ಗಾಯಕನ ಮೇಲೆ ನೋಟಿನ ಮಳೆ 
ದೇಶ

ಭಜನಾ ಗಾಯಕ ಕವಿರಾಜ್ ಜಿಗ್ನೇಶ್ ಮೇಲೆ ನೋಟಿನ ಮಳೆ ಸುರಿಸಿದ ಅಭಿಮಾನಿಗಳು, Video!

ಗುಜರಾತ್‌ನ ಭಜನಾ ಗಾಯಕ ಕವಿರಾಜ್ ಜಿಗ್ನೇಶ್ ಅವರ ಮೇಲೆ ಅಭಿಮಾನಿಗಳು ನೋಟಿನ ಮಳೆ ಸುರಿಸಿದ್ದಾರೆ. ಜುನಾಗಢದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಕವಿರಾಜ್ ಜಿಗ್ನೇಶ್ ಅವರನ್ನು ಜನರು ನೋಟುಗಳಿಂದ ಮುಚ್ಚಿದ್ದಾರೆ.

ಗುಜರಾತ್‌ನ ಭಜನಾ ಗಾಯಕ ಕವಿರಾಜ್ ಜಿಗ್ನೇಶ್ ಅವರ ಮೇಲೆ ಅಭಿಮಾನಿಗಳು ನೋಟಿನ ಮಳೆ ಸುರಿಸಿದ್ದಾರೆ. ಜುನಾಗಢದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಕವಿರಾಜ್ ಜಿಗ್ನೇಶ್ ಅವರನ್ನು ಜನರು ನೋಟುಗಳಿಂದ ಮುಚ್ಚಿದ್ದಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಕವಿರಾಜ್ ಜಿಗ್ನೇಶ್ ಅವರ ಸಾಂಪ್ರದಾಯಿಕ ದೀರೋ ಪ್ರದರ್ಶನದ ಸಮಯದಲ್ಲಿ, ಭಕ್ತರು ವೇದಿಕೆಗೆ ನುಗ್ಗಿದ ನಾಟಕೀಯ ದೃಶ್ಯಗಳು ಕಂಡುಬಂದಿತು. ಗಾಯಕನ ಮೇಲೆ ಕರೆನ್ಸಿ ನೋಟುಗಳನ್ನು ಎಸೆಯಲಾಯಿತು. ಅದು ಎಷ್ಟು ಎಂದರೇ ಗಾಯಕನಿಗೆ ಹಾಡಲು ಸಾಧ್ಯವಾಗದಷ್ಟು ನೋಟುಗಳಿಂದ ಮುಚ್ಚಲಾಯಿತು.

ಖರ್ಚುಗಳ ನಂತರ ಉಳಿದ ಹಣವನ್ನು ಅಹಿರ್ ಚಾರಿಟೇಬಲ್ ಟ್ರಸ್ಟ್‌ಗೆ ದೇಣಿಗೆ ನೀಡುವುದಾಗಿ ಸಂಘಟಕರು ಘೋಷಿಸಿದ್ದಾರೆ. ಇದನ್ನು ಅಹಮದಾಬಾದ್‌ನಲ್ಲಿ ಗುಜರಾತ್ ಬಾಲಕಿಯರ ಹಾಸ್ಟೆಲ್ ಮತ್ತು ಶಿಕ್ಷಣ ಸಂಕೀರ್ಣವನ್ನು ನಿರ್ಮಿಸಲು ಬಳಸಲಾಗುತ್ತದೆ.

ಕವಿರಾಜ್ ಜಿಗ್ನೇಶ್ ಅವರ 'ದಯಾರೋ' ಹಾಡಿಗೆ ಹಣದ ಸುರಿಮಳೆಯೇ ಹರಿದು ಬಂದಿತು. 'ದಯಾರೋ' ಎಂದರೇನು? ಇದು ಕಥೆಗಳು, ಹಾಸ್ಯಗಳು ಮತ್ತು ಸ್ತೋತ್ರಗಳನ್ನು ಒಳಗೊಂಡಿರುವ ಗುಜರಾತಿ ಜಾನಪದ ಗೀತೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜನರಲ್ ದ್ವಿವೇದಿ ಹೇಳಿಕೆ 'ಪ್ರಚೋದನಕಾರಿ'; ಇದು ವಿನಾಶಕ್ಕೆ ಕಾರಣವಾಗಬಹುದು: ಭಾರತಕ್ಕೆ ಪಾಕ್ ಸೇನೆ ಎಚ್ಚರಿಕೆ

ನಿರ್ಗತಿಕರಿಗೆ ಬಡವರಿಂದ ಸಹಾಯಹಸ್ತ: 3 ಮಕ್ಕಳ ವಿಧವೆಗೆ ಮನೆ ನಿರ್ಮಿಸಿಕೊಟ್ಟ ವಿಜಯಪುರದ ದಿನಗೂಲಿ ಕಾರ್ಮಿಕರು

ಆಟೋ-ಟ್ಯಾಕ್ಸಿ ಚಾಲಕರಿಗೆ ಮತ್ತೆ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ: 48 ಗಂಟೆಯಲ್ಲಿ 2ನೇ ಬಾರಿ CNG ದರ ಏರಿಕೆ, ಕೆಜಿಗೆ 1 ರೂ. ಹೆಚ್ಚಳ..!

ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಗುರಿಯಾಗಿಸಿ ಸಂಚಾರಕ್ಕೆ ಅಡ್ಡಿಪಡಿಸಿದರೆ ಸಹಿಸಲಾಗದು: ವಿಶ್ವಸಂಸ್ಥೆಯಲ್ಲಿ ಭಾರತ ಖಂಡನೆ

“ನಮ್ಮ ತಾಳ್ಮೆ ಪರೀಕ್ಷಿಸಬೇಡಿ; ಉಗ್ರ ಚಟುವಟಿಕೆ ನಿಲ್ಲಿಸದಿದ್ದರೆ ಭೂಪಟದಲ್ಲಿರಬೇಕಾ-ಇತಿಹಾಸದಲ್ಲಿರಬೇಕಾ ತೀರ್ಮಾನಿಸಿ”: ಪಾಕಿಸ್ತಾನಕ್ಕೆ ಭಾರತ ಖಡಕ್ ಎಚ್ಚರಿಕೆ

SCROLL FOR NEXT