ಚೆನ್ನೈ: ತಮಿಳುನಾಡು ವಿಧಾನಸಭೆಯ ವಿವಿಧ ಚುನಾವಣಾ ಸಮೀಕ್ಷೆಗಳ ಪ್ರಕಾರ, ವಿಜಯ್ ಕಿಂಗ್ ಮೇಕರ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಕುದುರೆ ವ್ಯಾಪಾರದ ವಿರುದ್ಧ ನಾಯಕರು ಎಚ್ಚರ ವಹಿಸಿದ್ದಾರೆ. ತಮಿಳುನಾಡಿನಲ್ಲಿ "ರೆಸಾರ್ಟ್ ರಾಜಕೀಯ"ದ ಆರಂಭವಾಗುವ ಸಾಧ್ಯತೆಯೂ ಹೆಚ್ಚಾಗಿದೆ.
ಫಲಿತಾಂಶ ಘೋಷಣೆಯಾದ ನಂತರ ಎಲ್ಲಾ ವಿಜೇತ ಟಿವಿಕೆ ಅಭ್ಯರ್ಥಿಗಳು ಪಕ್ಷದ ಪನೈಯೂರ್ ಪ್ರಧಾನ ಕಚೇರಿಗೆ ತಕ್ಷಣ ಬರುವಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಂತಿಮ ಸ್ಥಾನಗಳನ್ನು ಅವಲಂಬಿಸಿ, ಪ್ರತಿಸ್ಪರ್ಧಿ ಬಣಗಳಿಂದ ಯಾವುದೇ ಕುದುರೆ ವ್ಯಾಪಾರವನ್ನು ತಡೆಗಟ್ಟಲು ಟಿವಿಕೆ ತನ್ನ ಶಾಸಕರನ್ನು ರೆಸಾರ್ಟ್ ಸೇರಿದಂತೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬಹುದು ಎಂದು ಪಕ್ಷದ ಒಳಗಿನವರು ಹೇಳಿದ್ದಾರೆ.
ಪರಿಶೀಲನೆ ಹಂತದಲ್ಲಿ ಎಡಪ್ಪಾಡಿಯ ಟಿವಿಕೆ ಅಭ್ಯರ್ಥಿಯೊಬ್ಬರು ಸ್ವಲ್ಪಕಾಲ ನಾಪತ್ತೆಯಾಗಿದ್ದ ಘಟನೆ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಒತ್ತಡ ತಂತ್ರಗಳಿಗೆ ಗುರಿಯಾಗುವ ಸಾಧ್ಯತೆ ಬಗ್ಗೆ ಪಕ್ಷದೊಳಗೆ ಕಳವಳ ಮೂಡಿಸಿದೆ.
ಟುಡೇಸ್ ಚಾಣಕ್ಯ ನಿರ್ಗಮನ ಸಮೀಕ್ಷೆಯ ಪ್ರಕಾರ, ಟಿವಿಕೆ ಸುಮಾರು 63 ಸ್ಥಾನಗಳನ್ನು (11) ಗೆಲ್ಲಬಹುದು ಮತ್ತು ಅಂದಾಜು ಶೇ. 30 ರಷ್ಟು ಮತಗಳನ್ನು ಗಳಿಸಬಹುದು, ಡಿಎಂಕೆ ನೇತೃತ್ವದ ಮೈತ್ರಿಕೂಟದ ಹಿಂದೆ ನಿರ್ಣಾಯಕ ಮೂರನೇ ಶಕ್ತಿಯಾಗಿ ಸ್ಥಾನ ಪಡೆಯಬಹುದು ಎನ್ನಲಾಗಿದೆ.