ದೆಹಲಿಯಲ್ಲಿ ಪರೀಕ್ಷಾ ಪೆ ಚರ್ಚಾ 2026 ರಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ  
ದೇಶ

Pariksha Pe Charcha 2026: ಅಗ್ಗದಲ್ಲಿ ಡೇಟಾ ಸಿಗುತ್ತದೆ ಎಂದು ಇಂಟರ್ನೆಟ್ ಲ್ಲಿ ಸಮಯ ಕಳೆಯಬೇಡಿ: ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ನೀಡಿದ ಸಲಹೆಗಳೇನು?-Video

ಇಂದು ದೆಹಲಿಯ ತಮ್ಮ ನಿವಾಸದಲ್ಲಿ ದೇಶದ ಹಲವು ರಾಜ್ಯಗಳಿಂದ ಬಂದ ಆಯ್ದ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೇಶದಲ್ಲಿ ಇಂದು ಡೇಟಾ ಅಗ್ಗದ ದರದಲ್ಲಿ ಸಿಗುತ್ತಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಇಂಟರ್ನೆಟ್‌ನಲ್ಲಿ ಸಮಯ ವ್ಯರ್ಥ ಮಾಡಬೇಡಿ, ನಿಮ್ಮ ಜೀವನ ಮತ್ತು ಶೈಕ್ಷಣಿಕ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಶಿಕ್ಷಣವು ಮಕ್ಕಳಿಗೆ ಹೊರೆ ಎನಿಸಬಾರದು, ಅರೆಮನಸ್ಸಿನಿಂದ ಕಲಿತರೆ ವಿದ್ಯೆ ತಲೆಗೆ ಹತ್ತುವುದಿಲ್ಲ, ಆಸಕ್ತಿಯಿಲ್ಲದಿದ್ದರೆ ಶಿಕ್ಷಣವು ಜೀವನವನ್ನು ಯಶಸ್ವಿಗೊಳಿಸುವುದಿಲ್ಲವಾದ್ದರಿಂದ ಎಲ್ಲರೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು 'ಪರೀಕ್ಷಾ ಪೆ ಚರ್ಚಾ 2026' ನ ಒಂಬತ್ತನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಸಲಹೆ ನೀಡಿದರು.

ಇಂದು ದೆಹಲಿಯ ತಮ್ಮ ನಿವಾಸದಲ್ಲಿ ದೇಶದ ಹಲವು ರಾಜ್ಯಗಳಿಂದ ಬಂದ ಆಯ್ದ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ, ನಮ್ಮ ಗುರಿ ತಲುಪಬಹುದಾದದ್ದಾಗಿರಬೇಕು, ಹಾಗೆಂದು ಸುಲಭವಾಗಿ ಸಾಧಿಸಲಾಗದಂತಿರಬೇಕು. ಮನಸ್ಸನ್ನು ಪಳಗಿಸಿ, ಮನಸ್ಸಿನ ಜೊತೆ ಸಂಪರ್ಕ ಹೊಂದಿ, ನೀವು ಅಧ್ಯಯನ ಮಾಡಲು ಅಗತ್ಯವಿರುವ ವಿಷಯಗಳನ್ನು ಇಟ್ಟುಕೊಳ್ಳಿ. ಆಗ ನೀವು ಯಾವಾಗಲೂ ಯಶಸ್ಸನ್ನು ಕಾಣುವಿರಿ" ಎಂದರು.

ಮೋಜಿಗಾಗಿ ಆಡಿ ಸಮಯ ವ್ಯರ್ಥ ಮಾಡಬೇಡಿ

ನಿಮಗೆ ಮೊಬೈಲ್ ನಲ್ಲಿ ಗೇಮ್ಸ್ ಆಡಲು ಖುಷಿಯಾಗಬಹುದು, ಆದರೆ ಈಗ ಪರೀಕ್ಷಾ ಸಮಯ, ಅಗ್ಗದ ದರದಲ್ಲಿ ಡೇಟಾ ಸಿಗುತ್ತದೆ ಎಂಬ ಕಾರಣಕ್ಕೆ ಸಮಯ ಕಳೆಯಲು ಅದರಲ್ಲಿ ತೊಡಗಿಕೊಳ್ಳಬೇಡಿ. ಮೋಜಿಗಾಗಿ ಅದನ್ನು ಮಾಡಬೇಡಿ. ಹಣಕ್ಕಾಗಿ ಆನ್ ಲೈನ್ ಗೇಮ್ಸ್ ನಲ್ಲಿ ತೊಡಗಿಸಿಕೊಳ್ಳುವವರು ಹಾಳಾಗುತ್ತಾರೆ. ನಾವು ದೇಶದಲ್ಲಿ ಜೂಜಾಟವನ್ನು ಪ್ರೋತ್ಸಾಹಿಸಬೇಕಾಗಿಲ್ಲ. ನಾನು ಆನ್‌ಲೈನ್ ಜೂಜಾಟದ ವಿರುದ್ಧ ಕಾನೂನು ಮಾಡಿದ್ದೇನೆ" ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ನಾನು ಪ್ರಧಾನಿಯಾಗಿದ್ದೇನೆ. ಆದರೂ, ಜನರು ನನಗೆ ವಿಭಿನ್ನ ರೀತಿಯಲ್ಲಿ ಕೆಲಸ ಮಾಡಲು ಹೇಳುತ್ತಾರೆ. ಪ್ರತಿಯೊಬ್ಬರೂ ತಮ್ಮದೇ ಆದ ಮಾದರಿಯನ್ನು ಹೊಂದಿದ್ದಾರೆ. ಕೆಲವರು ಬೆಳಗ್ಗೆ, ಕೆಲವರು ರಾತ್ರಿಯಲ್ಲಿ ಉತ್ತಮವಾಗಿ ಅಧ್ಯಯನ ಮಾಡುತ್ತಾರೆ. ನಿಮಗೆ ಯಾವುದು ಸರಿಹೊಂದುತ್ತದೆಯೋ ಅದನ್ನು ನಂಬಿರಿ. ಆದರೆ ಸಲಹೆಯನ್ನು ಸಹ ತೆಗೆದುಕೊಳ್ಳಿ, ಅದು ನಿಮಗೆ ಪ್ರಯೋಜನವನ್ನು ನೀಡಿದರೆ, ಅದನ್ನು ನಿಮ್ಮ ಜೀವನ ರಚನೆಗೆ ಸೇರಿಸಿಕೊಳ್ಳಿ ಎಂದರು.

'ಪರೀಕ್ಷಾ ಪೆ ಚರ್ಚಾ'ದಲ್ಲಿ ಕೆಲವು ವಿಷಯಗಳನ್ನು ಬದಲಾಯಿಸಿದ್ದೇನೆ, "ನಾನು 'ಪರೀಕ್ಷಾ ಪೆ ಚರ್ಚಾ'ವನ್ನು ಪ್ರಾರಂಭಿಸಿದಾಗ, ಒಂದು ಮಾದರಿ ಇತ್ತು. ಈಗ, ಕ್ರಮೇಣ, ನಾನು ಅದನ್ನು ಬದಲಾಯಿಸುತ್ತಿದ್ದೇನೆ. ಈ ಬಾರಿ, ನಾನು ಅದನ್ನು ವಿವಿಧ ರಾಜ್ಯಗಳಲ್ಲಿಯೂ ಮಾಡಿದ್ದೇನೆ. ಆದರೆ ಮೂಲ ಮಾದರಿಯನ್ನು ಕೈಬಿಡಲಿಲ್ಲ ಎಂದರು.

ಬೆಳವಣಿಗೆಗೆ ಪ್ರಮುಖವಾದ ಅಧ್ಯಯನ, ವಿಶ್ರಾಂತಿ, ಕೌಶಲ್ಯ ಮತ್ತು ಹವ್ಯಾಸಗಳನ್ನು ಸಮತೋಲನಗೊಳಿಸಲು ಪ್ರಧಾನ ಮಂತ್ರಿಗಳು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎರಡು ಕೌಶಲ್ಯಗಳಿವೆ: ಜೀವನ ಕೌಶಲ್ಯ ಮತ್ತು ವೃತ್ತಿಪರ ಕೌಶಲ್ಯಗಳು. ಎರಡೂ ಒಟ್ಟಿಗೆ ಇರುತ್ತವೆ ಎಂದು ನಾನು ಹೇಳುತ್ತೇನೆ. ಆದ್ದರಿಂದ, ಕೌಶಲ್ಯವು ಜ್ಞಾನದಿಂದ ಪ್ರಾರಂಭವಾಗುತ್ತದೆ. ಒಬ್ಬ ನಾಯಕ ಹುಟ್ಟುಹಬ್ಬದಂದು ನನಗೆ ಕರೆ ಮಾಡಿ, "ನೀವು 75 ವರ್ಷಗಳನ್ನು ಪೂರ್ಣಗೊಳಿಸಿದ್ದೀರಿ, ಇನ್ನೂ 25 ವರ್ಷಗಳು ಉಳಿದಿವೆ" ಎಂದು ಹೇಳಿದ್ದಾಗಿ ಮೋದಿ ನೆನಪಿಸಿಕೊಂಡರು.

ಆದರೆ ನಾನು ಹಿಂದಿನದನ್ನು ಎಣಿಸುವುದಿಲ್ಲ. ಮುಂದೆ ಉಳಿದಿರುವ ಸಮಯವನ್ನು ಎಣಿಸುತ್ತೇನೆ.ನಿಮಗೂ ಅದನ್ನೇ ಹೇಳುತ್ತೇನೆ, ಹಿಂದಿನದನ್ನು ಯೋಚಿಸಬೇಡಿ. ನಿಮ್ಮ ಮುಂದೆ ಇರುವುದನ್ನು ಬದುಕಲು ಪ್ರಯತ್ನಿಸಿ" ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಸಕ್ತ ಸಾಲಿನ ಅಂತಿಮ ದ್ವೈಮಾಸಿಕ ಹಣಕಾಸು ನೀತಿ ಪ್ರಕಟ: ರೆಪೊ ದರ ಯಥಾಸ್ಥಿತಿ ಮುಂದುವರಿಕೆ

T20 World Cup 2026: ಟೀಂ ಇಂಡಿಯಾಗೆ ಸಂಕಷ್ಟ; ಪಂದ್ಯಾವಳಿಯಿಂದಲೇ ಹೊರಗುಳಿದ ಹರ್ಷಿತ್ ರಾಣಾ!

T20 World Cup 2026: 'ಭಾರತ ವಿರುದ್ಧ ಪಂದ್ಯ ಬಹಿಷ್ಕಾರ; ಪಾಕಿಸ್ತಾನ ಯು-ಟರ್ನ್ ತೆಗೆದುಕೊಳ್ಳಲಿದೆ ಎಂದ ಬಿಸಿಸಿಐ ಮಾಜಿ ಆಯ್ಕೆದಾರ

ಗೋವಾ ಬೀಚ್‌ಗಳಲ್ಲಿ ವಿದೇಶಿಯರೊಂದಿಗೆ ಬಲವಂತವಾಗಿ ಸೆಲ್ಫಿ ತೆಗೆದುಕೊಂಡರೆ ಸ್ಥಳದಲ್ಲೇ ಬಂಧನ!

ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾಂಸ ಪತ್ತೆ: ಭಕ್ತರ ಭಾರೀ ಆಕ್ರೋಶ, ಪೊಲೀಸ್ ತನಿಖೆ

SCROLL FOR NEXT