2026 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ವಿಜೇತರನ್ನು ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಭೇಟಿಯಾದರು. 
ದೇಶ

ಮಾತಿಗಿಂತ ನಿಮ್ಮ ಪದಕಗಳೇ ಹೆಚ್ಚು ಸ್ಪೂರ್ತಿದಾಯಕ: Commonwealth Games 2026 ಪದಕ ವಿಜೇತರನ್ನು ಶ್ಲಾಘಿಸಿದ PM Modi

ಕ್ರೀಡಾಪಟುಗಳು ತಮ್ಮ ನಿವಾಸಕ್ಕೆ ನಿಯಮಿತವಾಗಿ ಭೇಟಿ ನೀಡುವವರಲ್ಲಿ ಪ್ರಮುಖರಾಗಿದ್ದಾರೆ. ಕಳೆದ 10ರಿಂದ 12 ವರ್ಷಗಳಿಂದ ಭಾರತಕ್ಕೆ ಗೆಲುವು ತಂದುಕೊಡಲು ಕ್ರೀಡಾಪಟುಗಳು ನಡೆಸುತ್ತಿರುವ ನಿರಂತರ ಪ್ರಯತ್ನವನ್ನು ಅವರು ಮೆಚ್ಚಿಕೊಂಡರು.

ನವದೆಹಲಿ: ದೇಶದ ಕ್ರೀಡಾ ಸಾಧನೆಯನ್ನು ಯುವಕರಿಗೆ ಸ್ಫೂರ್ತಿಯನ್ನಾಗಿ ಮಾಡಿರುವ ಕ್ರೀಡಾಪಟುಗಳ ಪದಕಗಳು, ಮಾತಿಗಿಂತ ಹೆಚ್ಚು ಪರಿಣಾಮ ಬೀರುತ್ತವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ಗ್ಲ್ಯಾಸ್ಗೋದಲ್ಲಿ ನಡೆದ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (CWG) ಅದ್ಭುತ ಸಾಧನೆಗೈದ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಭಾನುವಾರ ಭೇಟಿಯಾಗಿ ಸತ್ಕರಿಸಿದರು.

ಈ ವೇಳೆ ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಿ, ಭಾರತದ ಯುವ ಪೀಳಿಗೆಗೆ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸುವಲ್ಲಿ "ನಿಮ್ಮ ಪದಕಗಳು ಕೇವಲ ಮಾತುಗಳಿಗಿಂತ ಹೆಚ್ಚು ಸ್ಪೂರ್ತಿ ನೀಡುತ್ತವೆ" ಎಂದು ಹೆಮ್ಮೆಯಿಂದ ಹೇಳಿದರು.

ಕ್ರೀಡಾಪಟುಗಳು ತಮ್ಮ ನಿವಾಸಕ್ಕೆ ನಿಯಮಿತವಾಗಿ ಭೇಟಿ ನೀಡುವವರಲ್ಲಿ ಪ್ರಮುಖರಾಗಿದ್ದಾರೆ. ಕಳೆದ 10ರಿಂದ 12 ವರ್ಷಗಳಿಂದ ಭಾರತಕ್ಕೆ ಗೆಲುವು ತಂದುಕೊಡಲು ಕ್ರೀಡಾಪಟುಗಳು ನಡೆಸುತ್ತಿರುವ ನಿರಂತರ ಪ್ರಯತ್ನವನ್ನು ಅವರು ಮೆಚ್ಚಿಕೊಂಡರು.

ನಾನು ಸುಮಾರು 12ರಿಂದ 13 ವರ್ಷಗಳಿಂದ ಈ ಮನೆಯಲ್ಲಿ ಇದ್ದೇನೆ. ಈ ಅವಧಿಯಲ್ಲಿ ನಾನು ನಿರಂತರವಾಗಿ ಭೇಟಿಯಾಗಿರುವವರಲ್ಲಿ ಕ್ರೀಡಾಪಟುಗಳು ಪ್ರಮುಖರು. ಕಳೆದ 10ರಿಂದ 12 ವರ್ಷಗಳಲ್ಲಿ ನೀವು ಪಟ್ಟಿರುವ ಪರಿಶ್ರಮ, ಭಾರತಕ್ಕೆ ಗೆಲುವು ತಂದುಕೊಡಲು ನಡೆಸಿದ ನಿರಂತರ ಪ್ರಯತ್ನ ಹಾಗೂ ಯಶಸ್ಸಿನ ಹೊಸ ಎತ್ತರಗಳನ್ನು ತಲುಪಿದ ಪರಂಪರೆ ಶ್ಲಾಘನೀಯ ಎಂದು ತಿಳಿಸಿದರು.

ಯುವಜನರನ್ನು ಕ್ರೀಡೆಯತ್ತ ಆಕರ್ಷಿಸುವಲ್ಲಿ ಕ್ರೀಡಾಪಟುಗಳ ಸಾಧನೆ ಪ್ರಮುಖ ಪಾತ್ರ ವಹಿಸುತ್ತದೆ. ಶಾಲೆಗಳಿಗೆ ತೆರಳಿ ‘ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ’ ಎಂದು ಹೇಳುವುದಕ್ಕಿಂತ ಕ್ರೀಡಾಪಟುಗಳು ಗೆಲ್ಲುವ ಪದಕಗಳು ಯುವಕರಿಗೆ ಹೆಚ್ಚಿನ ಸ್ಫೂರ್ತಿ ನೀಡುತ್ತವೆ.

ಶಾಲೆಗಳಿಗೆ ತೆರಳಿ ‘ನೀವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ನಾವು ಹೇಳುವುದರಿಂದ ಆಗುವ ಪರಿಣಾಮಕ್ಕಿಂತ ನಿಮ್ಮ ಪದಕಗಳು ಅವರಿಗೆ ಹೆಚ್ಚಿನ ಸ್ಫೂರ್ತಿ ನೀಡುತ್ತವೆ ಎಂದು ಹೇಳಿದರು. ಇದೇ ವೇಳೆ ಪ್ರಧಾನಿ ಮೋದಿ ಹಲವು ಕ್ರೀಡಾಪಟುಗಳೊಂದಿಗೆ ವೈಯಕ್ತಿಕವಾಗಿ ಸಂವಾದ ನಡೆಸಿದರು.

ಮಹಿಳೆಯರ ಶಾಟ್‌ಪುಟ್‌ F57 ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಶರ್ಮಿಳಾ ಧನ್ಕರ್‌ ಅವರೊಂದಿಗೆ ಮಾತನಾಡಿದ ಮೋದಿ, ಅವರ ಇಬ್ಬರು ಪುತ್ರಿಯರೂ ಕ್ರೀಡಾಪಟುಗಳಾಗಲಿದ್ದಾರೆ ಎಂದು ಈ ಹಿಂದೆ ನೀಡಿದ್ದ ಭರವಸೆಯನ್ನು ನೆನಪಿಸಿಕೊಂಡರು.

“ನಿಮ್ಮ ಇಬ್ಬರು ಪುತ್ರಿಯರೂ ಕ್ರೀಡಾಪಟುಗಳಾಗಲಿದ್ದಾರೆ ಎಂದು ನೀವು ಕಳೆದ ಬಾರಿ ನನಗೆ ಭರವಸೆ ನೀಡಿದ್ದಿರಿ,” ಎಂದು ಮೋದಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶರ್ಮಿಳಾ, “ಹೌದು, ಅವರು ಇನ್ನೂ ಚಿಕ್ಕವರು. ಮುಂದಿನ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಒಂದೇ ಮನೆಯಿಂದ ಮೂರು ಪದಕಗಳನ್ನು ಗೆದ್ದು ನಿಮಗೆ ತೋರಿಸುತ್ತೇವೆ,” ಎಂದು ಹೇಳಿದರು.

ಮಹಿಳೆಯರ ಡಿಸ್ಕಸ್‌ ಥ್ರೋ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಸೀಮಾ ಕಲಿರಾಮ್ನಾ ಅವರೊಂದಿಗೂ ಮೋದಿ ಹಾಸ್ಯಮಯವಾಗಿ ಮಾತನಾಡಿದರು. ಪ್ರಧಾನಿಯನ್ನು ಭೇಟಿಯಾಗುವಾಗ ತಾವು ಆತಂಕಗೊಂಡಿದ್ದಾಗಿ ಸೀಮಾ ಹೇಳಿದರು.

“ಸರ್‌, ನನ್ನ ಹೃದಯ ಬಡಿತ ಹೆಚ್ಚಾಗಿದೆ,” ಎಂದು ಸೀಮಾ ಹೇಳಿದಾಗ, ಮೋದಿ, “ಚಿಂತಿಸಬೇಡಿ. ನಿಮ್ಮ ಭಾಷಣಕ್ಕೂ ಒಂದು ಪದಕ ಸಿಗಲಿದೆ!” ಎಂದು ನಗುತ್ತಾ ಪ್ರತಿಕ್ರಿಯಿಸಿದರು.

ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಪದಕಗಳನ್ನು ಗೆಲ್ಲಬೇಕಾದರೆ ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಬೆಳೆಸುವುದು ಅತ್ಯಗತ್ಯ ಎಂದು ಪ್ರಧಾನಿ ಒತ್ತಿ ಹೇಳಿದರು.

ಕ್ರೀಡಾ ಮೂಲಸೌಕರ್ಯ ಒಂದು ಭಾಗ ಮಾತ್ರ. ದೇಶವು ಪದಕಗಳನ್ನು ಗೆಲ್ಲಬೇಕಾದರೆ ‘ಕ್ರೀಡಾ ಸಂಸ್ಕೃತಿ’ ನಿರ್ಮಾಣವಾಗಬೇಕು. ಸ್ನೇಹಿತರೇ, ನೀವು ಅತ್ಯುತ್ತಮ ಸಾಧನೆ ಮಾಡಿದ್ದೀರಿ ಮತ್ತು ದೇಶಕ್ಕೆ ಕೀರ್ತಿ ತಂದಿದ್ದೀರಿ. ನಿಮ್ಮೆಲ್ಲರಿಗೂ ಅಭಿನಂದನೆಗಳು,” ಎಂದು ಮೋದಿ ಹೇಳಿದರು.

ಮುಂದೆಯೂ ಕ್ರೀಡಾಪಟುಗಳು ಯಶಸ್ಸು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ, ಮತ್ತಷ್ಟು ಗೆಲುವುಗಳ ಬಳಿಕ ತಮ್ಮ ನಿವಾಸದಲ್ಲಿ ಮತ್ತೆ ಭೇಟಿಯಾಗುವ ನಿರೀಕ್ಷೆ ವ್ಯಕ್ತಪಡಿಸಿದರು.

ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ ಸ್ಥಾನವನ್ನು ಭಾರತ 39 ಪದಕಗಳನ್ನು ಮುಡಿಗೇರಿಸಿಕೊಂಡಿದ್ದು, ಇದರಲ್ಲಿ 13 ಚಿನ್ನ, 17 ಬೆಳ್ಳಿ ಮತ್ತು 9 ಕಂಚಿನ ಪದಕಗಳು ಸೇರಿವೆ. ಒಟ್ಟಾರೆ ಪದಕ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿದೆ.

11 ದಿನಗಳ ಕ್ರೀಡಾಕೂಟದ ಸಮಾರೋಪದ ಬಳಿಕ ಸ್ಕಾಟ್ಲೆಂಡ್‌ ಕಾಮನ್‌ವೆಲ್ತ್‌ ಗೇಮ್ಸ್‌ ಧ್ವಜ ಹಾಗೂ ಸಾಂಕೇತಿಕ ಬ್ಯಾಟನ್‌ ಅನ್ನು ಭಾರತಕ್ಕೆ ಹಸ್ತಾಂತರಿಸಿತು. 2030ರಲ್ಲಿ ಕ್ರೀಡಾಕೂಟದ ಶತಮಾನೋತ್ಸವ ಆವೃತ್ತಿಯನ್ನು ಭಾರತ ಅಹಮದಾಬಾದ್‌ನಲ್ಲಿ ಆಯೋಜಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಶಾಲೆಗಳಿಗೆ ಯೂಟ್ಯೂಬರ್‌ಗಳು, ಸೋಷಿಯಲ್ ಮೀಡಿಯಾ ಮಂದಿಗೆ ನೋ ಎಂಟ್ರಿ: ಉತ್ತರ ಪ್ರದೇಶ ಸರ್ಕಾರದ ಖಡಕ್ ಆದೇಶ

'ಬಿಜೆಪಿಗೆ ಖುಷಿ ಕೊಡುವ ಹೇಳಿಕೆ ನೀಡಬೇಡಿ': Rahul Gandhi ಕುರಿತ ಕಾಂಗ್ರೆಸ್ ಸಂಸದ ಶಶಿತರೂರ್ ಹೇಳಿಕೆಗೆ KC ವೇಣುಗೋಪಾಲ್ ಖಡಕ್ ವಾರ್ನಿಂಗ್

'Toxic': ಸಿನಿಮಾ ಮಾಡುವುದು ಸುಲಭವಲ್ಲ, ಇಡೀ ಪ್ರಪಂಚದ ವಿರುದ್ಧ ಯುದ್ಧಕ್ಕೆ ಹೋದಂತೆ': ವದಂತಿಗಳ ನಡುವೆ ಆ ವ್ಯಕ್ತಿ ಬಂಡೆಯಂತೆ ನಿಂತರು- ಯಶ್!