ಅಣ್ಣಾ ಹಜಾರೆ 
ದೇಶ

ರಾಘವ್ ಚಡ್ಡಾ, ಇತರರು ಎಎಪಿ ಬಿಟ್ಟು ಹೋಗುತ್ತಿರಲಿಲ್ಲ...: ಅಣ್ಣಾ ಹಜಾರೆ ಸ್ಫೋಟಕ ಹೇಳಿಕೆ

"ಇದು ಅವರ(ಎಎಪಿ ನಾಯಕತ್ವದ) ತಪ್ಪು. ಆ ಪಕ್ಷ ಸರಿಯಾದ ಮಾರ್ಗವನ್ನು ಅನುಸರಿಸಿದ್ದರೆ, ಅವರು ಪಕ್ಷ ಬಿಟ್ಟು ಹೋಗುತ್ತಿರಲಿಲ್ಲ" ಎಂದು ಹಜಾರೆ ಹೇಳಿದರು.

ಮುಂಬೈ: ಆಮ್ ಆದ್ಮಿ ಪಕ್ಷ(ಎಎಪಿ) "ಸರಿಯಾದ" ಮಾರ್ಗವನ್ನು ಅನುಸರಿಸಿದ್ದರೆ, ರಾಘವ್ ಛಡ್ಡಾ ಮತ್ತು ಇತರ ಆರು ರಾಜ್ಯಸಭಾ ಸದಸ್ಯರು ಪಕ್ಷವನ್ನು ತ್ಯಜಿಸುತ್ತಿರಲಿಲ್ಲ ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಶುಕ್ರವಾರ ಹೇಳಿದ್ದಾರೆ.

"ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅಭಿಪ್ರಾಯ ಹೊಂದುವ ಹಕ್ಕಿದೆ. ಅವರು(ಚಡ್ಡಾ ಮತ್ತು ಇತರರು) ಕೆಲವು ತೊಂದರೆಗಳನ್ನು ಎದುರಿಸಿರಬೇಕು. ಅದಕ್ಕಾಗಿಯೇ ಅವರು ಎಎಪಿ ತೊರೆದರು" ಎಂದು ಹಜಾರೆ ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದಕ್ಕೂ ಮೊದಲು, ದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿ ರಾಜ್ಯಸಭಾ ಸದಸ್ಯರಾದ ರಾಘವ್ ಚಡ್ಡಾ ಮತ್ತು ಸಂದೀಪ್ ಪಾಠಕ್, ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷ ತೊರೆದು, ಬಿಜೆಪಿಗೆ ಸೇರುವುದಾಗಿ ಘೋಷಿಸಿದರು.

"ಇದು ಅವರ(ಎಎಪಿ ನಾಯಕತ್ವದ) ತಪ್ಪು. ಆ ಪಕ್ಷ ಸರಿಯಾದ ಮಾರ್ಗವನ್ನು ಅನುಸರಿಸಿದ್ದರೆ, ಅವರು ಪಕ್ಷ ಬಿಟ್ಟು ಹೋಗುತ್ತಿರಲಿಲ್ಲ" ಎಂದು ಹಜಾರೆ ಹೇಳಿದರು.

ಚಡ್ಡಾ ಮತ್ತು ಇತರರು ಎಎಪಿಯೊಳಗೆ ಕೆಲವು ತೊಂದರೆಗಳನ್ನು ಎದುರಿಸಿರಬೇಕು ಮತ್ತು ಅದಕ್ಕಾಗಿಯೇ ಅವರು ಹೊರಟುಹೋದರು ಎಂದು ಹಜಾರೆ ಪುನರುಚ್ಚರಿಸಿದರು.

"ಪಕ್ಷ ಸರಿಯಾದ ದಿಕ್ಕಿನಲ್ಲಿ ಹೋಗಿದ್ದರೆ, ಅವರು ಪಕ್ಷ ಬಿಡುತ್ತಿರಲಿಲ್ಲ" ಎಂದು ಹಿರಿಯ ಹೋರಾಟಗಾರ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಳ ಮೀಸಲಾತಿಗೆ ಮೂರು ಸೂತ್ರ: ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ; ಯಾರಿಗೆ ಎಷ್ಟು?

ಅದಕ್ಕಾಗಿ ನಾನು ತಮನ್ನಾ ಭಾಟಿಯಾ ಕಾಲಿಗೆ ಬೀಳಲು ಸಿದ್ಧ: ಬಾಲಿವುಡ್ ನಟ ಅನ್ನು ಕಪೂರ್

ಮಣಿಪಾಲದಲ್ಲಿ ಇದೆಂಥಾ ಅಸಹ್ಯ: ರಸ್ತೆಯಲ್ಲೇ ರೊಮ್ಯಾನ್ಸ್; ಉತ್ತರ ಭಾರತ ಜೋಡಿಗೆ ಕನ್ನಡದಲ್ಲೇ ಉಗಿದ ಸ್ಥಳೀಯರು, Video!

DC ಕ್ಯಾಂಪ್ ನಲ್ಲಿ ಭಯಾನಕ ದೃಶ್ಯ: ಯುವ ಆಟಗಾರನ ಮುಖಕ್ಕೆ ಬಡಿದ ಬಾಲ್; ಗಂಭೀರ ಗಾಯ, ಆಸ್ಪತ್ರೆ ಶಿಫ್ಟ್! Video

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಂಧನ; 87.5 ಲಕ್ಷ ರೂ ಬೆಲೆಯ ಹೈಡ್ರೋಪೋನಿಕ್ ಗಾಂಜಾ ವಶ!

SCROLL FOR NEXT