ಅತ್ಯಾಚಾರ ಸೇರಿದಂತೆ ಹಲವು ಆರೋಪ ಎದುರಿಸುತ್ತಿರುವ ನಿತ್ಯಾನಂದ ಕೈಲಾಸ ದೇಶದಲ್ಲಿರುವುದಾಗಿ ಹೇಳಿಕೊಂಡಿದ್ದಾನೆ.ತಮಿಳು ಚಿತ್ರರಂಗದ ದಿಗ್ಗಜರುಗಳಾದ ರಜನಿಕಾಂತ್, ಕಮಲ್ ಹಾಸನ್ ಹಾಗೂ ತ್ರಿಷಾ, ವಿಜಯ್, ಅಜಿತ್ ಅವರನ್ನು ಟೀಕಿಸುವ ಮೂಲಕ ಸುದ್ದಿಯಲ್ಲಿರುವ ಮೀರಾ ಮಿಥುನ್ಇದೀಗ ನಿತ್ಯಾನಂದನನ್ನು ಹೊಗಳುವ ಮೂಲಕ ಮತ್ತೊಮ್ಮೆ ಮೀರಾ ಮಿಥುನ್ ಸಂಚಲನ ಸೃಷ್ಟಿಸಿದ್ದಾರೆ.ನಾನೂ ಕೂಡಾ ಆದಷ್ಟು ಬೇಗ ಕೈಲಾಸ ಕ್ಕೆ ತೆರಳಲು ಕಾತುರಳಾಗಿದ್ದೇನೆ ಎಂದು ಮೀರಾ ಮಿಥುನ್ ಹೇಳಿಕೊಂಡಿದ್ದಾರೆ.ನಿತ್ಯಾನಂದನ ಕೈಲಾಸ ದೇಶವನ್ನು ಮೀರಾ ಮಿಥುನ್ ಕೊಂಡಾಡಿದ್ದಾರೆನಿತ್ಯಾನಂದನನ್ನು ಎಲ್ಲರೂ ಟೀಕಿಸುತ್ತಿದ್ದಾರೆ. ಆದರೆ ಕೈಲಾಸ ದೇಶದ ಮುಖ್ಯಸ್ಥರಾಗಿ ದಿನ ದಿನಕ್ಕೂ ಬಲಿಷ್ಟಗೊಳ್ಳುತ್ತಿದ್ದಾರೆ ಎಂದು ಮೀರಾ ಮಿಥುನ್ ಹೊಗಳಿ ಅಟ್ಟಕ್ಕೆ ಏರಿಸಿದ್ದಾರೆ.