ಉತ್ತರ ಪ್ರದೇಶ ಪೊಲೀಸರಿಂದ ಎನ್ ಕೌಂಟರ್ 
ದೇಶ

ಒಂಟಿಯಾಗಿದ್ದ ಬುರ್ಕಾ ಮಹಿಳೆ ಎದೆ ಮುಟ್ಟಿ ಕಿರುಕುಳ ನೀಡಿದ ಮುಸ್ಲಿಂ ವ್ಯಕ್ತಿ: ಕಾಲಿಗೆ ಗುಂಡಿಕ್ಕಿ ಬಂಧಿಸಿದ UP ಪೊಲೀಸರು; Video

ಮೊರಾದಾಬಾದ್‌ನ ನಿರ್ಜನ ಬೀದಿಯಲ್ಲಿ ಬುರ್ಖಾ ಧರಿಸಿದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 45 ವರ್ಷದ ನೌಶಾದ್ ಎಂಬಾತನ ಕಾಲಿಗೆ ಗುಂಡಿಕ್ಕಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೊರಾದಾಬಾದ್‌ನ ನಿರ್ಜನ ಬೀದಿಯಲ್ಲಿ ಬುರ್ಖಾ ಧರಿಸಿದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 45 ವರ್ಷದ ನೌಶಾದ್ ಎಂಬಾತನ ಕಾಲಿಗೆ ಗುಂಡಿಕ್ಕಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಜಾಮಾ ಮಸೀದಿ ಬಳಿ ಪೊಲೀಸರು ಎನ್ಕೌಂಟರ್ ನಡೆಸಿದ್ದಾರೆ. ಆರೋಪಿ ವೃತ್ತಿಯಲ್ಲಿ ಮಹಿಳಾ ದರ್ಜಿಯಾಗಿದ್ದು ಅವಿವಾಹಿತ ಎಂದು ಹೇಳಲಾಗುತ್ತದೆ.

ಘಟನೆಯ ಎರಡು ದಿನಗಳ ನಂತರ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಗುರುತಿಸಿದರು. ನಂತರ ಆತನನ್ನು ಬಂಧಿಸಲು ಐದು ತಂಡಗಳು ನಿರಂತರ ಹುಡುಕಾಟ ನಡೆಸಿತ್ತು. ಆರೋಪಿಯು ಈ ಹಿಂದೆ ಹಲವಾರು ಮಹಿಳೆಯರಿಗೆ ಕಿರುಕುಳ ನೀಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಯಾರೂ ಆತನ ವಿರುದ್ಧ ಔಪಚಾರಿಕ ದೂರು ದಾಖಲಿಸಿಲ್ಲ. ಈ ಬಾರಿ ಸಿಸಿಟಿವಿ ಪುರಾವೆಗಳು ಹೊರಬಂದ ನಂತರ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ.

ಎಸ್ಪಿ ಸಿಟಿ ರಾನ್ ವಿಜಯ್ ಸಿಂಗ್ ಅವರ ಪ್ರಕಾರ, ಆರೋಪಿಯು ಮೊಘಲ್‌ಪುರ ಪೊಲೀಸ್ ಠಾಣೆ ಪ್ರದೇಶದ ರಾಮಗಂಗಾ ನದಿಯ ದಡದಲ್ಲಿ ಅಡಗಿಕೊಂಡಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಪಡೆದ ನಂತರ, ಪೊಲೀಸ್ ತಂಡಗಳು ಆ ಪ್ರದೇಶವನ್ನು ಸುತ್ತುವರೆದವು. ಪೊಲೀಸರು ಆರೋಪಿಯನ್ನು ಶರಣಾಗುವಂತೆ ಕೇಳಿಕೊಂಡರು. ಆದರೆ ಪ್ರತಿಯಾಗಿ ಆತ ಗುಂಡು ಹಾರಿಸಿದನು. ಆತ್ಮರಕ್ಷಣೆಗಾಗಿ, ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದರು. ಆತನ ಎಡಕಾಲಿಗೆ ಗುಂಡು ತಗುಲಿದ್ದು ನಂತರ ಸ್ಥಳದಲ್ಲೇ ಬಂಧಿಸಲಾಯಿತು ಎಂದರು.

ಆರೋಪಿಯಿಂದ ಪೊಲೀಸರು ಒಂದು ಪಿಸ್ತೂಲ್ ಮತ್ತು ಮೂರು ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಅಪರಾಧ ಇತಿಹಾಸವನ್ನು ಸಹ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪೊಲೀಸರು ಸಂತ್ರಸ್ತೆಯನ್ನು ಸಹ ಪತ್ತೆಹಚ್ಚಿದ್ದು ಆಕೆ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಿಸಿಟಿವಿ ದೃಶ್ಯಗಳಲ್ಲಿ ಬುರ್ಖಾ ಧರಿಸಿದ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆರೋಪಿ ಇದ್ದಕ್ಕಿದ್ದಂತೆ ಹಿಂದಿನಿಂದ ಬಂದು ಆಕೆಯ ಎದೆಯ ಭಾಗಕ್ಕೆ ಕೈಹಾಕಿ ಲೈಂಗಿಕ ಕಿರುಕುಳ ನೀಡಿದ್ದನು. ಮಹಿಳೆ ಕಿರುಚಿಕೊಂಡಾಗ ಆರೋಪಿ ಅಲ್ಲಿಂದ ಓಡಿಹೋಗಿದ್ದನು. ಇಡೀ ಘಟನೆ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರಿಗೆ ಸಹಾಯ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೇ ತಿಂಗಳಲ್ಲಿ ನಿರುದ್ಯೋಗ ದರ 5.5%ಕ್ಕೆ ಏರಿಕೆ; 11 ತಿಂಗಳಲ್ಲೇ ಗರಿಷ್ಠ ಮಟ್ಟ

ಶಕ್ತಿ ಯೋಜನೆಯಡಿ 'ಸ್ಮಾರ್ಟ್ ಕಾರ್ಡ್' ವಿತರಣೆಗೆ ಅಂತಿಮ ಸಿದ್ಧತೆ- ಸಚಿವ ಬೈರತಿ ಸುರೇಶ್

ಏನೇ ಶಾಂತಿ ಒಪ್ಪಂದವಾದ್ರೂ ನಾವು ಅಮೆರಿಕವನ್ನ ನಂಬಲ್ಲ: ಡೊನಾಲ್ಡ್ ಟ್ರಂಪ್ ಗೆ ಶಾಕ್ ಕೊಟ್ಟ Iran

ಮಜಾ ಭಾರತ-ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ಕಲಾವಿದ ನಟ ಸಿದ್ದಾರ್ಥ ಪರಸನೂರು ಅನುಮಾನಾಸ್ಪದ ಸಾವು!

'14 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ, ಖಿನ್ನತೆಗೆ ಒಳಗಾಗಿದ್ದೆ.. Cricket ಅನ್ನೇ ತೊರೆಯಬೇಕೆಂದಿದ್ದೆ': ಕನ್ನಡತಿ Shreyanka Patil ಆಘಾತಕಾರಿ ಹೇಳಿಕೆ

SCROLL FOR NEXT