ನಟ ಅಮೀರ್ ಖಾನ್ 
ದೇಶ

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಮತದಾನ ಬಳಿಕ 'ಭಾಷಾ ವಿವಾದ'ದ ಕಿಡಿ ಹೊತ್ತಿಸಿದ ನಟ ಅಮೀರ್ ಖಾನ್!

ಮತ ಚಲಾಯಿಸಿದ ಬಳಿಕ ಮತದಾನದ ಮಹತ್ವದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಟ ಅಮೀರ್ ಖಾನ್, ಮತಗಟ್ಟೆಯಲ್ಲಿನ ವ್ಯವಸ್ಥೆಗಳನ್ನು ಶ್ಲಾಘಿಸಿದರು.

ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ಅಮೀರ್ ಖಾನ್ ಗುರುವಾರ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಮತ ಚಲಾಯಿಸಿದ ಬಳಿಕ ಮತದಾನದ ಮಹತ್ವದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಟ್ಟೆಯಲ್ಲಿನ ವ್ಯವಸ್ಥೆಗಳನ್ನು ಶ್ಲಾಘಿಸಿದರು. ಮತದಾನ ಮತ್ತು BMC ವ್ಯವಸ್ಥೆ ಕುರಿತು ಮಾತನಾಡಿದರು.

ಪ್ರತಿಯೊಬ್ಬರೂ ತಮ್ಮ ಅಮೂಲ್ಯವಾದ ಮತಗಳನ್ನು ಖಂಡಿತವಾಗಿ ಚಲಾಯಿಸುವಂತೆ ನಾನು ಹೇಳುತ್ತೇನೆ BMC ಇಲ್ಲಿ ಉತ್ತಮ ವ್ಯವಸ್ಥೆಗಳನ್ನು ಮಾಡಿದೆ ಎಂದರು.

ಅಮೀರ್ ಖಾನ್ ಮರಾಠಿಯಲ್ಲಿ ಮಾತನಾಡುತ್ತಿದ್ದಂತೆ, ಕೆಲವು ಮಾಧ್ಯಮದವರು ಹಿಂದಿಯಲ್ಲಿ ಸಂದೇಶವನ್ನು ಪುನರಾವರ್ತಿಸುವಂತೆ ಕೇಳಿದರು.

ಆಗ ನಗುತ್ತಾ ಹೇಳಿದ ಅಮೀರ್ ಖಾನ್ "Hindi mein? ಇದು ಮಹಾರಾಷ್ಟ್ರ ಎಂದರು. ಆಗ ಪತ್ರಕರ್ತರೊಬ್ಬರು ತಮ್ಮ ಸಂದೇಶ ದೆಹಲಿಯಲ್ಲೂ ಪ್ರಸಾರ ಆಗುತ್ತೆ ಎಂದಾಗ, "ಓಹ್, ಅದು ದೆಹಲಿಗೂ ಹೋಗುತ್ತದೆಯೇ? ಉತ್ತಮ ವ್ಯವಸ್ಥೆ ಮಾಡಲಾಗಿದೆ, ನಾನು ಎಲ್ಲರಿಗೂ ಮನವಿ ಮಾಡುತ್ತೇನೆ: ಬಂದು ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಭಾಷೆ ಒಂದು ಸೂಕ್ಷ್ಮ ವಿಷಯವಾಗಿದ್ದು, BMC ಚುನಾವಣೆಯ ಸಂದರ್ಭದಲ್ಲಿಯೂ ಹಿಂದಿ vs ಮರಾಠಿ ಚರ್ಚೆಯು ಮರುಕಳಿಸಿದೆ. ಹಿಂದಿ ಭಾಷಿಕರೊಬ್ಬರು ಮುಂಬೈನ ಮೇಯರ್ ಆಗುತ್ತಾರೆ ಎಂಬ ಬಿಜೆಪಿ ನಾಯಕ ಕೃಪಾಶಂಕರ್ ಸಿಂಗ್ ಹೇಳಿಕೆಗೆ ಎರಡು ದಶಕಗಳ ನಂತರ ಮತ್ತೆ ಒಂದಾಗಿರುವ ಠಾಕ್ರೆ ಸಹೋದರರಾದ ಉದ್ಧವ್ ಮತ್ತು ರಾಜ್ ಠಾಕ್ರೆ ಅವರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಠಾಕ್ರೆಗಳು 'ಮರಾಠಿ ಮೇಯರ್ ಆಗಬೇಕು ಎಂದು ಹೇಳಿದ್ದಾರೆ. ಮರಾಠಿಗರು ವಿಭಜನೆಯಾಗಬಾರದು. ಅವರಿಗೆ ಇದು ಕೊನೆಯ ಚುನಾವಣೆ, ಇಂದು ಈ ಅವಕಾಶವನ್ನು ಕಳೆದುಕೊಂಡರೆ, ನೀವು ಮುಗಿದಂತೆ. ಮರಾಠಿ ಮತ್ತು ಮಹಾರಾಷ್ಟ್ರಕ್ಕಾಗಿ ಒಂದಾಗಬೇಕು.. ಹಲವಾರು ಜನರ ತ್ಯಾಗದಿಂದ ಮುಂಬೈ ಸಿಕ್ಕಿತು ಎಂದು ರಾಜ್ ಠಾಕ್ರೆ ಈ ಹಿಂದೆ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಡೀ ವಿಶ್ವವೇ ಕರ್ನಾಟಕವನ್ನು ಗಮನಿಸುತ್ತಿದೆ, ರಾಜ್ಯದ ಅಭಿವೃದ್ಧಿಗೆ ನಿಮ್ಮ ಸಹಕಾರ ಬೇಕು: ಪ್ರಧಾನಿ ಮೋದಿಗೆ CM ಡಿಕೆಶಿ ಮನವಿ

600 ಬಿಲಿಯನ್ ನಷ್ಟ: ಒಂದೇ ವಾರದಲ್ಲಿ ವಿಶ್ವದ ಮೊದಲ ಟ್ರಿಲಿಯನೇರ್ ಪಟ್ಟ ಕಳೆದುಕೊಂಡ Elan Musk!

ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ; ಕೆಲಹೊತ್ತು ಧ್ಯಾನ

'ಮೋದಿ ಅಭಿಮಾನಿಗಳು ಬಳಸುವ ಭಾಷೆ...; ಕ್ಷಮಿಸುವುದಲ್ಲ, ನೀವೇ ಕ್ಷಮೆ ಕೇಳಬೇಕು': ಪ್ರಧಾನಿ ವಿಡಿಯೋಗೆ ಉದ್ಧವ್ ಠಾಕ್ರೆ ಟಾಂಗ್

ಎಥೆನಾಲ್ ಮಿಶ್ರಣ ಮಾಡದಿದ್ದರೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 125 ರೂ. ಆಗಿರೋದು: E20ಗೆ ಕೇಂದ್ರ ಸಮರ್ಥನೆ