ಏರ್ ಇಂಡಿಯಾ ಸಾಂದರ್ಭಿಕ ಚಿತ್ರ 
ದೇಶ

ಯೋಗ್ಯತಾ ಪರವಾನಗಿ ಇಲ್ಲದೆ ಎಂಟು ಬಾರಿ ವಿಮಾನ ಹಾರಾಟ: ಏರ್ ಇಂಡಿಯಾಕ್ಕೆ 1 ಕೋಟಿ ರೂ.ದಂಡ!

ಏರ್ ಇಂಡಿಯಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 2025ರಲ್ಲಿ ಸ್ವಯಂ ಪ್ರೇರಣೆಯಿಂದ ವರದಿಯಾದ ಘಟನೆಗೆ ಸಂಬಂಧಿಸಿದಂತೆ ಡಿಜಿಸಿಎ ಆದೇಶವನ್ನು ಸ್ವೀಕರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ನವದೆಹಲಿ: ವಿಮಾನಯಾನ ಯೋಗ್ಯತಾ ಪರವಾನಗಿ ಇಲ್ಲದೆ ಕಳೆದ ವರ್ಷ ಎಂಟು ಬಾರಿ ಏರ್ ಬಸ್ A320 ವಿಮಾನವನ್ನು ಚಲಾಯಿಸಿದ್ದಕ್ಕಾಗಿ ಏರ್ ಇಂಡಿಯಾಕ್ಕೆ 110,350 ಯುಎಸ್ ಡಾಲರ್ ಸುಮಾರು 1 ಕೋಟಿ ರೂ. ದಂಡವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA)ವಿಧಿಸಿದೆ.

ಕಳೆದ ವರ್ಷ ಡಿಸೆಂಬರ್ 2 ರಂದು ಏರ್ ಇಂಡಿಯಾ ಕನಿಷ್ಠ ಎಂಟು ಮಾರ್ಗಗಳಲ್ಲಿ ಅಗತ್ಯವಾದ ಯೋಗ್ಯತಾ ಪರವಾನಗಿ ಇಲ್ಲದೆ A320 ನಿಯೋ ವಿಮಾನವನ್ನು ಚಲಾಯಿಸಿದ ಘಟನೆಯ ಬಗ್ಗೆ DGCA ತನಿಖೆ ನಡೆಸುತ್ತಿದೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ಏರ್ ಇಂಡಿಯಾಕ್ಕೆ 1 ಕೋಟಿ ರೂಪಾಯಿ ದಂಡ ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.

ಏರ್ ಇಂಡಿಯಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 2025ರಲ್ಲಿ ಸ್ವಯಂ ಪ್ರೇರಣೆಯಿಂದ ವರದಿಯಾದ ಘಟನೆಗೆ ಸಂಬಂಧಿಸಿದಂತೆ ಡಿಜಿಸಿಎ ಆದೇಶವನ್ನು ಸ್ವೀಕರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಎಲ್ಲಾ ಅಂತರಗಳನ್ನು ತೃಪ್ತಿಕರವಾಗಿ ಪರಿಹರಿಸಲಾಗಿದೆ ಮತ್ತು ಪ್ರಾಧಿಕಾರದೊಂದಿಗೆ ಹಂಚಿಕೊಳ್ಳಲಾಗಿದೆ. ಕಾರ್ಯಾಚರಣೆಯ ಸಮಗ್ರತೆ ಮತ್ತು ಸುರಕ್ಷತೆಯ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬದ್ದತೆಯಲ್ಲಿ ಏರ್ ಇಂಡಿಯಾ ಅಚಲವಾಗಿದೆ ಎಂದು ತಿಳಿಸಿದೆ.

ಎಂಟು ಮಾರ್ಗಗಳಲ್ಲಿ ಯೋಗ್ಯತಾ ಪರವಾನಗಿ ಇಲ್ಲದೆ (ARC) A320 ವಿಮಾನದ ಹಾರಾಟದ ಕುರಿತು ನವೆಂಬರ್ 26, 2025 ರಂದು ಏರ್‌ಲೈನ್ DGCA ಗೆ ಮಾಹಿತಿ ನೀಡಿದೆ.

ವಿಮಾನಕ್ಕೆ ಸಂಬಂಧಿಸಿದ ನಿರ್ವಹಣಾ ದಾಖಲೆಗಳು, ಭೌತಿಕ ಸ್ಥಿತಿ ಮತ್ತು ಎಲ್ಲಾ ಯೋಗ್ಯತೆಯ ಮಾನದಂಡಗಳ ಸಮಗ್ರ ಪರಿಶೀಲನೆಯ ನಂತರ ಪರವಾನಗಿ ನೀಡಲಾಗುತ್ತದೆ. ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಈ ಹಿಂದೆ ಅನೇಕ ಬಾರಿ ನಿಯಮ ಉಲ್ಲಂಘನೆಗಳಿಗಾಗಿ ಡಿಜಿಸಿಎಯಿಂದ ಕ್ರಮಗಳನ್ನು ಎದುರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಧಿಕಾರಿ ವರ್ಗಾವಣೆಗಾಗಿ ಸಿಎಂ ಸಿದ್ದರಾಮಯ್ಯರ ನಕಲಿ ಟಿಪ್ಪಣಿ: ಪೊಲೀಸ್ ಕೇಸ್ ದಾಖಲು!

ಬಾಬರ್‌ನ ಗೌರವಿಸಿ ವಂದೇ ಮಾತರಂ ವಿರೋಧಿಸುವವರಿಗೆ ಭಾರತದಲ್ಲಿ ನೆಲೆಸುವ ಹಕ್ಕಿಲ್ಲ: ಸಿಎಂ ಯೋಗಿ ಆದಿತ್ಯನಾಥ್

ಹೊಸ PMO ಕಚೇರಿ 'ಸೇವಾ ತೀರ್ಥ' ಕಟ್ಟಡಕ್ಕೆ ಪ್ರಧಾನಿ ಮೋದಿ ಸ್ಥಳಾಂತರ: ಮೊದಲ ದಿನವೇ ಹಲವು ಪ್ರಮುಖ ನಿರ್ಧಾರ!

ಸಾಹಸಸಿಂಹ, ಏಜೆಂಟ್ ಅಮರ್ ಚಿತ್ರ ಖ್ಯಾತಿಯ ನಿರ್ದೇಶಕ ಜೋ ಸೈಮನ್ ಹೃದಯಾಘಾತದಿಂದ ನಿಧನ

ಸೆಂಟ್ರಲ್ ಏಜೆನ್ಸಿಗಳ ಒತ್ತಡದಿಂದ NCP ತೊರೆದಿದ್ದ ಅಜಿತ್ ಪವಾರ್, ಮತ್ತೆ ಎರಡು ಬಣಗಳ ವಿಲೀನ ಬಯಸಿದ್ದರು: NCP SP ನಾಯಕ

SCROLL FOR NEXT