ಸಾಂದರ್ಭಿಕ ಚಿತ್ರ  
ದೇಶ

ಏಪ್ರಿಲ್-ಜುಲೈ 2025: ವಿಮಾನ ಪ್ರಯಾಣಿಕರ ಸಂಖ್ಯೆ ಶೇ.4ರಷ್ಟು ಹೆಚ್ಚಳ; ದಕ್ಷಿಣ ರಾಜ್ಯಗಳಲ್ಲಿ ಶೇ.10ರಷ್ಟು ಪ್ರಗತಿ

ಜನರ ವಿದೇಶಿ ಸಂಚಾರವು ಶೇ. 6.6 ರಷ್ಟು ಬೆಳೆದರೆ, ದೇಶ ಸಂಚಾರವು ಶೇ. 3.4 ರಷ್ಟು ಹೆಚ್ಚಾಗಿದೆ. ದಕ್ಷಿಣ ರಾಜ್ಯದಲ್ಲಿ ಒಟ್ಟಾರೆ ಬೆಳವಣಿಗೆಗೆ ಕಾರಣವಾಗಿದ್ದು, ಶೇ. 10 ಕ್ಕಿಂತ ಹೆಚ್ಚಿನ ಏರಿಕೆಯನ್ನು ದಾಖಲಿಸಿದೆ ಎಂದು ಅಂಕಿಅಂಶ ಹೇಳುತ್ತದೆ.

ನವದೆಹಲಿ: ಕಳೆದ ಏಪ್ರಿಲ್ ನಿಂದ ಜುಲೈ ವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ ವಿಮಾನ ಪ್ರಯಾಣಿಕರ ದಟ್ಟಣೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 4 ರಷ್ಟು ಹೆಚ್ಚಳವಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ತಿಳಿಸಿದೆ.

ಜನರ ವಿದೇಶಿ ಸಂಚಾರವು ಶೇ. 6.6 ರಷ್ಟು ಬೆಳೆದರೆ, ದೇಶ ಸಂಚಾರವು ಶೇ. 3.4 ರಷ್ಟು ಹೆಚ್ಚಾಗಿದೆ. ದಕ್ಷಿಣ ರಾಜ್ಯದಲ್ಲಿ ಒಟ್ಟಾರೆ ಬೆಳವಣಿಗೆಗೆ ಕಾರಣವಾಗಿದ್ದು, ಶೇ. 10 ಕ್ಕಿಂತ ಹೆಚ್ಚಿನ ಏರಿಕೆಯನ್ನು ದಾಖಲಿಸಿದೆ ಎಂದು ಅಂಕಿಅಂಶ ಹೇಳುತ್ತದೆ.

ಎಎಐ ಬಿಡುಗಡೆ ಮಾಡಿದ ವಾಯು ಸಂಚಾರ ವರದಿಯ ಪ್ರಕಾರ, ಕಳೆದ ಏಪ್ರಿಲ್-ಜುಲೈ ಅವಧಿಯಲ್ಲಿ 13.72 ಕೋಟಿ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದಾರೆ, ಕಳೆದ ವರ್ಷ ಇದೇ ಅವಧಿಯಲ್ಲಿ 13.2 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದರು.

ದಕ್ಷಿಣ ಪ್ರದೇಶದ ವಿಮಾನ ನಿಲ್ದಾಣಗಳು ಮಾತ್ರ ಒಟ್ಟು 4.62 ಕೋಟಿ ಪ್ರಯಾಣಿಕರನ್ನು ದಾಖಲಿಸಿದ್ದು, ಕಳೆದ ವರ್ಷ ಇದು 4.2 ಕೋಟಿ ಪ್ರಯಾಣಿಕರಾಗಿದ್ದು, ಶೇ. 10.2 ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ.

ನಾಲ್ಕು ತಿಂಗಳಲ್ಲಿ ಒಟ್ಟು 2,62,68,697 ಭಾರತೀಯರು ಹೊರ ದೇಶಗಳಿಗೆ ವಿಮಾನಯಾನ ಮಾಡಿದ್ದಾರೆ, ಕಳೆದ ವರ್ಷ ಇದೇ ಅವಧಿಯಲ್ಲಿ ಇದು 2,48,30,147 ಆಗಿತ್ತು. ದೇಶದೊಳಗೆ ಕಳೆದ ವರ್ಷದ ಇದೇ ತಿಂಗಳುಗಳಲ್ಲಿ 10,71,76,202 ಪ್ರಯಾಣಿಕರು ಪ್ರಯಾಣಿಸಿದ್ದರೆ, ಈ ಬಾರಿ 11,08,21,774 ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಏಪ್ರಿಲ್-ಜುಲೈ 2024 ಕ್ಕೆ ಹೋಲಿಸಿದರೆ ಏಪ್ರಿಲ್-ಜುಲೈ 2025 ರ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆಯಲ್ಲಿ ಗಮನಾರ್ಹ ಬೆಳವಣಿಗೆಯನ್ನು ದಕ್ಷಿಣ ರಾಜ್ಯಗಳ ವಿಮಾನ ನಿಲ್ದಾಣಗಳು ಕಂಡಿವೆ.

ದಕ್ಷಿಣ ಭಾರತದ ವಿಮಾನ ನಿಲ್ದಾಣಗಳಲ್ಲಿ ಶಿವಮೊಗ್ಗ – 52,272 ಪ್ರಯಾಣಿಕರು (89.3% ಹೆಚ್ಚಳ), ತಿರುಚಿರಾಪಳ್ಳಿ – 2,90,775 (55% ಹೆಚ್ಚಳ), ಕೋಝಿಕೋಡ್ – 2,76,137 (15.8%), ತಿರುಪತಿ – 4,25,629 (52.1%), ಕಾನ್ಯೂರ್ – 87,28,640, 15 ಹೈದರಾಬಾದ್ – 62,981, (34.1%), ಮಧುರೈ - 4,17,325 (12.5%), ಕಡಪಾ - 22,837 (52.8%), ಹುಬ್ಬಳ್ಳಿ - 1,19,756 (22%), ರಾಜಮಂಡ್ರಿ - 11,95,532 (36.3%), ಟುಟಿಕೋರಿನ್ - 1,04,010 (23.5%) ಮತ್ತು ಕರ್ನೂಲ್ - 7,374 (35.7%)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

EVM ಬದಲು ಬ್ಯಾಲಟ್ ಪೇಪರ್ ಬಳಕೆಗೆ ನಿರ್ಧಾರ: ಸರ್ಕಾರದ ವಿರುದ್ಧ BJP ವಾಗ್ದಾಳಿ, ನಮ್ಮ ಅನುಭವದ ಮೇಲೆ ತೀರ್ಮಾನಿಸಿದ್ದೇವೆಂದ ಸಿಎಂ ಸಿದ್ದರಾಮಯ್ಯ

ಇಸ್ಲಾಂ ಎಂದರೆ ಶಾಂತಿ, ಬಸವಣ್ಣರಂತೆ ಪ್ರವಾದಿಗಳು ಕೆಲಸ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ

ಇದೆಲ್ಲಾ ಒಂದೆರಡು ತಿಂಗಳಷ್ಟೆ, ಭಾರತ ಮತ್ತೆ ಮಾತುಕತೆಗೆ ಬರಲಿದೆ, ಕ್ಷಮೆಯಾಚಿಸುತ್ತದೆ: ಅಮೆರಿಕ ವಾಣಿಜ್ಯ ಸಚಿವ ಲುಟ್ನಿಕ್

'ಇಸ್ಲಾಂಗೆ ವಿರುದ್ಧ': ದರ್ಗಾದ ಫಲಕದಲ್ಲಿನ ಅಶೋಕ ಲಾಂಛನ ವಿರೂಪಗೊಳಿಸಿದ ಸ್ಥಳೀಯರು!: Video

ಕರಾಳ ಚೀನಾಕ್ಕೆ ಭಾರತವನ್ನು ಕಳೆದುಕೊಂಡಂತೆ ಅನಿಸಿದೆ: ಜಗತ್ತಿನ ಗಮನ ಸೆಳೆದ ಡೊನಾಲ್ಡ್ ಟ್ರಂಪ್ ಪೋಸ್ಟ್!

SCROLL FOR NEXT