ಸಿನಿಮಾ

ಉದಯೋನ್ಮುಖ ಸಂಗೀತ ನಿರ್ದೇಶಕಿ ಮಾನಸ ಹೊಳ್ಳ

Srinivasamurthy VN
ಗಾಯಕಿಯಾಗಿ ಸಂಗೀತಪ್ರಿಯರ ಮನಸೂರೆಗೊಂಡ ಅವರು, ಈಗ ಉದಯೋನ್ಮುಖ ಸಂಗೀತ ನಿರ್ದೇಶಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಈಚೆಗೆ ಅವರ ಸಂಗೀತ ನಿರ್ದೇಶನವಿರುವ 'ಕನಸು ಮಾರಾಟಕ್ಕಿದೆ' ಚಿತ್ರ ತೆರೆಕಂಡಿದೆ.
ಗಾಯಕಿಯಾಗಿ ಸಂಗೀತಪ್ರಿಯರ ಮನಸೂರೆಗೊಂಡ ಅವರು, ಈಗ ಉದಯೋನ್ಮುಖ ಸಂಗೀತ ನಿರ್ದೇಶಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಈಚೆಗೆ ಅವರ ಸಂಗೀತ ನಿರ್ದೇಶನವಿರುವ 'ಕನಸು ಮಾರಾಟಕ್ಕಿದೆ' ಚಿತ್ರ ತೆರೆಕಂಡಿದೆ.
ಅದಕ್ಕೂ ಮೊದಲು ಅವರು 6 ಟು 6 ಅನ್ನೋ ಸಿನಿಮಾಕ್ಕೆ ಸಂಗೀತ ನೀಡುವ ಮೂಲಕ ಗಾಯನದಿಂದ ಬಡ್ತಿ ಪಡೆದುಕೊಂಡಿದ್ದರು. ಬಯಲು ಸೀಮೆ, ಮನಸಾಗಿದೆ ಹಾಗೂ ಇನ್ನೂ ಹೆಸರಿಡದ ಒಂದು ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ.
ಮಾನಸಾ ಹೊಳ್ಳ. ಗಾಯಕಿಯಾಗಿ ಹೆಸರು ಪಡೆದಿರುವ ಅವರು, 200ಕ್ಕೂ ಅಧಿಕ ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದಾರೆ. ತಮಿಳಿನಲ್ಲಿ 5, ತುಳುವಿಲ್ಲಿ 3 ಹಾಗೂ ತೆಲುಗು ಭಾಷೆಯಲ್ಲಿ 2 ಹಾಡುಗಳನ್ನು ಹಾಡಿರುವುದು ವಿಶೇಷ.
ಹಂಸಲೇಖ, ವಿ. ಹರಿಕೃಷ್ಣ, ಅರ್ಜುನ್ ಜನ್ಯ, ಗಣೇಶ ನಾರಾಯಣ್, ಇಳೆಯರಾಜ ಅವರ ಪುತ್ರ ಕಾರ್ತಿಕ್ ರಾಜ, ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನದ ಹಾಡುಗಳಿಗೆ ಧ್ವನಿಯಾಗಿದ್ದಾರೆ.
'ಕಣ್ಣಿಗು ಕಣ್ಣಿಗು...', 'ಉಪಕಾರ ಸುಮನ್ನಿದ್ದರೆ..', 'ಒಲವಿನ ಕಿರಣಕೆ..', 'ನನಗು ನಿನಗು..', 'ಅಚ್ಚಾಗಿದೆ ಹೃದಯದ ಈ ಸ್ನೇಹ...', 'ಬಂದಂತೆ ರಾಜ ಕುಮಾರ..', 'ಆಗಿದೆ ಆಗಿದೆ ನನ್ನ ಜನುಮ ಸಾರ್ಥಕ..' ಮುಂತಾದ ಅವರ ಗಾಯನದ ಹಾಡುಗಳು ಹಿಟ್ ಆಗಿವೆ.
ಇದರ ಜೊತೆಗೆ 20 ಧಾರಾವಾಹಿಗಳಿಗೂ ಶೀರ್ಷಿಕೆ ಗೀತೆಯನ್ನು ಹಾಡಿದ್ದಾರೆ.
SCROLL FOR NEXT