ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಡಿಎಂಕೆಯ ಮೈತ್ರಿ ಪಕ್ಷಗಳು ಸೀಟು ಹಂಚಿಕೆ ವ್ಯವಸ್ಥೆಯಿಂದ ತೃಪ್ತರಾಗಿಲ್ಲದಿದ್ದರೂ, ಎಐಎಡಿಎಂಕೆ ಮೈತ್ರಿಕೂಟವನ್ನು ರಚಿಸಿಕೊಂಡಿವೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಹೇಳಿದ್ದಾರೆ.
ಕೃಷ್ಣಗಿರಿ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದ ಪಳನಿಸ್ವಾಮಿ, "ವಾಸ್ತವದಲ್ಲಿ ಡಿಎಂಕೆ ಹಲವು ವರ್ಷಗಳಿಂದ ಕಾಂಗ್ರೆಸ್ನ ಗುಲಾಮನಾಗಿದೆ. ಆದರೆ ಸ್ಟಾಲಿನ್ ಎಐಎಡಿಎಂಕೆ ಬಿಜೆಪಿಯ ಗುಲಾಮ ಎಂದು ಹೇಳುತ್ತಿದೆ. ಡಿಎಂಕೆ ತಾನು ಮಹಾಮೈತ್ರಿಕೂಟವನ್ನು ಹೊಂದಿರುವುದಾಗಿ ಘೋಷಿಸುತ್ತಿದ್ದರೂ, ಎಐಎಡಿಎಂಕೆ ಎನ್ಡಿಎಯಲ್ಲಿ ಹೆಚ್ಚಿನ ಮತಬ್ಯಾಂಕ್ ಹೊಂದಿರುವ ರಾಜಕೀಯ ಪಕ್ಷಗಳನ್ನು ಹೊಂದಿದೆ ಎಂಬುದು ಸತ್ಯ ಎಂದು ತಿಳಿಸಿದ್ದಾರೆ.
ಸೀಟು ಹಂಚಿಕೆ ಮಾತುಕತೆ ವಿಳಂಬದಿಂದಾಗಿ ಅವರು ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಸಿಕೆ ನಾಯಕ ಥೋಲ್ ತಿರುಮಾವಳವನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಎಂಕೆ ಮೈತ್ರಿಕೂಟದಲ್ಲಿರುವ ಎಲ್ಲಾ ರಾಜಕೀಯ ನಾಯಕರು ಅತೃಪ್ತರಾಗಿದ್ದು , ಅಳುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
2 ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಬಂಧಿಸಲ್ಪಟ್ಟಾಗ ಡಿಎಂಕೆ ತನ್ನನ್ನು ಬೆಂಬಲಿಸಲಿಲ್ಲ, ಆದರೆ ಕನಿಮೋಳಿ ಕರುಣಾನಿಧಿಯನ್ನು ರಕ್ಷಿಸಲಾಗಿದೆ ಎಂದು ಡಿಎಂಕೆ ಮಾಜಿ ಸಚಿವ ಎ ರಾಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾದ ಆಡಿಯೋ ಸಂದೇಶವು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಯಿತು. ಡಿಎಂಕೆ ಅಧಿಕಾರಕ್ಕೆ ಬಂದರೆ, ಸ್ಟಾಲಿನ್ ತಮಿಳುನಾಡಿನ ಜನರನ್ನು ಕೈದಿಗಳಂತೆ ನಡೆಸಿಕೊಳ್ಳುತ್ತಾರೆ ಎಂದು ಪಳನಿಸ್ವಾಮಿ ಆರೋಪಿಸಿದ್ದಾರೆ.
ಧರ್ಮಪುರಿಯಲ್ಲಿ ನಂತರ ಪ್ರಚಾರ ಮಾಡಿದ ಅವರು, "ತಮಿಳರ ಹಕ್ಕುಗಳಿಗಾಗಿ ಹೋರಾಡುವುದು ನಮ್ಮ ಪ್ರಮುಖ ಸಿದ್ಧಾಂತ. 2021 ರಲ್ಲಿ, ನಾವು ಧರ್ಮಪುರಿಯಲ್ಲಿ ಅಗಾಧ ಜಯ ಸಾಧಿಸಿದ್ದೇವೆ, ಜಿಲ್ಲೆಯನ್ನು ಎಐಎಡಿಎಂಕೆಯ ಕೋಟೆಗಳಲ್ಲಿ ಒಂದನ್ನಾಗಿ ಭದ್ರಪಡಿಸಿದ್ದೇವೆ ಎಂದು ಹೇಳಿದರು.
ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ಹೆಚ್ಚಳದ ಕುರಿತು ಮಾತನಾಡಿದ ಅವರು, ಸರ್ಕಾರದ ದತ್ತಾಂಶದ ಪ್ರಕಾರ, ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಒಟ್ಟು 26,651 ಪ್ರಕರಣಗಳು ದಾಖಲಾಗಿವೆ. ಆದರೂ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಿಲ್ಲ ಎಂದು ಸ್ಟಾಲಿನ್ ಹೇಳಿಕೊಂಡಿದ್ದಾರೆ. ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, ಆ 'ಸರ್' ಯಾರು ಎಂದು ನಾವು ಇನ್ನೂ ಗುರುತಿಸಿಲ್ಲ. ನ್ಯಾಯವನ್ನು ನಿರಾಕರಿಸಲಾದ ಅನೇಕ ಅಪರಾಧಗಳನ್ನು ನಾವು ಪಟ್ಟಿ ಮಾಡಬಹುದು ಎಂದಿದ್ದಾರೆ.