ಫ್ರಾನ್ಸ್ ನಲ್ಲಿ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್ ಮಾತುಕತೆ  
ದೇಶ

'ಮೋದಿಯವ್ರಿಗೆ ಹಿಂದಿಯಲ್ಲಿ ಕೂಡ ಚೀಟಿ ಇಲ್ದೆ ಮಾತಾಡೋಕೆ ಆಗಲ್ವಾ, ಟೆಲಿಪ್ರಾಂಪ್ಟರ್ ಇಲ್ಲದ ಸಮಸ್ಯೆಯೇ?: ಟ್ರಂಪ್ ಜೊತೆ ಸಂಭಾಷಣೆಗೆ ನೆಟ್ಟಿಗರ ವ್ಯಂಗ್ಯ-Video

ಈ ದೃಶ್ಯವನ್ನು ಆಧರಿಸಿ ಕೆಲವು ನೆಟ್ಟಿಗರು, ತಮ್ಮ ಮಾತೃಭಾಷೆಯಾದ ಹಿಂದಿಯನ್ನು ಮಾತನಾಡಲು ಸಹ ಟಿಪ್ಪಣಿಗಳ ಅವಶ್ಯಕತೆ ಏಕೆ ಎಂದು ಪ್ರಶ್ನಿಸಿ, ಪ್ರಧಾನಿ ಮೋದಿಯವರ ಭಾಷಾ ಪಾಂಡಿತ್ಯ ಹಾಗೂ ಹಿಂದಿನ ಶೈಕ್ಷಣಿಕ ಅರ್ಹತೆಗಳನ್ನು ಎತ್ತಿ ವ್ಯಂಗ್ಯ ಮಾಡುತ್ತಿದ್ದಾರೆ.

ಫ್ರಾನ್ಸ್‌ನಲ್ಲಿ ನಿನ್ನೆ ಜೂನ್ 17ರಂದು ನಡೆದ ಜಿ7 ಶೃಂಗಸಭೆಯ ವೇಳೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಹಿಂದಿಯಲ್ಲಿ ಮಾತನಾಡುವಾಗ ಚೀಟಿಯಲ್ಲಿ ಬರೆದಿದ್ದನ್ನು ನೋಡಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ದೃಶ್ಯವನ್ನು ಆಧರಿಸಿ ಕೆಲವು ನೆಟ್ಟಿಗರು, ತಮ್ಮ ಮಾತೃಭಾಷೆಯಾದ ಹಿಂದಿಯನ್ನು ಮಾತನಾಡಲು ಸಹ ಟಿಪ್ಪಣಿಗಳ ಅವಶ್ಯಕತೆ ಏಕೆ ಎಂದು ಪ್ರಶ್ನಿಸಿ, ಪ್ರಧಾನಿ ಮೋದಿಯವರ ಭಾಷಾ ಪಾಂಡಿತ್ಯ ಹಾಗೂ ಹಿಂದಿನ ಶೈಕ್ಷಣಿಕ ಅರ್ಹತೆಗಳನ್ನು ಎತ್ತಿ ವ್ಯಂಗ್ಯ ಮಾಡುತ್ತಿದ್ದಾರೆ.

ಮೋದಿಯವರಿಗೆ ಟೆಲಿಪ್ರಾಂಪ್ಟರ್ ಇಲ್ಲದಿದ್ದರೆ ಮಾತನಾಡಲು ಎಷ್ಟು ಕಷ್ಟವಾಗುತ್ತದೆ ನೋಡಿ ಎಂದು ಕೆಲವರು ಬರೆದುಕೊಂಡಿದ್ದಾರೆ.

ಆದರೆ ಪ್ರಧಾನಿ ಮೋದಿ ಬೆಂಬಲಿಗರು ಈ ಟೀಕೆಗಳನ್ನು ತಳ್ಳಿಹಾಕಿದ್ದಾರೆ. ಅವರ ಪ್ರಕಾರ, ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಭೆಗಳಲ್ಲಿ ನಾಯಕರು ಪ್ರಮುಖ ವಿಷಯಗಳನ್ನು ನಿಖರವಾಗಿ ಮಂಡಿಸಲು ಟಿಪ್ಪಣಿಗಳನ್ನು ಬಳಸುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಉದಾಹರಣೆಗೆ, ಎಮಾನ್ಯುಯೆಲ್ ಮಾಕ್ರನ್ ಹಾಗೂ ಕ್ಸಿ ಜಿನ್ ಪಿಂಗ್ ಸೇರಿದಂತೆ ಅನೇಕ ವಿಶ್ವ ನಾಯಕರು ಅಧಿಕೃತ ಸಭೆಗಳಲ್ಲಿ ಪೂರ್ವಸಿದ್ಧ ಟಿಪ್ಪಣಿಗಳನ್ನು ಬಳಸಿರುವುದು ಕಂಡುಬಂದಿದೆ.

ಇದೇ ವೇಳೆ, ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಕುರಿತು ಹಿಂದೆ ಉದ್ಭವಿಸಿದ್ದ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿದ ಬೆಂಬಲಿಗರು, ಅವರ ಪದವಿಗಳನ್ನು ದೆಹಲಿ ವಿಶ್ವವಿದ್ಯಾಲಯ ಮತ್ತು ಗುಜರಾತ್ ವಿವಿಗಳು ಹಲವು ವರ್ಷಗಳ ಹಿಂದೆ ದೃಢೀಕರಿಸಿವೆ ಎಂದು ಉಲ್ಲೇಖಿಸಿದರು.

ಮೋದಿ–ಟ್ರಂಪ್ ಮಾತುಕತೆಯಲ್ಲಿ ಭಾರತ-ಅಮೆರಿಕ ವ್ಯಾಪಾರ ಸಂಬಂಧಗಳ ಪ್ರಗತಿ, ಸಮುದ್ರಯಾನಿಕರ ಸುರಕ್ಷತೆ ಹಾಗೂ ಪ್ರಾದೇಶಿಕ ಸ್ಥಿರತೆ ಕುರಿತ ವಿಷಯಗಳು ಚರ್ಚೆಯಾಗಿವೆ. ಈ ಸಂದರ್ಭದಲ್ಲಿ ಟ್ರಂಪ್ ಅವರು ಮೋದಿ ಅವರನ್ನು ಉತ್ತಮ ಮಾತುಗಾರ, ಕಠಿಣ ಸಂಧಾನಕಾರ (tough negotiator) ಎಂದು ಪ್ರಶಂಸಿಸಿರುವುದಾಗಿ ವರದಿಯಾಗಿದೆ.

ಈ ಘಟನೆಯು ರಾಜಕೀಯ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಕೆಲವರು ಇದನ್ನು ಸಾಮಾನ್ಯ ರಾಜತಾಂತ್ರಿಕ ಕ್ರಮವೆಂದು ಪರಿಗಣಿಸಿದರೆ, ಇನ್ನು ಕೆಲವರು ಅದನ್ನು ರಾಜಕೀಯ ಟೀಕೆಗೆ ಬಳಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪರಿಷತ್‌ ಚುನಾವಣೆ: ಅಡ್ಡ ಮತದಾನ ಮಾಡಿಬಿಟ್ರಾ ಜಿ.ಟಿ ದೇವೇಗೌಡ? ಜೆಡಿಎಸ್ ಗೆ 'ಕೈ' ಕೊಟ್ರಾ GTD!

ಸಮಾಜವಾದಿ ಪಕ್ಷಕ್ಕೆ ಶಾಕ್: 25-26 ಸಂಸದರು ಪಕ್ಷ ತೊರೆಯಲು ಸಿದ್ಧ; ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸ್ಫೋಟಕ ಹೇಳಿಕೆ..!

ಅಂಗಾಂಗ ದಾನ ದಂಧೆ: ಕೇರಳದಾದ್ಯಂತ ಹಲವು ಆಸ್ಪತ್ರೆ, ನಿವಾಸಗಳ ಮೇಲೆ ED ದಾಳಿ

ಮಧ್ಯಪ್ರಾಚ್ಯ ಸಂಘರ್ಷ ಕೊನೆಗೂ ಅಂತ್ಯ: Pak ಮಧ್ಯಸ್ಥಿಕೆಯಲ್ಲಿ US-Iran ನಡುವೆ ಶಾಂತಿ ಒಪ್ಪಂದ; ನೌಕಾ ದಿಗ್ಬಂಧನ ತೆರವು, ತಕ್ಷಣದಿಂದಲೇ Hormuz ಜಲಸಂಧಿ ಓಪನ್‌..!

ಇದು ಅಂತಿಮ ಒಪ್ಪಂದವಲ್ಲ, ದುರ್ವರ್ತನೆ ತೋರಿದರೆ ಯುದ್ಧ ಪುನರಾರಂಭ: ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ

SCROLL FOR NEXT