ಗೀತಾ ಮುಖರ್ಜಿ 
ದೇಶ

ಇವರು ಗೀತಾ ಮುಖರ್ಜಿ, ಎಲ್ಲರ ಪ್ರೀತಿಯ 'ಗೀತಾದಿ', ಮಹಿಳಾ ಮೀಸಲಾತಿ ಕಾಯ್ದೆ ಹಿಂದಿನ ಪ್ರೇರಕ ಶಕ್ತಿ !

ಮಹಿಳಾ ಮೀಸಲಾತಿ ಮುಖ್ಯ ರಾಜಕೀಯ ಚರ್ಚೆಗೆ ಬರುವ ಬಹಳ ಹಿಂದೆಯೇ, ವಿಧಾನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚು ಬೇಕು ಎಂದು ಅವರು ಗುರುತಿಸಿದ್ದರು.

ನವದೆಹಲಿ: ಭಾರತ ಸರ್ಕಾರವು ಮಹಿಳೆಯರ ಪ್ರಾತಿನಿಧ್ಯದ ಪ್ರಶ್ನೆಯ ಕಡೆಗೆ ಗಮನ ಹರಿಸುತ್ತಿರುವ ಈ ಸಂದರ್ಭದಲ್ಲಿ, ಈ ಬೇಡಿಕೆಯ ಹಿಂದಿನ ಪ್ರಭಾವಶಾಲಿ ವ್ಯಕ್ತಿತ್ವ ಅಂದರೆ ಅವರು ಸಿಪಿಐ ಸಂಸದೆ ಗೀತಾ ಮುಖರ್ಜಿ, ಸ್ನೇಹದಿಂದ ‘ಗೀತಾದಿ’ ಎಂದು ಕರೆಯಲ್ಪಟ್ಟವರು.

ಈ ಆಲೋಚನೆ ಈಗ ಕಾನೂನು ಜಾರಿಗೆ ಸಾಗುತ್ತಿರುವ ಸಂದರ್ಭದಲ್ಲಿ, ಅವರನ್ನು ನೆನಪಿಸುವುದು ಕೇವಲ ಗೌರವ ಸಲ್ಲಿಸುವುದು ಮಾತ್ರವಲ್ಲ, ಈ ಬೇಡಿಕೆಯ ದೀರ್ಘ ಮತ್ತು ಇನ್ನೂ ಪೂರ್ಣವಾಗದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಅತ್ಯವಶ್ಯಕ. ಗೀತಾ ಮುಖರ್ಜಿ ಚುನಾವಣಾ ಲೆಕ್ಕಾಚಾರಗಳಿಗಿಂದ ಹೊರಗೆ ಆಲೋಚನೆಗಳನ್ನು ರೂಪಿಸುವ ರಾಜಕೀಯ ಪರಂಪರೆಯೊಂದಕ್ಕೆ ಸೇರಿದವರು.

ಮಹಿಳಾ ಮೀಸಲಾತಿ ಮುಖ್ಯ ರಾಜಕೀಯ ಚರ್ಚೆಗೆ ಬರುವ ಬಹಳ ಹಿಂದೆಯೇ, ವಿಧಾನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚು ಬೇಕು ಎಂದು ಅವರು ಗುರುತಿಸಿದ್ದರು.

1996ರಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತ ಸಂಯುಕ್ತ ಸಂಸದೀಯ ಸಮಿತಿಗೆ ಅಧ್ಯಕ್ಷತೆ ವಹಿಸಿದಾಗ ಅವರ ಹಸ್ತಕ್ಷೇಪ ಪ್ರಮುಖವಾಗಿತ್ತು. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ 33 ಶೇಕಡಾ ಮೀಸಲಾತಿ ನೀಡುವ ಪ್ರಸ್ತಾವನೆ ಆ ಸಮಯದಲ್ಲಿ ಬಹಳ ವಿವಾದಾಸ್ಪದವಾಗಿತ್ತು.

ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಅಸಾಧ್ಯ ಅಥವಾ ಕೇವಲ ಬಾಯಿಮಾತಿನಲ್ಲಿ ಸಾಧ್ಯವಷ್ಟೆ ಎಂದು ತಳ್ಳಿಹಾಕಿದ್ದವು. ಆದರೆ ಗೀತಾ ಮುಖರ್ಜಿ ಅವರು ಶಾಂತ ದೃಢತೆ ಮತ್ತು ಬೌದ್ಧಿಕ ಕಟ್ಟುನಿಟ್ಟಿನಿಂದ ತಮ್ಮ ಹೋರಾಟವನ್ನು ಮುಂದುವರಿಸಿದರು. ಅವರು ದೇಶದಾದ್ಯಂತ ಮಹಿಳಾ ಸಂಘಟನೆಗಳೊಂದಿಗೆ ವ್ಯಾಪಕವಾಗಿ ಸಂವಾದ ನಡೆಸಿ ಒಪ್ಪಂದ ನಿರ್ಮಾಣಕ್ಕೆ ಪ್ರಯತ್ನಿಸಿದರು.

ಪಾಂಸ್ಕುರಾ ಪೂರ್ವ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕಿಯಾಗಿ (1967–77) ಮತ್ತು ಪಾಂಸ್ಕುರಾ ಕ್ಷೇತ್ರದಿಂದ ಏಳು ಬಾರಿ ಸಂಸದೆಯಾಗಿದ್ದ ಅವರು (1980–2000), ಸಿಪಿಐಯ ಪ್ರಮುಖ ನಾಯಕಿಯಾಗಿದ್ದರು ಹಾಗೂ ರಾಷ್ಟ್ರೀಯ ಭಾರತೀಯ ಮಹಿಳಾ ಮಹಾಸಂಘದಲ್ಲಿ ಪ್ರಮುಖ ಶಕ್ತಿಯಾಗಿದ್ದರು.

ಅವರ ಪ್ರಭಾವ ಕೇವಲ ಹುದ್ದೆಗಳಿಗಷ್ಟೇ ಸೀಮಿತವಾಗಿರಲಿಲ್ಲ. ಅವರು ಸಂಸತ್ ನಲ್ಲಿ ಚರ್ಚೆಗಳು ಮತ್ತು ತಳಮಟ್ಟದ ಚಳವಳಿಗಳನ್ನು ನಡೆಸುತ್ತಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Parliament special session: ಅಗ್ನಿ ಪರೀಕ್ಷೆಯಲ್ಲಿ ಮೋದಿ ಸರ್ಕಾರ, ಇಂದು ಪಾಸ್ ಆಗುತ್ತಾ ಪ್ರಮುಖ ಮಸೂದೆಗಳು?

'ಇರಾನ್ ತನ್ನ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ, ಶಾಂತಿ ಒಪ್ಪಂದ ಹತ್ತಿರದಲ್ಲಿದೆ': Donald Trump

ಇನ್ಮುಂದೆ ನೇಚರ್ ಗೈಡ್, GPS ವಾಕಿಟಾಕಿ ಇಲ್ಲದೆ ಯಾರಿಗೂ ಚಾರಣಕ್ಕೆ ಅವಕಾಶವಿಲ್ಲ: SOP ಬಿಡುಗಡೆ ಮಾಡಿದ ಸಚಿವ ಈಶ್ವರ ಖಂಡ್ರೆ!

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ: ಮಹಿಳೆಯರದ್ದು ಪ್ರಧಾನ ಪಾತ್ರ; ಕೇವಲ ಪಾಲ್ಗೊಳ್ಳುವುದಲ್ಲ, ನಾಯಕತ್ವಕ್ಕೂ ಬೇಕು ನಾರಿ ಶಕ್ತಿ

ಕರ್ನಾಟಕ ಲೋಕಾಯುಕ್ತದ ನಾಲ್ಕು ದಶಕಗಳ ಸಾರ್ಥಕ ಪಯಣ: ಏಪ್ರಿಲ್ 18 ರಂದು ವಿಶೇಷ ಕಾರ್ಯಕ್ರಮ!

SCROLL FOR NEXT