ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್- ತಮಿಳುನಾಡು ಸಿಎಂ ವಿಜಯ್ online desk
ದೇಶ

ತಂದೆ ಎಲ್ಲಿದ್ದಾರೆ ಅಂತ ತಾಯಿನ ಕೇಳಿ; ವಿಧಾನಸಭೆಯಲ್ಲಿ ಹುಡುಕಬೇಡಿ; CM Vijay ಬಗ್ಗೆ ಬಿಜೆಪಿ ಅಧ್ಯಕ್ಷರ ಹೇಳಿಕೆ ವಿವಾದಕ್ಕೆ ಗುರಿ!

ನಾಗೇಂದ್ರನ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ರಾಜ್ಯ ಸಚಿವ ಎ ರಾಜಮೋಹನ್, ನಾಗೇಂದ್ರ ಅವರದ್ದು "ಅನಾಗರಿಕ ಮತ್ತು ಅನುಚಿತ" ವರ್ತನೆ ಎಂದು ಹೇಳಿದ್ದಾರೆ.

ಚೆನ್ನೈ: "ಯಾರಾದರೂ ತಮ್ಮ ತಂದೆ ಎಲ್ಲಿದ್ದಾರೆ" ಎಂದು ತಿಳಿದುಕೊಳ್ಳಲು ಬಯಸಿದರೆ, ವಿಧಾನಸಭೆಯಲ್ಲಿ ಉತ್ತರವನ್ನು ಹುಡುಕುವ ಬದಲು ಮನೆಯಲ್ಲಿ ತಮ್ಮ ತಾಯಿಯನ್ನು ಕೇಳಬೇಕು ಎಂದು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರನ್ನು ಟೀಕಿಸುವ ಮೂಲಕ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಶನಿವಾರ ರಾಜಕೀಯ ವಿವಾದಕ್ಕೆ ಗುರಿಯಾಗಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಚೇರಿ ಕಮಲಾಲಯದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ನಾಗೇಂದ್ರನ್, ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಅವರನ್ನು ಗುರಿಯಾಗಿಸಿಕೊಂಡು ವಿಧಾನಸಭೆಯಲ್ಲಿ ಸಿಎಂ ವಿಜಯ್ ಹೇಳಿದ್ದ "ಕುಟ್ಟಿ ಕಥೈ" (ಸಣ್ಣ ಕಥೆ) ಗೆ ಪ್ರತಿಕ್ರಿಯಿಸುತ್ತಿರುವುದಾಗಿ ಹೇಳಿದರು.

ವಿಪಕ್ಷ ನಾಯಕ ಉದಯ ನಿಧಿ ಸ್ಟ್ಯಾಲಿನ್ ಹಾಗೂ ಡಿಎಂಕೆ ಅಧ್ಯಕ್ಷ ಎಂಕೆ ಸ್ಟ್ಯಾಲಿನ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದ ವಿಜಯ್, ತಂದೆ ಎಲ್ಲಿದ್ದಾರೆ? ಎಂದು ಪ್ರಶ್ನಿಸಿ ಸ್ಟ್ಯಾಲಿನ್ ಅವರ ಸೋಲನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದರು.

ಸಿಎಂ ವಿಜಯ್ ಅವರು ಸದನದಲ್ಲಿ "ತಂದೆ" ಎಂದು ಪದೇ ಪದೇ ಉಲ್ಲೇಖಿಸಿದ್ದನ್ನು ಅಪಹಾಸ್ಯ ಮಾಡಿದ ನಾಗೇಂದ್ರನ್, ವಿಧಾನಸಭೆಯಲ್ಲಿ "ತಂದೆ ಎಲ್ಲಿದ್ದಾರೆ?" ಎಂದು ಕೇಳುವುದರಿಂದ ಉತ್ತರ ಸಿಗುವುದಿಲ್ಲ ಮತ್ತು ಬದಲಿಗೆ ಮನೆಗೆ ಹೋಗಿ ತಾಯಿಯನ್ನು ಕೇಳಬೇಕು ಎಂದು ಹೇಳಿದರು.

ಏಪ್ರಿಲ್ 2026 ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಸೋಲಿನ ನಂತರ ತಮಿಳುನಾಡು ಮುಖ್ಯಮಂತ್ರಿ ವಿಧಾನಸಭೆಯಲ್ಲಿ "ಕುಟ್ಟಿ ಕಥೈ" (ಸಣ್ಣ ಕಥೆ)ಯನ್ನು ಹೇಳಿದ್ದರು, ಕೊಳತ್ತೂರಿನಲ್ಲಿ ಡಿಎಂಕೆ ಮುಖ್ಯಸ್ಥರ ಸೋಲಿಗೆ ಸ್ಪಷ್ಟ ಸೂಚನೆಯಾಗಿ ಉದಯನಿಧಿ ಸ್ಟಾಲಿನ್ ಅವರ ತಂದೆ ಎಲ್ಲಿದ್ದಾರೆ ಎಂಬುದನ್ನು ಹಾಸ್ಯಮಯವಾಗಿ ಉಲ್ಲೇಖಿಸಿದ್ದರು.

ಡಿಎಂಕೆ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಆ ಸಮಯದಲ್ಲಿ ವಿಜಯ್ ಅವರ ಹೇಳಿಕೆಗಳನ್ನು ಟೀಕಿಸಿದ್ದವು. ಸಿಎಂ ವಿಜಯ್ ಅವರ ಅವಹೇಳನಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ, ವಿಧಾನಸಭೆಯಲ್ಲಿ ಇಲ್ಲದಿದ್ದರೂ ಜನರ ಹೃದಯದಲ್ಲಿ ಉಳಿದಿದ್ದೇನೆ ಎಂದು ಹೇಳಿದ್ದರು.

ಬಿಜೆಪಿ ನಾಯಕನ ಹೇಳಿಕೆಗೆ ಟಿವಿಕೆ, ಅಣ್ಣಾಮಲೈ ಟೀಕೆ, ಖಂಡನೆ

ರಾಜ್ಯ ಬಿಜೆಪಿ ಮುಖ್ಯಸ್ಥರ ಹೇಳಿಕೆಗಳನ್ನು ಟಿವಿಕೆ ನಾಯಕ, ಸಚಿವ ಎ ರಾಜಮೋಹನ್ ಮತ್ತು ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಖಂಡಿಸಿದ್ದಾರೆ.

ನಾಗೇಂದ್ರನ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ರಾಜ್ಯ ಸಚಿವ ಎ ರಾಜಮೋಹನ್, ನಾಗೇಂದ್ರ ಅವರದ್ದು "ಅನಾಗರಿಕ ಮತ್ತು ಅನುಚಿತ" ವರ್ತನೆ ಎಂದು ಹೇಳಿದ್ದಾರೆ.

ಪ್ರಚೋದನೆಗಳು ಅಥವಾ ವೈಯಕ್ತಿಕ ದಾಳಿಗಳ ಹೊರತಾಗಿಯೂ ರಾಜಕೀಯ ಸಭ್ಯತೆಯನ್ನು ಕಾಪಾಡಿಕೊಳ್ಳಲು ವಿಜಯ್ ನಿರಂತರವಾಗಿ ತಮ್ಮ ಸಹೋದ್ಯೋಗಿಗಳನ್ನು ಕೇಳಿಕೊಂಡಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ. ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದು, ನಾಗೇಂದ್ರ ಅವರ ಹೇಳಿಕೆಗಳು ರಾಜಕೀಯ ನಾಗರಿಕತೆಯ ಮಿತಿಗಳನ್ನು ಮೀರಿದೆ ಎಂದು ಹೇಳಿದರು.

ಸರ್ಕಾರವನ್ನು ಪ್ರಶ್ನಿಸುವುದು ಮತ್ತು ರಾಜಕೀಯ ಭಿನ್ನಾಭಿಪ್ರಾಯದಲ್ಲಿ ತೊಡಗುವುದು ಪ್ರಜಾಪ್ರಭುತ್ವದ ಸಂವಾದದ ಕಾನೂನುಬದ್ಧ ಭಾಗಗಳಾಗಿವೆ ಎಂದು ಅಣ್ಣಾಮಲೈ ಹೇಳಿದರು. ಆದರೆ ನಾಯಕನ ಕುಟುಂಬವನ್ನು, ವಿಶೇಷವಾಗಿ ಅವರ ತಾಯಿಯನ್ನು ಒಳಗೊಂಡ ವೈಯಕ್ತಿಕ ದಾಳಿಗಳು ಸ್ವೀಕಾರಾರ್ಹವಲ್ಲ. ಇಂತಹ ಹೇಳಿಕೆಗಳು ಯುವ ಪೀಳಿಗೆಯಲ್ಲಿ ಪ್ರೋತ್ಸಾಹಿಸಬಾರದ ಒಂದು ಪ್ರತಿಗಾಮಿ ಮತ್ತು "ಮೂರನೇ ದರ್ಜೆಯ" ರಾಜಕೀಯ ರೂಪವೆಂದು ಅಣ್ಣಾಮಲೈ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಧಾನಸೌಧದಲ್ಲಿ 'ಫ್ರೀಡಂ ಹಬ್ಬ: ಈ ಮೂರು ನಿಲ್ದಾಣದಲ್ಲಿ ಮೆಟ್ರೋ ನಿಲುಗಡೆ ಇಲ್ಲ!

Hockey World Cup 2026: ಸ್ವಾತಂತ್ರ್ಯ ದಿನಾಚರಣೆಯಂದೇ ಭಾರತ ಶುಭಾರಂಭ, ವೇಲ್ಸ್ ವಿರುದ್ಧ 3-1 ಅಂತರದ ಭರ್ಜರಿ ಜಯ

India vs Sri Lanka 1st Test: ಕನ್ನಡಿಗರ ಅರ್ಭಟ, ಪಡಿಕ್ಕಲ್ ಚೊಚ್ಚಲ ಶತಕ, ರಾಹುಲ್ ಅರ್ಧಶತಕದೊಂದಿಗೆ ಭಾರತಕ್ಕೆ ಮೇಲುಗೈ!

‘ಯುವಕರು ದೇಶದ ಡೆಮೋಗ್ರಾಫಿಕ್ ಡಿವಿಡೆಂಡ್, ಯುವಶಕ್ತಿಯ ಸರಿಯಾಗಿ ಬಳಸಿದರೆ ದೇಶಕ್ಕೆ ಅಪಾರ ಲಾಭ': Mohan Bhagwat

ತುಂಗಭದ್ರಾ ನೀರು ಹಂಚಿಕೆ ವಿವಾದ: ಆಂಧ್ರಪ್ರದೇಶದತ್ತ ಹರಿಯುತ್ತಿದ್ದ ನೀರು ತಡೆದ ಬಳ್ಳಾರಿ ರೈತರು, Video