ತ್ರಯಂಬಕೇಶ್ವರ ದೇಗುಲ ಅಮೃತಕುಂಡದಲ್ಲಿ ಶಿವಲಿಂಗ ದರ್ಶನ 
ದೇಶ

Video: ಹಲವು ವರ್ಷಗಳ ಬಳಿಕ ತ್ರಯಂಬಕೇಶ್ವರ ದೇಗುಲ ಅಮೃತಕುಂಡದಲ್ಲಿ ಶಿವಲಿಂಗ ದರ್ಶನ; ಭಕ್ತರಲ್ಲಿ ಸಂಭ್ರಮ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ದೇವಾಲಯದ ಸಂರಕ್ಷಣಾ ಕಾರ್ಯದ ಅಂಗವಾಗಿ ಸುಮಾರು 65 ಅಡಿ ಆಳದ ಅಮೃತಕುಂಡದ ನೀರನ್ನು ಹೊರಹಾಕಿ ಸ್ವಚ್ಛತಾ ಕಾರ್ಯ ಕೈಗೊಂಡಿತ್ತು.

ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪ್ರಸಿದ್ಧ ತ್ರಯಂಬಕೇಶ್ವರ ಜ್ಯೋತಿರ್ಲಿಂಗ ದೇವಾಲಯದಲ್ಲಿ ಹಲವು ವರ್ಷಗಳ ಬಳಿಕ ಅಪರೂಪದ ದೃಶ್ಯವೊಂದು ಭಕ್ತರ ಗಮನ ಸೆಳೆದಿದೆ.

ದೇವಾಲಯ ಆವರಣದಲ್ಲಿರುವ ಐತಿಹಾಸಿಕ ಅಮೃತಕುಂಡದ ತಳಭಾಗದಲ್ಲಿರುವ ಶಿವಲಿಂಗವು ಹಲವು ವರ್ಷಗಳ ನಂತರ ದರ್ಶನ ನೀಡಿದ್ದು, ಭಕ್ತರಲ್ಲಿ ಭಕ್ತಿ ಹಾಗೂ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ದೇವಾಲಯದ ಸಂರಕ್ಷಣಾ ಕಾರ್ಯದ ಅಂಗವಾಗಿ ಸುಮಾರು 65 ಅಡಿ ಆಳದ ಅಮೃತಕುಂಡದ ನೀರನ್ನು ಹೊರಹಾಕಿ ಸ್ವಚ್ಛತಾ ಕಾರ್ಯ ಕೈಗೊಂಡಿತ್ತು.

ಈ ವೇಳೆ ಕುಂಡದ ತಳಭಾಗದಲ್ಲಿದ್ದ ಶಿವಲಿಂಗವು ಸ್ಪಷ್ಟವಾಗಿ ಗೋಚರಿಸಿದೆ.

ಅಂದಹಾಗೆ ಅಮೃತಕುಂಡವು ಪೇಶ್ವೆ ಕಾಲದ ಐತಿಹಾಸಿಕ ಪರಂಪರೆಯನ್ನು ಹೊಂದಿದೆ ಎಂದು ನಂಬಲಾಗುತ್ತದೆ. ಈ ಕುಂಡದ ನೀರನ್ನು ತ್ರಯಂಬಕೇಶ್ವರ ದೇವಾಲಯದಲ್ಲಿ ಪ್ರತಿನಿತ್ಯ ನಡೆಯುವ ಪೂಜೆ ಹಾಗೂ ಅಭಿಷೇಕ ವಿಧಿವಿಧಾನಗಳಿಗೆ ಬಳಸಲಾಗುತ್ತದೆ.

ಧಾರ್ಮಿಕವಾಗಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಡುವ ಈ ಕುಂಡವು ದೇವಾಲಯದ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ.

ಶಿವಲಿಂಗ ದರ್ಶನದ ಸುದ್ದಿ ಹರಡುತ್ತಿದ್ದಂತೆ ಭಕ್ತರಲ್ಲಿ ಕುತೂಹಲ ಹೆಚ್ಚಾಗಿದ್ದು, ದೇಗುಲದತ್ತ ಭಕ್ತರ ಸಾಗರವೇ ದರ್ಶನಕ್ಕಾಗಿ ಹರಿದುಬರುತ್ತಿದೆ.

ಆದರೆ ಸುರಕ್ಷತಾ ಕಾರಣಗಳಿಂದ ಅಮೃತಕುಂಡದೊಳಗೆ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ದೇವಾಲಯ ಆಡಳಿತ ತಿಳಿಸಿದೆ. ಹೀಗಾಗಿ ಭಕ್ತರು ದೂರದಿಂದಲೇ ಶಿವಲಿಂಗದ ದರ್ಶನ ಪಡೆಯುತ್ತಿದ್ದಾರೆ.

ತ್ರಯಂಬಕೇಶ್ವರ ದೇವಾಲಯವು ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿ ಭೇಟಿ ನೀಡುತ್ತಾರೆ. ಹಲವು ವರ್ಷಗಳ ಬಳಿಕ ಅಮೃತಕುಂಡದಲ್ಲಿ ಶಿವಲಿಂಗವು ಗೋಚರಿಸಿರುವುದು ಧಾರ್ಮಿಕ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದ್ದು, ಭಕ್ತರಲ್ಲಿ ವಿಶೇಷ ಭಾವನಾತ್ಮಕ ಸಂಭ್ರಮಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜೂನ್ 30 ರಂದು ಸಭೆಗೆ ತೆಹ್ರಾನ್‌ ಮನವಿ ಮಾಡಿತ್ತು- ಟ್ರಂಪ್; ಮುಂದಿನ ದಿನಗಳಲ್ಲಿ ತಾಂತ್ರಿಕ ಮಾತುಕತೆಗಳ ನಿರೀಕ್ಷೆ ಇಲ್ಲ- ಇರಾನ್

ಚಾಮರಾಜನಗರ: ಟೈಯರ್ ಸ್ಪೋಟಗೊಂಡು ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು, 50 ಮಂದಿಗೆ ಗಾಯ

ಲಿಪ್ ಲಾಕ್ ದೃಶ್ಯದ ವೇಳೆ ನಟನಿಗೆ ರಕ್ತಬರುವಂತೆ ಕಚ್ಚಿದ್ರಾ ನಟಿ ಕಂಗನಾ ರಣಾವತ್? Video Viral

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಕೇರಳ ಕ್ರಿಕೆಟ್ ಕೋಚ್‌ಗೆ 99 ವರ್ಷ ಜೈಲು ಶಿಕ್ಷೆ; ಇನ್ನೂ 3 ಪ್ರಕರಣ ಬಾಕಿ!

ಮಂಗಳೂರು: ಸಿನಿಮೀಯ ಶೈಲಿಯಲ್ಲಿ ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ 20 ಲಕ್ಷ ರೂ. ದರೋಡೆ; ಪತ್ನಿ, ಮಗು ಅಪಹರಣ!