ಬಿಎಂಸಿ ಚುನಾವಣೆ  online desk
ದೇಶ

BMC elections ವಿವಾದ: ಇತರ ಚುನಾವಣೆಗಳಲ್ಲಿ ಬಳಕೆಯಾದ ಶಾಯಿಯೇ ಇಲ್ಲೂ ಬಳಕೆ- ಮಹಾರಾಷ್ಟ್ರ ಚುನಾವಣಾ ಆಯೋಗ

ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಗುರುವಾರ ಮಹಾರಾಷ್ಟ್ರದ 29 ಪುರಸಭೆಗಳಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ್ದರು.

ಮುಂಬೈ ನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಳಕೆ ಮಾಡಲಾದ ಶಾಯಿಯ ಬಗ್ಗೆ ವಿವಾದ ಉಂಟಾಗಿದ್ದು, ಈ ಬಗ್ಗೆ ಮಹಾರಾಷ್ಟ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

"ಮತದಾರರ ಬೆರಳುಗಳಿಗೆ ಹಾಕುವ ಶಾಯಿಯ ಬಗ್ಗೆ (ಮತ ಚಲಾಯಿಸಿದ ನಂತರ ಅನ್ವಯಿಸಲಾಗುತ್ತದೆ) ಕೆಲವು ಗೊಂದಲಗಳು ಸೃಷ್ಟಿಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

"ಮತದಾರರ ಬೆರಳುಗಳನ್ನು ಗುರುತಿಸಲು ಬಳಸಲಾಗುವ ಶಾಯಿ ಅಳಿಸಲಾಗದ ಶಾಯಿಯಾಗಿದೆ. ಮತ್ತು ಅದು ವಿವಿಧ ಚುನಾವಣೆಗಳಲ್ಲಿ ಭಾರತ ಚುನಾವಣಾ ಆಯೋಗವು ಬಳಸುವ ಶಾಯಿಯನ್ನೇ ಇಲ್ಲಿಯೂ ಬಳಕೆ ಮಾಡಲಾಗಿದೆ ಎಂದು ನಾನು ಹೇಳಲು ಬಯಸುತ್ತೇನೆ. ಇಲ್ಲಿ ಕಂಡುಬರುವ ಏಕೈಕ ವ್ಯತ್ಯಾಸವೆಂದರೆ ಅದನ್ನು ಮಾರ್ಕರ್ ರೂಪದಲ್ಲಿ ಬಳಸಲಾಗುತ್ತಿದೆ ಎಂದು ಮಹಾರಾಷ್ಟ್ರ ಚುನಾವಣಾ ಆಯುಕ್ತ ದಿನೇಶ್ ಟಿ. ವಾಘಮಾರೆ ತಿಳಿಸಿದ್ದಾರೆ.

"ಆದರೆ ಈ ಅಳಿಸಲಾಗದ ಶಾಯಿಯ ಮಾರ್ಕರ್ ರೂಪವನ್ನು 2011 ರಿಂದ ಬಳಸಲಾಗುತ್ತಿದೆ ಎಂದು ನಾನು ಹೇಳಲು ಬಯಸುತ್ತೇನೆ. ಆದ್ದರಿಂದ, ಈ ಅಳಿಸಲಾಗದ ಶಾಯಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವ ಅಥವಾ ಗೊಂದಲ ಸೃಷ್ಟಿಸುವುದು ಅರ್ಥವಿಲ್ಲದ್ದಾಗಿದೆ. ಶಾಯಿ ಹಾಕಿದ 12-15 ಸೆಕೆಂಡುಗಳಲ್ಲಿ ಈ ಶಾಯಿ ಒಣಗುತ್ತದೆ ಎಂದು ವಾಘಮಾರೆ ಹೇಳಿದ್ದಾರೆ.

ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಗುರುವಾರ ಮಹಾರಾಷ್ಟ್ರದ 29 ಪುರಸಭೆಗಳಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಚುನಾವಣಾ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ್ದರು.

ಮತದಾನದ ನಂತರ ಮತದಾರರ ಬೆರಳುಗಳಿಗೆ ಹಾಕುವ ಅಳಿಸಲಾಗದ ಶಾಯಿಯನ್ನು ನೇಲ್ ಪಾಲಿಶ್ ರಿಮೂವರ್ ಮತ್ತು ಸ್ಯಾನಿಟೈಸರ್‌ಗಳಿಂದ ಸುಲಭವಾಗಿ ತೆಗೆಯಲಾಗುತ್ತಿದೆ, ಇದರಿಂದಾಗಿ ಕೆಲವು ಜನರು ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಠಾಕ್ರೆ ಆರೋಪಿಸಿದರು. ಇಂತಹ ಪರಿಸ್ಥಿತಿಯು ಆಡಳಿತದಲ್ಲಿರುವ ಮಹಾಯುತಿ ಮತ್ತು ರಾಜ್ಯ ಚುನಾವಣಾ ಆಯೋಗ (SEC) ನಡುವಿನ 'ಒಡನಾಟ'ಕ್ಕೆ ಪುರಾವೆಯಾಗಿದೆ ಎಂದು ಅವರು ಹೇಳಿದರು.

ಚುನಾವಣಾ ಆಯೋಗ ಮತ್ತು ಆಡಳಿತ ಪಕ್ಷದ ನಡುವೆ ಒಪ್ಪಂದವಿದೆ. ಅನೇಕ ಅಕ್ರಮಗಳು ನಡೆಯುತ್ತಿವೆ" ಎಂದು ಠಾಕ್ರೆ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ಜೆಡಿಎಸ್ ಪಾದಯಾತ್ರೆ: ಮಾಜಿ ಪ್ರಧಾನಿ HD ದೇವೇಗೌಡ ಭಾಗಿ

Maharashtra: ಶಾಲಾ ಹಾಸ್ಟೆಲ್‌ನಲ್ಲಿ ಭೀಕರ ದುರಂತ: ಮಲಗಿದ್ದ 6 ಬಾಲಕಿಯರಿಗೆ ಹಾವು ಕಡಿತ, ಮೂವರ ಸಾವು!