ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಸಿಜೆಪಿ ನಾಯಕರಿಂದ ಸಂಭ್ರಮಾಚರಣೆ  online desk
ದೇಶ

"ಇದೆಂಥಾ ಅಸಂವೇದನಾಶೀಲತೆ"?: ಬೇಡಿಕೆ ಈಡೇರಿದ ಬೆನ್ನಲ್ಲೇ ಸಿಜೆಪಿ ನಾಯಕರಿಂದ ವಿಚಿತ್ರ ಸಂಭ್ರಮಾಚರಣೆ ಟೀಕೆಗೆ ಗುರಿ; ವಾಂಗ್ಚುಕ್ ಗೂ ಬೇಸರ!

"ವಿಜಯವು ನಮ್ರತೆಯ ಜೊತೆಗೆ ಇರಬೇಕು" ಎಂದು ವಾಂಗ್ಚುಕ್ ಹೇಳಿದ್ದಾರೆ. ಸಿಜೆಪಿ ನಾಯಕರು, ಬೆಂಬಲಿಗರು "ಘನತೆ, ಸಂಯಮ ಮತ್ತು ಜವಾಬ್ದಾರಿಯಿಂದ" ವರ್ತಿಸಲು ಸೋನಮ್ ಕರೆ ನೀಡಿದರು.

ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಬೇಡಿಕೆ ಈಡೇರಿಕೆಯಾಗಿದ್ದಕ್ಕೆ ಸಿಜೆಪಿ ಮೀಮ್ ಪೇಜ್ ನಾಯಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದು ಈಗ ಅವರಿಗೆ ಮುಳುವಾಗಿ ಪರಿಣಮಿಸಿದೆ.

ಕಾಕ್ರೋಚ್ ಜನತಾ ಪಾರ್ಟಿ ಎಂಬ ಮೀಮ್ ಪೇಜ್ ನ ನಾಯಕರು ನೃತ್ಯ ಮಾಡಿ ಸಂಭ್ರಮಾಚರಣೆ ಮಾಡುತ್ತಿರುವ ವೀಡಿಯೊಗಳು ಜಾಲತಾಣದಲ್ಲಿ ವೈರಲ್ ಆಗತೊಡಗಿರುವುದು ಈ ಬಿರುಗಾಳಿ ಎಬ್ಬಿಸಿದೆ. ಪ್ರತಿಭಟನೆ ಮುಗಿದ ಕೂಡಲೇ ವಿಡಂಬನಾತ್ಮಕ ವೇದಿಕೆಯನ್ನು (ಮೀಮ್ ಪೇಜ್) ಬೆಂಬಲಿಸಿದವರೇ ಈಗ ಪಕ್ಷದ ನಾಯಕರು "ಅಸಂವೇದನಾಶೀಲತೆ"ಯಿಂದ ನಡೆದುಕೊಳ್ಳುತ್ತಿರುವುದರ ಬಗ್ಗೆ ಮಾತನಾಡಿದ್ದು, ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಿಜೆಪಿ ವೇದಿಕೆಯಲ್ಲಿ ಉಪವಾಸ ಸತ್ಯಾಗ್ರಹ ಕುಳಿತಿದ್ದ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್, ವೈರಲ್ ವೀಡಿಯೊಗಳ ವಿವಾದಕ್ಕೆ ಪ್ರತಿಕ್ರಿಯಿಸಿದ್ದಾರೆ.

"ವಿಜಯವು ನಮ್ರತೆಯ ಜೊತೆಗೆ ಇರಬೇಕು" ಎಂದು ವಾಂಗ್ಚುಕ್ ಹೇಳಿದ್ದಾರೆ. ಸಿಜೆಪಿ ನಾಯಕರು, ಬೆಂಬಲಿಗರು "ಘನತೆ, ಸಂಯಮ ಮತ್ತು ಜವಾಬ್ದಾರಿಯಿಂದ" ವರ್ತಿಸಲು ಸೋನಮ್ ಕರೆ ನೀಡಿದರು.

ಗೌರವ ಮತ್ತು ನಮ್ರತೆಯನ್ನು ಕಾಪಾಡಿಕೊಳ್ಳುವುದು ಯಶಸ್ಸನ್ನು ಸಾಧಿಸುವಷ್ಟೇ ಮುಖ್ಯ ಎಂದು ಸೋನಮ್ ವಾಂಗ್ಚುಕ್ ಹೇಳಿದ್ದಾರೆ. ಒಂದು ತಿಂಗಳ ಕಾಲ ನಡೆದ ಪ್ರತಿಭಟನೆಯನ್ನು ರದ್ದುಗೊಳಿಸಿದ ಗಂಟೆಗಳ ನಂತರ ಸಿಜೆಪಿಯ ಪ್ರಮುಖ ಸದಸ್ಯರು ಪ್ರಧಾನ್ ಅವರ ರಾಜೀನಾಮೆಯನ್ನು ನೃತ್ಯ ಮಾಡಿ ಆಚರಿಸುತ್ತಿರುವ ದೃಶ್ಯಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಯಾಗುತ್ತಿದ್ದು, ಸಿಜೆಪಿಯನ್ನು ಬೆಂಬಲಿಸಿದವರಿಂದಲೇ ಟೀಕೆ ವ್ಯಕ್ತವಾಗತೊಡಗಿದೆ. ಈ ಬೆಳವಣಿಗೆಗಳ ನಡುವೆ ಸೋನಮ್ ವಾಂಗ್ಚುಕ್ ಅವರ ಹೇಳಿಕೆಗಳು ಬಂದಿವೆ.

ಪಕ್ಷದ ವೀಡಿಯೊಗಳು ಸಿಜೆಪಿ ಬೆಂಬಲಿಗರಿಂದ ಕೂಡ ಭಾರಿ ಟೀಕೆಗೆ ಒಳಗಾಗಿವೆ. ಆನ್‌ಲೈನ್ ವೇದಿಕೆಯ ಸ್ಥಾಪಕ ಸದಸ್ಯರಾದ, ಯೂಟ್ಯೂಬರ್ ಮೇಘನಾದ್ ಮಾತನಾಡಿದ್ದು, ಪ್ರತಿಭಟನೆ ಮುಗಿದ ನಂತರ ಹಲವು ಪ್ರತಿಭಟನಾಕಾರರು ಬೀದಿಗಳಲ್ಲಿ "ಮನೆಯಿಲ್ಲದೆ ಮತ್ತು ಹಸಿವಿನಿಂದ" ಬಳಲುತ್ತಿದ್ದರೆ, ಇವರು ಪಾರ್ಟಿ ಮಾಡಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ ಎಂದು ಸಿಜೆಪಿ ನಾಯಕರ ಮೇಲೆ ತೀವ್ರ ದಾಳಿ ನಡೆಸಿದ್ದಾರೆ.

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಮೇಘನಾದ್ ಮತ್ತು ಇತರರು ಜಂತರ್ ಮಂತರ್‌ನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಸಿಜೆಪಿ ನಾಯಕರೊಂದಿಗೆ ಬೀಡುಬಿಟ್ಟಿದ್ದ ಹಲವು ಪ್ರತಿಭಟನಾಕಾರರಿಗೆ ಪ್ರಯಾಣ ಮತ್ತು ಆಹಾರವನ್ನು ವ್ಯವಸ್ಥೆ ಮಾಡಿರುವುದಾಗಿ ಹೇಳಿದ್ದಾರೆ.

"ನಾನು ಇದನ್ನು ಬೆಳಿಗ್ಗೆ 4 ಗಂಟೆಗೆ ನೋಡುತ್ತಿದ್ದೇನೆ. ನಾನು ಮತ್ತು ಇತರ ಕೆಲವರು ಕಳೆದ ಎರಡು ದಿನಗಳಿಂದ ಕೈಬಿಟ್ಟ ಮತ್ತು ಹಸಿವಿನಿಂದ ಬಳಲುತ್ತಿರುವ ಸಿಜೆಪಿ ಸ್ವಯಂಸೇವಕರು ಮತ್ತು ಪ್ರತಿಭಟನಾಕಾರರನ್ನು ನಮ್ಮ ಸ್ವಂತ ಹಣದಿಂದ ಮನೆಗೆ ಕಳುಹಿಸುತ್ತಿದ್ದೇವೆ. ನಾನು ಏನನ್ನೂ ಹೇಳಲು ಹೋಗುತ್ತಿರಲಿಲ್ಲ, ಆದರೆ ನಾನು ಈ ಸಂಭ್ರಮಾಚರಣೆಯ ವೀಡಿಯೊವನ್ನು ನೋಡಿದೆ, ಮತ್ತು ನಾನು ಕೋಪಗೊಂಡಿದ್ದೇನೆ..." ಎಂದು ಮೇಘನಾದ್ ಸಿಜೆಪಿ ಪಕ್ಷದ ವೀಡಿಯೊದ ಬಗ್ಗೆ ಬರೆದಿದ್ದಾರೆ.

ಅವರು ಸಿಜೆಪಿಗೆ ಬಲವಾದ ಕಾಮೆಂಟ್‌ಗಳೊಂದಿಗೆ ಪೋಸ್ಟ್ ನ್ನು ಕೊನೆಗೊಳಿಸಿದ ಅವರು, "ನೀವು ಪಾರ್ಟಿ ಮಾಡುತ್ತಿರುವಾಗ, ನೀವು ಕಾಳಜಿ ವಹಿಸದಿರಲು ನಿರ್ಧರಿಸಿದ್ದರಿಂದ ದೆಹಲಿಯಲ್ಲಿ 70+ ಪ್ರತಿಭಟನಾಕಾರರು ಮತ್ತು ವಿದ್ಯಾರ್ಥಿಗಳು ಹಸಿವಿನಿಂದ ಬಳಲುತ್ತಿದ್ದರು. ಅಭಿನಂದನೆಗಳು ಸಿಜೆಪಿ, ನೀವು ಕೇವಲ ಮತ್ತೊಂದು ರಾಜಕೀಯ ಪಕ್ಷವಾಗಿದ್ದೀರಿ." ಎಂದು ತಿವಿದಿದ್ದಾರೆ.

ಪಕ್ಷದ ವೀಡಿಯೊ ಟೀಕೆಗೆ ಗುರಿಯಾಗುತ್ತಿದ್ದಂತೆ, ಸಿಜೆಪಿಯ ನಾಯಕರು ತಾವು ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ವೀಡಿಯೊ ಯುವ ಪೀಳಿಗೆಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

"ನಾವು ಎಷ್ಟು ಸಮಯ ಬೇಕಾದರೂ ರಸ್ತೆಯಲ್ಲಿ ಕುಳಿತುಕೊಳ್ಳಬಹುದು. ನೃತ್ಯ ಮಾಡುತ್ತಾ ನಾವು ಪ್ರತಿಭಟಿಸಬಹುದು. ತಣ್ಣನೆಯ ಕಾಫಿ ಹೀರುತ್ತಾ ನಾವು ಸಂಘಟಿಸಬಹುದು" ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಸೋಮವಾರ ಎಕ್ಸ್‌ನಲ್ಲಿ ಬರೆದಿದ್ದಾರೆ. "ಈ ಪೀಳಿಗೆ ಹಾಗೆಯೇ. ಆತ್ಮವಿಶ್ವಾಸ, ಸೃಜನಶೀಲ, ಪರಿಶ್ರಮದೊಂದಿಗೆ ಇದೆ. ಸ್ಟೀರಿಯೊಟೈಪ್‌ ಈ ಪೀಳಿಗೆಗೆ ಅಸಾಧ್ಯ." ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸರ್ಕಾರ ಮತ್ತು ಕೆಲವು ದೂರದರ್ಶನ ನಿರೂಪಕರು "Gen Z ಮತ್ತು ಯುವ ಪೀಳಿಗೆಯ ಭಾಷೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ" ಎಂದು ಅವರು ಹೇಳಿದರು ಮತ್ತು "ಅಂಕಲ್ ಮತ್ತು ಆಂಟಿಗಳು ದೂರು ನೀಡುತ್ತಲೇ ಇರಬಹುದು. ಅವರು ನಮ್ಮೊಂದಿಗೆ ವ್ಯವಹರಿಸಬೇಕಾಗುತ್ತದೆ!" ಎಂದು ಉದ್ಧಟತನದ ಪ್ರತಿಕ್ರಿಯೆ ನೀಡಿದ್ದಾರೆ.

ನಂತರ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಪಾರ್ಟಿ ವಾಸ್ತವವಾಗಿ ಚಳುವಳಿಯ ನಾಯಕರು ಗೌರವಿಸಲು ಬಯಸಿದ ಸ್ವಯಂಸೇವಕರೊಂದಿಗಿನ ಸಭೆಯಾಗಿತ್ತು ಎಂದು ಹೇಳಿದರು. "ದುರದೃಷ್ಟವಶಾತ್, ನಾವು ನೃತ್ಯ ಮಾಡುತ್ತಿರುವ ದೃಶ್ಯಗಳು ಹೊರಬಂದವು. ಆದರೆ ಅದಕ್ಕೂ ಮೊದಲು ನಡೆದದ್ದು ಆ ಸ್ವಯಂಸೇವಕರಲ್ಲಿ ಪ್ರತಿಯೊಬ್ಬರೊಂದಿಗಿನ ಹೃದಯದಿಂದ ಹೃದಯದ ಸಂವಹನವಾಗಿತ್ತು. ನಾವು ನೆಲದ ಮೇಲೆ ಕುಳಿತು ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡುತ್ತಿದ್ದೆವು ಮತ್ತು ಹಾಗೆ ಮಾಡುವುದು ತುಂಬಾ ಅಗತ್ಯವಾಗಿತ್ತು" ಎಂದು ಸೌರವ್ ದಾಸ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Parliament Monsoon Session: ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ತೀವ್ರ ಗದ್ದಲ, ಲೋಕಸಭೆ-ರಾಜ್ಯಸಭೆ ಕಲಾಪ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ..!

ಮೇಕೆದಾಟು ಯೋಜನೆಗೆ ಸಿಕ್ಕಿತು ಕೇಂದ್ರದ ಬಲ; ಕರ್ನಾಟಕಕ್ಕೆ ಕಾನೂನುಬದ್ಧ ಹಕ್ಕಿದೆ, ತಮಿಳುನಾಡಿನ ಸಮ್ಮತಿ ಅಗತ್ಯವೇ ಇಲ್ಲ ಎಂದ ಜಲಶಕ್ತಿ ಸಚಿವಾಲಯ

ಮರಳು ಮಾಫಿಯಾ ಹೆಡೆಮುರಿ ಕಟ್ಟಲು ಸರ್ಕಾರ ನಿರ್ಧಾರ; ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗಕ್ಕೆ ಮುಂದು, ಕಣ್ಮುಚ್ಚಿ ಕೂರುವ ಪೊಲೀಸರಿಗೂ ತಟ್ಟಲಿದೆ ಬಿಸಿ..!

VB-G RAM G ಯೋಜನೆಗೆ ಹಣದ ಕೊರತೆಯೇ ಇಲ್ಲ, ಗ್ರಾಮೀಣ ಉದ್ಯೋಗಕ್ಕೆ 2,900 ಕೋಟಿ ರೂ. ಬಿಡುಗಡೆ: ರಾಜ್ಯ ಸರ್ಕಾರ

ಮೇಕೆದಾಟು ಯೋಜನೆಗೆ ಸಮ್ಮತಿ ಅಗತ್ಯವೇ ಇಲ್ಲ: ಕರ್ನಾಟಕದ ಹಕ್ಕು ಪುನರುಚ್ಚರಿಸಿದ ಕೇಂದ್ರ ಸರ್ಕಾರ ಡಿಕೆಶಿ ಧನ್ಯವಾದ