ಸಂಜಯ್ ರಾವತ್ 
ದೇಶ

ಮಹಾರಾಷ್ಟ್ರ: ಪಶ್ಚಾತ್ತಾಪ ಪಡುತ್ತಿದ್ದರೆ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷಕ್ಕೆ ಮರಳಿ: ಶಿಂಧೆ ಬಣದ ನಾಯಕರಿಗೆ ರಾವತ್ ಆಹ್ವಾನ!

ಬಿಜೆಪಿಯಿಂದ ಅವಮಾನ ಮತ್ತಿತರ ಕಾರಣದಿಂದ ದಾರಿ ತಪ್ಪಿರುವುದಾಗಿ ಯಾರಿಗಾದರೂ ಅನಿಸುತ್ತಿದ್ದರೆ ಅಂತಹವರು ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಬಣ ಸೇರುವಂತೆ ರಾಜ್ಯಸಭಾ ಸದಸ್ಯರಾಗಿರುವ ಸಂಜಯ್ ರಾವತ್ ಆಹ್ವಾನ ನೀಡಿದ್ದಾರೆ.

ನಾಸಿಕ್: ಏಕನಾಥ್ ಶಿಂಧೆ ಬಣದಲ್ಲಿದ್ದು, ಪಶ್ಚಾತ್ತಾಪ ಪಡುತ್ತಿರುವ ಯಾವುದೇ ನಾಯಕರು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷಕ್ಕೆ ಮರಳಬೇಕು ಎಂದು ಶಿವಸೇನೆ-ಯುಬಿಟಿ ನಾಯಕ ಸಂಜಯ್ ರಾವತ್ ಮಂಗಳವಾರ ಹೇಳಿದ್ದಾರೆ. ಆದಾಗ್ಯೂ, ಕೆಲವರಿಗೆ ಪಕ್ಷದಲ್ಲಿ ಜಾಗ ಸಿಗಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಅವಮಾನ ಮತ್ತಿತರ ಕಾರಣದಿಂದ ದಾರಿ ತಪ್ಪಿರುವುದಾಗಿ ಯಾರಿಗಾದರೂ ಅನಿಸುತ್ತಿದ್ದರೆ ಅಂತಹವರು ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಬಣ ಸೇರುವಂತೆ ರಾಜ್ಯಸಭಾ ಸದಸ್ಯರಾಗಿರುವ ಸಂಜಯ್ ರಾವತ್ ಆಹ್ವಾನ ನೀಡಿದ್ದಾರೆ.

ಶಿಂಧೆ ಬಣದಲ್ಲಿ ಹೆಚ್ಚುತ್ತಿರುವ ಅಸಮಾಧಾನ: ಬಿಜೆಪಿ ಸೇನೆಯ (ಯುಬಿಟಿ) ಕೈ ಮತ್ತು ಕಾಲುಗಳನ್ನು ಕತ್ತರಿಸಿದರೆ, ಅದು ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ (ಶಿಂಧೆ ನೇತೃತ್ವದ) ಶಿವಸೇನೆಯ ತಲೆಯನ್ನು ಕತ್ತರಿಸಿತು ಎಂದು ಶಿಂಧೆ ನೇತೃತ್ವದ ಶಿವಸೇನಾ ಬಣದಲ್ಲಿರುವ ಮಾಜಿ ರಾಜ್ಯ ಸಚಿವ ಅಬ್ದುಲ್ ಸತ್ತಾರ್ ಹೇಳಿದ ಒಂದು ದಿನದ ನಂತರ ರಾವತ್ ಈ ಹೇಳಿಕೆ ನೀಡಿದ್ದಾರೆ.

ನಮ್ಮ ಅಣ್ಣನೇ ನಮ್ಮನ್ನು ಮುಗಿಸುತ್ತಿದ್ದರೆ ಶಿವಸೇನೆ-ಬಿಜೆಪಿ ಮೈತ್ರಿಕೂಟಕ್ಕೆ ಅರ್ಥ ಇರಲ್ಲ ಎಂದು ಅವರು ಹೇಳಿದ್ದರು.

ಶಿವಸೇನೆ ವಿಭಜನೆಗೆ ಬಿಜೆಪಿ ಕಾರಣ: ಮಹಾರಾಷ್ಟ್ರದಲ್ಲಿ ಮೂಲ ಕೇಸರಿ ಮೈತ್ರಿಕೂಟದಲ್ಲಿ ಬಿಜೆಪಿ ಎಂದಿಗೂ "ಹಿರಿಯ ಸಹೋದರ" ಆಗಿರಲಿಲ್ಲ ಎಂದು ರಾವತ್ ಹೇಳಿದರು. ಅವಿಭಜಿತ ಶಿವಸೇನೆ ಹಿರಿಯ ಪಾಲುದಾರರಾಗಿದ್ದು, ಬಿಜೆಪಿ ಇದನ್ನು ಸಹಿಸಿಕೊಳ್ಳದ ಕಾರಣ ಪಕ್ಷವನ್ನು ವಿಭಜಿಸಿತು ಎಂದು ಅವರು ಹೇಳಿದರು.

ಶಿಂಧೆ ನೇತೃತ್ವದ ಶಿವಸೇನೆ ಒಂದು ಪಕ್ಷವಲ್ಲ, ಆದರೆ ಚುನಾವಣಾ ಆಯೋಗದ "ಭ್ರಷ್ಟ ಅಭ್ಯಾಸಗಳಿಂದ" ಹುಟ್ಟಿಕೊಂಡಿದೆ. ಶಿವಸೇನಾ ಚಿಹ್ನೆ ಮತ್ತು ಹೆಸರಿಗೆ ಸಂಬಂಧಿಸಿದ ಕಾನೂನು ವಿವಾದದ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪು ಬಂದಾಗಲೆಲ್ಲಾ ಅದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಪರವಾಗಿರಲಿದೆ ಎಂದು ರಾವತ್ ತಿಳಿಸಿದ್ದಾರೆ.

ಸೇನಾ (ಯುಬಿಟಿ) ವಕ್ತಾರೆ ಪ್ರತಿಕ್ರಿಯೆಗಳು: ಸೇನಾ (ಯುಬಿಟಿ) ವಕ್ತಾರೆ ಸುಷ್ಮಾ ಅಂಧಾರೆ ಕೂಡ ಸತ್ತಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಸ್ಲೋ ಪಾಯಿಸನ್ ಎಂಬುದು ನಮಗೆ ಮೊದಲಿನಿಂದಲೂ ತಿಳಿದಿತ್ತು. ಆದರೆ, ಅಧಿಕಾರದ ಆಸೆಗೆ ಬಿದ್ದು ಈಗ ಅಸಹಾಯಕರಾಗಿದ್ದೀರಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭವಿಷ್ಯ ಕಾಣುತ್ತಿಲ್ಲ'; ಬಿಜೆಪಿ ನಾಯಕತ್ವ ಭೇಟಿ ಮಾಡಿದ Annamalai; ಸ್ವತಂತ್ರ ರಾಜಕೀಯ ಪಯಣದ ಸುಳಿವು!

ಸ್ವಾಮೀಜಿ, ಫಾದರ್, ಮೌಲ್ವಿ ಸಮ್ಮುಖದಲ್ಲಿ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣವಚನ; ರಾಜ್ಯದ ಇತಿಹಾಸದಲ್ಲೇ ಮೊದಲು!

‘Kala Hiran’ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ ಸಲ್ಮಾನ್ ಖಾನ್ ! ಬೆದರಿಸುವ ತಂತ್ರ ಎಂದ ನಿರ್ಮಾಪಕರು ಏನಿದು ವಿವಾದ?

ಇನ್ನೂ 114 ರಾಫೆಲ್ ಜೆಟ್ ಖರೀದಿಗೆ ಭಾರತ ಮುಂದು; ಫ್ರಾನ್ಸ್ ಗೆ ವಾಯುಪಡೆ ಮುಖ್ಯಸ್ಥರ ಭೇಟಿ

ತ್ವಿಶಾ ಶರ್ಮಾ ಪ್ರಕರಣ: ಅತ್ತೆ ಗಿರಿಬಾಲಾ ಸಿಂಗ್, ಪತಿ ಸಮರ್ಥ್ ಗೆ 14 ದಿನಗಳ ನ್ಯಾಯಾಂಗ ಬಂಧನ!

SCROLL FOR NEXT