ಸಾಂದರ್ಭಿಕ ಚಿತ್ರ  
ದೇಶ

ಏಪ್ರಿಲ್-ಜುಲೈ 2025: ವಿಮಾನ ಪ್ರಯಾಣಿಕರ ಸಂಖ್ಯೆ ಶೇ.4ರಷ್ಟು ಹೆಚ್ಚಳ; ದಕ್ಷಿಣ ರಾಜ್ಯಗಳಲ್ಲಿ ಶೇ.10ರಷ್ಟು ಪ್ರಗತಿ

ಜನರ ವಿದೇಶಿ ಸಂಚಾರವು ಶೇ. 6.6 ರಷ್ಟು ಬೆಳೆದರೆ, ದೇಶ ಸಂಚಾರವು ಶೇ. 3.4 ರಷ್ಟು ಹೆಚ್ಚಾಗಿದೆ. ದಕ್ಷಿಣ ರಾಜ್ಯದಲ್ಲಿ ಒಟ್ಟಾರೆ ಬೆಳವಣಿಗೆಗೆ ಕಾರಣವಾಗಿದ್ದು, ಶೇ. 10 ಕ್ಕಿಂತ ಹೆಚ್ಚಿನ ಏರಿಕೆಯನ್ನು ದಾಖಲಿಸಿದೆ ಎಂದು ಅಂಕಿಅಂಶ ಹೇಳುತ್ತದೆ.

ನವದೆಹಲಿ: ಕಳೆದ ಏಪ್ರಿಲ್ ನಿಂದ ಜುಲೈ ವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ ವಿಮಾನ ಪ್ರಯಾಣಿಕರ ದಟ್ಟಣೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 4 ರಷ್ಟು ಹೆಚ್ಚಳವಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ತಿಳಿಸಿದೆ.

ಜನರ ವಿದೇಶಿ ಸಂಚಾರವು ಶೇ. 6.6 ರಷ್ಟು ಬೆಳೆದರೆ, ದೇಶ ಸಂಚಾರವು ಶೇ. 3.4 ರಷ್ಟು ಹೆಚ್ಚಾಗಿದೆ. ದಕ್ಷಿಣ ರಾಜ್ಯದಲ್ಲಿ ಒಟ್ಟಾರೆ ಬೆಳವಣಿಗೆಗೆ ಕಾರಣವಾಗಿದ್ದು, ಶೇ. 10 ಕ್ಕಿಂತ ಹೆಚ್ಚಿನ ಏರಿಕೆಯನ್ನು ದಾಖಲಿಸಿದೆ ಎಂದು ಅಂಕಿಅಂಶ ಹೇಳುತ್ತದೆ.

ಎಎಐ ಬಿಡುಗಡೆ ಮಾಡಿದ ವಾಯು ಸಂಚಾರ ವರದಿಯ ಪ್ರಕಾರ, ಕಳೆದ ಏಪ್ರಿಲ್-ಜುಲೈ ಅವಧಿಯಲ್ಲಿ 13.72 ಕೋಟಿ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದಾರೆ, ಕಳೆದ ವರ್ಷ ಇದೇ ಅವಧಿಯಲ್ಲಿ 13.2 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದರು.

ದಕ್ಷಿಣ ಪ್ರದೇಶದ ವಿಮಾನ ನಿಲ್ದಾಣಗಳು ಮಾತ್ರ ಒಟ್ಟು 4.62 ಕೋಟಿ ಪ್ರಯಾಣಿಕರನ್ನು ದಾಖಲಿಸಿದ್ದು, ಕಳೆದ ವರ್ಷ ಇದು 4.2 ಕೋಟಿ ಪ್ರಯಾಣಿಕರಾಗಿದ್ದು, ಶೇ. 10.2 ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ.

ನಾಲ್ಕು ತಿಂಗಳಲ್ಲಿ ಒಟ್ಟು 2,62,68,697 ಭಾರತೀಯರು ಹೊರ ದೇಶಗಳಿಗೆ ವಿಮಾನಯಾನ ಮಾಡಿದ್ದಾರೆ, ಕಳೆದ ವರ್ಷ ಇದೇ ಅವಧಿಯಲ್ಲಿ ಇದು 2,48,30,147 ಆಗಿತ್ತು. ದೇಶದೊಳಗೆ ಕಳೆದ ವರ್ಷದ ಇದೇ ತಿಂಗಳುಗಳಲ್ಲಿ 10,71,76,202 ಪ್ರಯಾಣಿಕರು ಪ್ರಯಾಣಿಸಿದ್ದರೆ, ಈ ಬಾರಿ 11,08,21,774 ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಏಪ್ರಿಲ್-ಜುಲೈ 2024 ಕ್ಕೆ ಹೋಲಿಸಿದರೆ ಏಪ್ರಿಲ್-ಜುಲೈ 2025 ರ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆಯಲ್ಲಿ ಗಮನಾರ್ಹ ಬೆಳವಣಿಗೆಯನ್ನು ದಕ್ಷಿಣ ರಾಜ್ಯಗಳ ವಿಮಾನ ನಿಲ್ದಾಣಗಳು ಕಂಡಿವೆ.

ದಕ್ಷಿಣ ಭಾರತದ ವಿಮಾನ ನಿಲ್ದಾಣಗಳಲ್ಲಿ ಶಿವಮೊಗ್ಗ – 52,272 ಪ್ರಯಾಣಿಕರು (89.3% ಹೆಚ್ಚಳ), ತಿರುಚಿರಾಪಳ್ಳಿ – 2,90,775 (55% ಹೆಚ್ಚಳ), ಕೋಝಿಕೋಡ್ – 2,76,137 (15.8%), ತಿರುಪತಿ – 4,25,629 (52.1%), ಕಾನ್ಯೂರ್ – 87,28,640, 15 ಹೈದರಾಬಾದ್ – 62,981, (34.1%), ಮಧುರೈ - 4,17,325 (12.5%), ಕಡಪಾ - 22,837 (52.8%), ಹುಬ್ಬಳ್ಳಿ - 1,19,756 (22%), ರಾಜಮಂಡ್ರಿ - 11,95,532 (36.3%), ಟುಟಿಕೋರಿನ್ - 1,04,010 (23.5%) ಮತ್ತು ಕರ್ನೂಲ್ - 7,374 (35.7%)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

NCERT ಪಠ್ಯಪುಸ್ತಕ ವಿವಾದ: ನಾವು ನ್ಯಾಯಾಂಗವನ್ನು ಗೌರವಿಸುತ್ತೇವೆ; ಬಿಜೆಪಿ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

SCROLL FOR NEXT