಹೇಳಿದ್ದಾರೆ.

ಚಿನ್ನದ ಜೊತೆಗೆ ಇತ್ತೀಚಿನ ದಿನಗಳಲ್ಲಿ ಬೆಳ್ಳಿಗೂ ಬೇಡಿಕೆ ಹೆಚ್ಚಾಗತೊಡಗಿದೆ. ಗ್ರಾಹಕರು ಚಿನ್ನದ ಬೆಲೆಗಳು ಏರುತ್ತಿರುವುದರಿಂದ ಹೆಚ್ಚು ಕೈಗೆಟುಕುವ ಆಯ್ಕೆಗಳತ್ತ ಗಮನ ಹರಿಸಿದ್ದರಿಂದ ಬೆಳ್ಳಿ ಮಾರಾಟವು ಬಹುತೇಕ ದ್ವಿಗುಣಗೊಂಡಿದೆ. ಧನ್ತೇರಸ್ ಆಚರಣೆಯ ಅಂಗವಾಗಿ ಜನರು ಮುಗಿಬಿದ್ದು ಚಿನ್ನಾಭರಣಗಳನ್ನು ಖರೀದಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Women World Cup 2025: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 4 ರನ್‌ಗಳ ವಿರೋಚಿತ ಸೋಲು; ಸೆಮಿಸ್‌ಗಾಗಿ ಕಿವೀಸ್ ಜೊತೆ ಸೆಣೆಸಾಟ!

ಮುಸ್ಲಿಂ ಯುವಕರನ್ನು ಮದುವೆಯಾದರೆ ಅಂತಹ ಮಗಳ ಕಾಲು ಮುರಿಯಿರಿ: ಮಾಜಿ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಅವಹೇಳನ: ರಮೇಶ್ ಕತ್ತಿಗೆ ಸಂಕಷ್ಟ; ಅಟ್ರಾಸಿಟಿ ಪ್ರಕರಣ ದಾಖಲು!

Flood Relief: ಕರ್ನಾಟಕ, ಮಹಾರಾಷ್ಟ್ರಕ್ಕೆ 1,950 ಕೋಟಿ ರೂ ಬಿಡುಗಡೆಗೆ ಕೇಂದ್ರ ಸರ್ಕಾರ ಅನುಮೋದನೆ!

News headlines 19-10-2025 | ಖರ್ಗೆ ತವರಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ; ಮತಗಟ್ಟೆ ಬಳಿ ಜಾರಕಿಹೊಳಿ- ಸವದಿ ಬಣಗಳ ನಡುವೆ ಹೊಡೆದಾಟ; DK Shivakumar- Kiran Majumdar ನಡುವೆ ನಿಲ್ಲದ ವಾಕ್ಸಮರ

SCROLL FOR NEXT