ರಾಜನಾಥ್ ಸಿಂಗ್ 
ದೇಶ

ರಾಜನಾಥ್ ಸಿಂಗ್ ದೇಶದ ಮುಂದಿನ ರಾಷ್ಟ್ರಪತಿ? ಜೂನ್ ನಲ್ಲಿ ನೇಮಕ ಸಾಧ್ಯತೆ

ರಾಷ್ಟ್ರಪತಿ ಭವನಕ್ಕೆ ರಾಜನಾಥ್ ಸಿಂಗ್ ಹೆಸರನ್ನು ಶಿಫಾರಸು ಮಾಡಲು ಆರ್ ಎಸ್ ಎಸ್ ಕೂಡಾ ಹೆಚ್ಚಿನ ಆಸಕ್ತಿ ವಹಿಸಿದೆ.

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೇಶದ ಮುಂದಿನ ರಾಷ್ಟ್ರಪತಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಜೂನ್ 2027 ರಲ್ಲಿ ಭಾರತದ ರಾಷ್ಟ್ರಪತಿಯಾಗಿ ಬಡ್ತಿ ನೀಡಲಾಗುವುದು ಎಂಬ ಗುಸುಗುಸು ಉತ್ತರ ಪ್ರದೇಶ ಬಿಜೆಪಿಯ ಪ್ರಬಲ ಠಾಕೂರ್ ಸಮುದಾಯದ ನಾಯಕರ ಗುಂಪಿನಲ್ಲಿ ಕೇಳಿಬರುತ್ತಿದೆ.

ಅಲ್ಲದೇ ರಾಷ್ಟ್ರಪತಿ ಭವನಕ್ಕೆ ರಾಜನಾಥ್ ಸಿಂಗ್ ಹೆಸರನ್ನು ಶಿಫಾರಸು ಮಾಡಲು ಆರ್ ಎಸ್ ಎಸ್ ಕೂಡಾ ಹೆಚ್ಚಿನ ಆಸಕ್ತಿ ವಹಿಸಿದೆ.

2027 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಘೋಷಿಸಿದ್ದರಿಂದ ಬ್ರಾಹ್ಮಣ ನಾಯಕರು ಅಸಮಾಧಾನಗೊಂಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಪಂಕಜ್ ಚೌಧರಿ ಈಗಾಗಲೇ ತಮ್ಮ ರಾಜೀನಾಮೆಯನ್ನು ಕಳುಹಿಸಿದ್ದು, ಅದು ಜೂನ್ ಒಳಗೆ ಅಂಗೀಕಾರವಾಗುವ ಸಾಧ್ಯತೆಯಿದೆ. ರಾಜನಾಥ್ ಸಿಂಗ್ ಅವರನ್ನು ರಾಷ್ಟ್ರಪತಿಯನ್ನಾಗಿ ನೇಮಕ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನ್ಯಾಯ ಸಿಗುತ್ತೆ ಅನ್ನೋ ನಂಬಿಕೇನೆ ಇಲ್ಲ.. ಸತ್ಯಾಗ್ರಹ ಕೂರ್ತೀನಿ': ನ್ಯಾಯಮೂರ್ತಿಗಳ ವಿರುದ್ಧವೇ Arvind Kejriwal ರಣಕಹಳೆ!

ಕುಸಿದ ಜಾಗತಿಕ ವ್ಯವಸ್ಥೆಯನ್ನು ಉಳಿಸಬಲ್ಲದೇ ಗ್ಲೋಬಲ್ ಸೌತ್? (ಜಾಗತಿಕ ಜಗಲಿ)

ಲೆಕ್ಕ ಕೊಡ್ತೀವಿ.. ಕೂಡಲೇ ಮಠ ಖಾಲಿ ಮಾಡಿ: ವಚನಾನಂದ ಶ್ರೀಗಳಿಗೆ ಟ್ರಸ್ಟ್ ತಾಕೀತು

IPL 2026: LSG vs KKR ಸ್ಫೋಟಕ ಆಟ.. ಇತಿಹಾಸ ಬರೆದ Rinku Singh, 15 ವರ್ಷಗಳ ಹಳೆಯ MS Dhoni ದಾಖಲೆ ಧೂಳಿಪಟ

ಯುದ್ಧ ಕೊನೆಗೊಳಿಸಿ, ಹಾರ್ಮುಜ್ ಜಲಸಂಧಿ ತೆರೆಯಲು 'ಹೊಸ ಪ್ರಸ್ತಾವನೆ' ಮುಂದಿಟ್ಟ ಇರಾನ್!

SCROLL FOR NEXT