ನಿತೀಶ್ ಕುಮಾರ್ 
ದೇಶ

ನಿತೀಶ್ ಕುಮಾರ್ ರಾಜೀನಾಮೆ ನಂತರ ಪಕ್ಷದ ಹೆಸರು ಬದಲಾವಣೆಗೆ ಮುಂದಾದ JDU; ಇಲ್ಲಿದೆ ಕಾರಣ...

ಝಾ ಅವರ ಈ ಪ್ರಸ್ತಾವನೆಗೆ ಬಿಹಾರ ಉಪಮುಖ್ಯಮಂತ್ರಿ ಬಿಜೇಂದ್ರ ಪ್ರಸಾದ್ ಯಾದವ್ ಮತ್ತು ಸಚಿವ ಶ್ರಾವಣ್ ಕುಮಾರ್ ಸೇರಿದಂತೆ ಹಿರಿಯ ಜೆಡಿಯು ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಪಾಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ತಮ್ಮ ಪಕ್ಷದ ಸರ್ವೋಚ್ಚ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಗೌರವಾರ್ಥವಾಗಿ, ಎರಡು ದಶಕಗಳಿಗೂ ಹೆಚ್ಚು ಹಳೆಯದಾದ ಪಕ್ಷದ ಹೆಸರನ್ನು 'ಜೆಡಿ-ಯು-ನಿತೀಶ್'(JD-U-Nitish) ಎಂದು ಮರುನಾಮಕರಣ ಮಾಡಲು ಜನತಾ ದಳ-ಯುನೈಟೆಡ್(ಜೆಡಿ-ಯು) ಮುಂದಾಗಿದೆ.

ಜೆಡಿ-ಯು ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಅವರು ಈ ಪ್ರಸ್ತಾಪ ಮಾಡಿದ್ದು, ಪಕ್ಷದ ಇಂದಿನ ಸ್ಥಾನಮಾನಕ್ಕೆ ನಿತೀಶ್ ಕುಮಾರ್ ಅವರೇ ಕಾರಣರಾಗಿದ್ದು, ಪಕ್ಷದ ಸಿದ್ಧಾಂತವು ಅವರ ರಾಜಕೀಯ ಆದರ್ಶದಲ್ಲಿ ಬೇರೂರಿದೆ. ಆದ್ದರಿಂದ, ಪಕ್ಷದ ಹೆಸರನ್ನು ಜೆಡಿ(ಯು)-ನಿತೀಶ್ ಎಂದು ಬದಲಾಯಿಸುವ ಬಗ್ಗೆ ನಾವು ಪರಿಗಣಿಸಬೇಕು ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಝಾ ಅವರ ಈ ಪ್ರಸ್ತಾವನೆಗೆ ಬಿಹಾರ ಉಪಮುಖ್ಯಮಂತ್ರಿ ಬಿಜೇಂದ್ರ ಪ್ರಸಾದ್ ಯಾದವ್ ಮತ್ತು ಸಚಿವ ಶ್ರಾವಣ್ ಕುಮಾರ್ ಸೇರಿದಂತೆ ಹಿರಿಯ ಜೆಡಿಯು ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಒಳ್ಳೆಯ ಸಲಹೆ. ಈ ವಿಷಯದ ಬಗ್ಗೆ ಔಪಚಾರಿಕ ಚರ್ಚೆ ನಡೆಯಲಿ. ಪಕ್ಷದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಇದಕ್ಕಿಂತ ಉತ್ತಮವಾದ ಪ್ರಸ್ತಾವನೆ ಮತ್ತೊಂದು ಇರಲು ಸಾಧ್ಯವಿಲ್ಲ. ಪಕ್ಷವು ಆದಷ್ಟು ಬೇಗ ಔಪಚಾರಿಕ ನಿರ್ಣಯವನ್ನು ತರಬೇಕೆಂದು ನಾನು ಸೂಚಿಸುತ್ತೇನೆ. ಅದನ್ನು ಸರ್ವಾನುಮತದಿಂದ ಅಂಗೀಕರಿಸಬೇಕು ಎಂದು ಶ್ರಾವಣ್ ಕುಮಾರ್ ಹೇಳಿದ್ದಾರೆ.

2003ರಲ್ಲಿ ಶರದ್ ಯಾದವ್ ನೇತೃತ್ವದ ಜನತಾದಳ ಮತ್ತು ಸಮತಾ ಪಕ್ಷದ ವಿಲೀನದ ಮೂಲಕ ಜೆಡಿಯು ಪಕ್ಷವೂ ರಚನೆಯಾಯಿತು. ಅಂದಿನಿಂದ 2016ರವರೆಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಶರದ್ ಯಾದವ್ ಸೇವೆ ಸಲ್ಲಿಸಿದ್ರೆ, ರಾಜ್ಯದಲ್ಲಿ ನಿತೀಶ್ ಕುಮಾರ್ ಮುನ್ನೆಡೆಸಿದ್ದರು. 2017ರಲ್ಲಿ ಶರದ್ ಯಾದವ್ ಪಕ್ಷ ಬಿಟ್ಟ ಬಳಿಕ ನಿತೀಶ್ ಕುಮಾರ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಲೋಕೋಪಯೋಗಿ ಇಲಾಖೆಯಲ್ಲಿ 'ಲಂಚ'; ವಿದೇಶಿ ಷೇರು ಹೂಡಿಕೆ ಇತ್ಯಾದಿ; ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದೇನು? EDಯಿಂದ ಅಧಿಕೃತ ಹೇಳಿಕೆ

BRICS 2026: ಪುಟಿನ್-ಮೋದಿ ಮಾತುಕತೆ: ಕಪ್ಪು ಸಮುದ್ರದಲ್ಲಿ ಭಾರತೀಯರ ಸುರಕ್ಷತೆಯ ವಿಷಯ ಪ್ರಸ್ತಾಪ ರಷ್ಯಾ ಅಧ್ಯಕ್ಷ ಹೇಳಿದ್ದೇನು?

BRICS 2026: Modi-Putin ಭೇಟಿ; ಆಪ್ತ ಮಿತ್ರನಿಗೆ ಪ್ರಧಾನಿಯಿಂದ ಪವಿತ್ರ, ವಿಶೇಷ ಉಡುಗೊರೆ! Video

ಜಾಗತಿಕ ಭೌಗೋಳಿಕ-ರಾಜಕೀಯ ಅನಿಶ್ಚಿತತೆ: ರಾಜಕೀಯ ಒತ್ತಡ ಹೇರಲು ಆರ್ಥಿಕ ಅಸ್ತ್ರ ಬಳಕೆ, ಬ್ರಿಕ್ಸ್ ಪ್ರತಿಕ್ರಿಯೆ ಏನು? ಇರಾನ್ ಅಧ್ಯಕ್ಷರ ಪ್ರಶ್ನೆ!

ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು: ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಹೇಳಿಕೆಗೆ ರಾಹುಲ್​​ ಗಾಂಧಿ ಆಕ್ಷೇಪ