ನಾಮಪತ್ರ ಸಲ್ಲಿಸಿದ ನಟ ವಿಜಯ್ 
ದೇಶ

ಪೆರಂಬೂರಿನಿಂದ ನಾಮಪತ್ರ ಸಲ್ಲಿಸಿದ ನಟ ವಿಜಯ್; ದಳಪತಿ ಆಸ್ತಿ ಎಷ್ಟು ಗೊತ್ತಾ?

ನಾಮಪತ್ರವನ್ನು ಸಲ್ಲಿಸಿದ ಬಳಿಕ ತಮ್ಮ ಓಪನ್-ಟಾಪ್ ಪ್ರಚಾರ ವಾಹನದಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಜಯ್ ಅವರು, "ದುಷ್ಟ ಶಕ್ತಿ ಡಿಎಂಕೆ ಸರ್ಕಾರವನ್ನು ಮನೆಗೆ ಕಳುಹಿಸಬೇಕು" ಎಂದು ಕರೆ ನೀಡಿದರು.

ಪೆರಂಬೂರು: ತಮಿಳುನಾಡು ವಿಧಾನಸಭಾ ಚುನಾವಣೆ ರಂಗೇರುತ್ತಿದ್ದು, ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಅವರು ಸೋಮವಾರ ಚೆನ್ನೈನ ಪೆರಂಬೂರು ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.

ಇದೇ ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ನಟ ವಿಜಯ್‌ ಅವರು ಇಂದು ತಮ್ಮ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಿದರು.

ನಾಮಪತ್ರವನ್ನು ಸಲ್ಲಿಸಿದ ಬಳಿಕ ತಮ್ಮ ಓಪನ್-ಟಾಪ್ ಪ್ರಚಾರ ವಾಹನದಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಜಯ್ ಅವರು, "ದುಷ್ಟ ಶಕ್ತಿ ಡಿಎಂಕೆ ಸರ್ಕಾರವನ್ನು ಮನೆಗೆ ಕಳುಹಿಸಬೇಕು" ಎಂದು ಕರೆ ನೀಡಿದರು.

"ನಾವು ತಮಿಳುನಾಡನ್ನು ಉಳಿಸಬೇಕು. ಈ ದುಸ್ಥಿತಿಗೆ ಯಾರು ಹೊಣೆ? ದುಷ್ಟ ಶಕ್ತಿ ಡಿಎಂಕೆ ಈ ಪರಿಸ್ಥಿತಿಗೆ ಕಾರಣ, ಸ್ಟಾಲಿನ್ ಸರ್ ಕಾರಣ" ಎಂದು ಆರೋಪಿಸಿದರು.

"ನಾನು ಎಲ್ಲಾ ನೋವನ್ನು ಸಹಿಸಿಕೊಂಡು ನಿಮಗಾಗಿ ಮಾತ್ರ ಬಂದಿದ್ದೇನೆ (ರಾಜಕೀಯಕ್ಕೆ ಸೇರಿದ್ದೇನೆ). ನಾನು ಎಂದಿಗೂ ಸುಳ್ಳು ಹೇಳುವುದಿಲ್ಲ, ನಿಮ್ಮನ್ನು ಎಂದಿಗೂ ಮೋಸ ಮಾಡುವುದಿಲ್ಲ" ಎಂದು ವಿಜಯ್ ಭರವಸೆ ನೀಡಿದರು.

"ಜನವಿರೋಧಿ ಸರ್ಕಾರ ನಡೆಸುವ ಸ್ಟಾಲಿನ್ ಸರ್ ನಿಮಗೆ ಬೇಕೇ? ಅಥವಾ ಜನರನ್ನು ಪ್ರೀತಿಸುವ ವಿಜಯ್ ನಿಮಗೆ ಬೇಕೇ? ದಯವಿಟ್ಟು ಒಂದು ಅವಕಾಶ ನೀಡಿ ಮತ್ತು 'ಸೀಟಿ' ಚಿಹ್ನೆಗೆ ನಿಮ್ಮ ಮತ ನೀಡಿ" ಎಂದು ಅವರು ಹೇಳಿದರು.

ದಳಪತಿ ಆಸ್ತಿ ಎಷ್ಟು ಗೊತ್ತಾ?

ನಾಮಪತ್ರ ಸಲ್ಲಿಸಿದ ಬಳಿಕ ನಟ ವಿಜಯ್ ಅವರ ಆಸ್ತಿ ವಿವರ ತೀವ್ರ ಚರ್ಚೆಗೀಡಾಗಿದೆ. ವಿಜಯ್ ಅವರು ಒಟ್ಟು 520 ಕೋಟಿ ರೂ. ಆಸ್ತಿಯನ್ನು ಘೋಷಿಸಿದ್ದು, 405 ಕೋಟಿ ರೂಪಾಯಿ ಮೌಲ್ಯದ ಚಿರಾಸ್ತಿ ಮತ್ತು 115 ಕೋಟಿ ರೂಪಾಯಿ ಸ್ತಿರಾಸ್ತಿ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪೂರ್ವ ಏಷ್ಯಾ ಸಂಘರ್ಷ: ಅವಾಸ್ತವಿಕ, ಅಸಮಂಜಸ.. ಟ್ರಂಪ್ ರ 15 ಅಂಶಗಳ ಸಂಧಾನ ಪ್ರಸ್ತಾವನೆ ತಿರಸ್ಕರಿಸಿದ IRAN

ಬಾಗಲಕೋಟೆ ಉಪಚುನಾವಣೆ: ಸಿದ್ದರಾಮಯ್ಯ, ವಿಜಯೇಂದ್ರಗೆ ಪ್ರತಿಷ್ಠೆಯ ರಣಕಣ, ಭರ್ಜರಿ ಪ್ರಚಾರ!

ಅಕ್ರಮ ಸಂಬಂಧ: ಪತಿಯ ಕೊಂದು ಮಕ್ಕಳೊಂದಿಗೆ ಶವದ ಪಕ್ಕದಲ್ಲೇ ರಾತ್ರಿಯಿಡೀ ಮಲಗಿದ ಮಹಿಳೆ, ದರೋಡೆ ಕಥೆ ಸೃಷ್ಟಿ!

ಕೇಂದ್ರ ಒಪ್ಪಂದದಲ್ಲಿ ಸೇರಿಸಬೇಡಿ: RCB ಪರ ಆಡಲು ರಾಷ್ಟ್ರೀಯ ತಂಡ ತೊರೆಯಲು ಮುಂದಾದ ವಿದೇಶಿ ಆಟಗಾರ!

ಕೊನೆಗೂ ಪೆರಿಫೆರಲ್ ರಿಂಗ್ ರೋಡ್ ಗೆ ಟೆಂಡರ್ ಕರೆದ BDA; ಮೋಹನ್‌ದಾಸ್ ಪೈ ಹೇಳಿದ್ದೇನು?

SCROLL FOR NEXT