ಸಾಂದರ್ಭಿಕ ಚಿತ್ರ 
ದೇಶ

ಸಚಿವರುಗಳಿಗೆ ಪತ್ರಿಕೆ, ಮ್ಯಾಗಜೀನ್: ಆನ್‌ಲೈನ್ ವ್ಯವಸ್ಥೆಗೆ ಬದಲಾಯಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ!

ಹೊಸ ವ್ಯವಸ್ಥೆಯಡಿ ಸಚಿವರು ಪತ್ರಿಕೆಗಳು ಮತ್ತು ಮ್ಯಾಗಜೀನ್ ಗಾಗಿ ಆನ್‌ಲೈನ್ ಚಂದಾದಾರಿಕೆಯನ್ನು ಪಡೆಯಬೇಕಾಗುತ್ತದೆ. ಇದಕ್ಕೆ ತಗಲುವ ವೆಚ್ಚ, ಬಿಲ್‌ಗಳನ್ನು ಸಲ್ಲಿಸಿದ ನಂತರ ಲಭ್ಯವಿರುವ ಕಚೇರಿ ವೆಚ್ಚದ ಅನುದಾನದಿಂದ ಆಯಾ ಆಡಳಿತಾತ್ಮಕ ಇಲಾಖೆಗಳು ಭರಿಸಲಿವೆ.

ಮುಂಬೈ: ಸೆಪ್ಟೆಂಬರ್ 1 ರಿಂದ ಉಪ ಮುಖ್ಯಮಂತ್ರಿಗಳು ಮತ್ತು ಸಚಿವರ ಕಚೇರಿಗಳು ಹಾಗೂ ಅಧಿಕೃತ ನಿವಾಸಗಳಿಗೆ ಭೌತಿಕ ರೂಪದ (ಮುದ್ರಿತ) ಪತ್ರಿಕೆಗಳು ಮತ್ತು ಮ್ಯಾಗಜೀನ್ ಒದಗಿಸುವ ವ್ಯವಸ್ಥೆಯನ್ನು ನಿಲ್ಲಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಬದಲಾಗಿ ಅವರು ಆನ್‌ಲೈನ್ ಚಂದಾದಾರಿಕೆಯನ್ನು ಪಡೆಯುವಂತೆ ಸೂಚಿಸಲಾಗಿದೆ.

ಈ ಸಂಬಂಧ ಸಾಮಾನ್ಯ ಆಡಳಿತ ಇಲಾಖೆಯು (GAD) ಗುರುವಾರ ಆದೇಶ ಹೊರಡಿಸಿದ್ದು, ಉಪ ಮುಖ್ಯಮಂತ್ರಿಗಳು, ಸಚಿವರು, ರಾಜ್ಯ ಸಚಿವರ ಕಚೇರಿಗಳು ಹಾಗೂ ನಿವಾಸಗಳಿಗೆ ಇಲಾಖೆಯ ಮೂಲಕ ಮುದ್ರಿತ ಪತ್ರಿಕೆಗಳು ಮತ್ತು ಮ್ಯಾಗಜೀನ್ ಒದಗಿಸುವ ಪ್ರಸ್ತುತ ವ್ಯವಸ್ಥೆಯನ್ನು ಸೆಪ್ಟೆಂಬರ್ 1 ರಿಂದ ರದ್ದುಗೊಳಿಸಲಾಗುವುದು ಎಂದು ಹೇಳಲಾಗಿದೆ.

ಹೊಸ ವ್ಯವಸ್ಥೆಯಡಿ ಸಚಿವರು ಪತ್ರಿಕೆಗಳು ಮತ್ತು ಮ್ಯಾಗಜೀನ್ ಗಾಗಿ ಆನ್‌ಲೈನ್ ಚಂದಾದಾರಿಕೆಯನ್ನು ಪಡೆಯಬೇಕಾಗುತ್ತದೆ. ಇದಕ್ಕೆ ತಗಲುವ ವೆಚ್ಚ, ಬಿಲ್‌ಗಳನ್ನು ಸಲ್ಲಿಸಿದ ನಂತರ ಲಭ್ಯವಿರುವ ಕಚೇರಿ ವೆಚ್ಚದ ಅನುದಾನದಿಂದ ಆಯಾ ಆಡಳಿತಾತ್ಮಕ ಇಲಾಖೆಗಳು ಭರಿಸಲಿವೆ.

ಆದಾಗ್ಯೂ, ಮುಖ್ಯಮಂತ್ರಿಯವರಿಗೆ ವಿನಾಯಿತಿ ನೀಡಲಾಗಿದೆ. ಮುಖ್ಯಮಂತ್ರಿಯವರ ಕಚೇರಿ ಮತ್ತು ಅಧಿಕೃತ ನಿವಾಸಕ್ಕೆ ಭೌತಿಕ ಪತ್ರಿಕೆಗಳು, ಮ್ಯಾಗಜೀನ್ ಪೂರೈಸುವ ಪ್ರಸ್ತುತ ವ್ಯವಸ್ಥೆಯು ಮುಂದುವರಿಯಲಿದ್ದು, ಇದರ ವೆಚ್ಚವನ್ನು ಸಾಮಾನ್ಯ ಆಡಳಿತ ಇಲಾಖೆಯೇ (GAD) ಭರಿಸಲಿದೆ.

ಈ ನಿರ್ಧಾರವು, ಬೇಡಿಕೆಯ ಆಧಾರದ ಮೇಲೆ ಸಚಿವರಿಗೆ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಖರೀದಿಸಿ ಪೂರೈಸುವ ಹಾಗೂ ಬಿಲ್‌ಗಳನ್ನು ಕೇಂದ್ರೀಕೃತವಾಗಿ ಪಾವತಿಸುವ ಹಿಂದಿನ ವ್ಯವಸ್ಥೆಯನ್ನು ರದ್ದುಗೊಳಿಸುತ್ತದೆ. ಈ ಪದ್ಧತಿಯು ಹಲವು ವರ್ಷಗಳಿಂದ ಜಾರಿಯಲ್ಲಿತ್ತು ಎಂದು ಸರ್ಕಾರಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IIT Madras ನಿರ್ದೇಶಕ ಕಾಮಕೋಟಿ 'ಗೋಮೂತ್ರ ತಜ್ಞ': ಪ್ರಿಯಾಂಕಾ ಗಾಂಧಿ ಹೇಳಿಕೆ ಖಂಡಿಸಿ 200ಕ್ಕೂ ಹೆಚ್ಚು ಶಿಕ್ಷಣ ತಜ್ಞರಿಂದ ಪತ್ರ

ಪ್ರಧಾನಿ ಮೋದಿ ವಿಷ್ಣುವಿನ ಅವತಾರ; ಅವರ ಪಾದ ತೊಳೆದು ನೀರು ಕುಡಿಯುತ್ತೇನೆ: CJPಗರು ನಿಷ್ಪ್ರಯೋಜಕರು: ಬಾರ್ಡರ್ ನಟ ಸುದೇಶ್ ಬೆರ್ರಿ

ರಾಮಾಯಣ ಟ್ರೈಲರ್: ಸೀತಾ ಮಾತೆ ಪಾತ್ರಕ್ಕೆ ಸಾಯಿ ಪಲ್ಲವಿ ಬೇಕಿತ್ತಾ? ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ!

ಪಾಕ್ ಸೇನೆ ಇಸ್ರೇಲ್ ಗಿಂತಲೂ ಕೆಟ್ಟದು: ಮುನೀರ್ ಒಬ್ಬ 'Zalim'; ಕ್ಯಾಮರಾ ಮುಂದೆ ಒಂದೇ ಸಮನೆ ಕಣ್ಣೀರಿಟ್ಟ PoK ವ್ಯಕ್ತಿ! ಮನಕಲಕುವ Video

BJP ಸೇರಿ, ಇಲ್ಲದಿದ್ದರೆ ನಿಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ: ಅಭಿಜೀತ್ ದೀಪ್ಕೆಗೆ 'ವಿಡಿಯೋ ಬೆದರಿಕೆ' ಬಿಚ್ಚಿಟ್ಟ ತಾಯಿ!