ನವದೆಹಲಿ: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಯುದ್ಧದಿಂದ ವಿಮಾನಯಾನ ಸೇವೆ ಸ್ಥಗಿತಗೊಳಿಸಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಗುರುವಾರ ಪಶ್ಚಿಮ ಏಷ್ಯಾದ ಎಲ್ಲಾ ವಿಮಾನ ನಿಲ್ದಾಣಗಳಿಗೆ ವಿಮಾನ ಸೇವೆಯನ್ನು ಪುನಃಸ್ಥಾಪಿಸಿದ್ದು, ಒಮಾನ್ ಮತ್ತು ಕುವೈತ್ಗೆ ವಿಮಾನಗಳು ಆರಂಭವಾಗಲಿವೆ ಎಂದು ಹೇಳಿದೆ.
ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆಯು, ಈ ಪ್ರದೇಶದಲ್ಲಿ ಸಂಘರ್ಷದ ಹಿನ್ನೆಲೆಯಲ್ಲಿ ಕೆಲವು ಪಶ್ಚಿಮ ಏಷ್ಯಾಗೆ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿತ್ತು.
ಒಮನ್ನ ಸಲಾಲಾ ಮತ್ತು ಕುವೈತ್ಗೆ ಸೇವೆಗಳನ್ನು ಪುನರಾರಂಭಿಸುವುದರೊಂದಿಗೆ, ಪಶ್ಚಿಮ ಏಷ್ಯಾ ಜಾಲದಾದ್ಯಂತ ಎಲ್ಲಾ ವಿಮಾನ ನಿಲ್ದಾಗಳಿಗೆ ಸಂಪರ್ಕವನ್ನು ಪುನಃಸ್ಥಾಪಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
"ಕೋಝಿಕೋಡ್-ಸಲಾಲಾ ಮಾರ್ಗದಲ್ಲಿ ಜುಲೈ 2 ರಿಂದ ವಿಮಾನ ಸೇವೆ ಪುನರಾರಂಭಗೊಂಡಿದ್ದು, ಕೋಝಿಕೋಡ್ ಮತ್ತು ಕುವೈತ್ ನಡುವಿನ ಸೇವೆಗಳು ಜುಲೈ 3 ರಿಂದ ಪುನರಾರಂಭಗೊಳ್ಳಲಿದ್ದು, ಬೆಂಗಳೂರು ಮತ್ತು ಕುವೈತ್ ನಡುವಿನ ವಿಮಾನ ಸೇವೆ ಜುಲೈ 4 ರಿಂದ ಪ್ರಾರಂಭವಾಗಲಿದೆ. ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ವಿಮಾನ ಸೇವೆಯನ್ನು ಹೆಚ್ಚಿಸಲಾಗುವುದು" ಎಂದು ಏರ್ ಇಂಡಿಯಾ ಹೇಳಿದೆ.