ಸಿನಿಮಾ

ಧ್ರುವ ನಕ್ಷತ್ರ ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದ ಸೆಲಬ್ರಿಟಿಗಳು: ಅಪ್ಪು ಬಗ್ಗೆ ಅವರ ಒಪ್ಪತಕ್ಕ ಮಾತುಗಳು 

Harshavardhan M
ಕಾಲಿವುಡ್ ನಟ ಧನುಷ್: ಪುನೀತ್ ನನ್ನ ಸ್ನೇಹಿತ. ಅವರ ಅಗಲಿಕೆ ಆಘಾತ ತಂದಿದೆ.
ಕಾಲಿವುಡ್ ನಟ ಧನುಷ್: ಪುನೀತ್ ನನ್ನ ಸ್ನೇಹಿತ. ಅವರ ಅಗಲಿಕೆ ಆಘಾತ ತಂದಿದೆ.
ನಿರ್ದೇಶಕ ರಾಜಮೌಳಿ: ಪುನೀತ್ ರನ್ನು ಎರಡು ಬಾರಿ ಭೇಟಿಯಾಗಿದ್ದೇ. ಆಗ ಅವರು ತೋರಿದ ಆಥಿಥ್ಯವನ್ನು ಎಂದಿಗೂ ಮರೆಯುವುದಿಲ್ಲ.
ಕಾಲಿವುಡ್ ನಟ ಅಜಿತ್: ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ದುರದೃಷ್ಟಕರ. ಕುಟುಂಬವರ್ಗಕ್ಕೆ, ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ.
ಬಾಲಿವುಡ್ ನಟ ಅನಿಲ್ ಕಪೂರ್: ಆಘಾತ ಮತ್ತು ತುಂಬಾ ಬೇಸರದ ಸಂಗತಿ. ಅವರ ಕುಟುಂಬವರ್ಗಕ್ಕೆ ನನ್ನ ಸಂತಾಪಗಳು.
ಬಾಲಿವುಡ್ ನಟಿ ತಾಪ್ಸಿ ಪನ್ನು: ಅನಿಷ್ಚಿತತೆ ಜೀವನದ ಬಹು ದೊಡ್ಡ ಪಾಠ ಕಲಿಸುತ್ತಿದೆ. ಚಿಕ್ಕ ವಯಸ್ಸಿನಲ್ಲಿ ಏನೂ ಅವಘಡ ಸಂಭವಿಸುವುದಿಲ್ಲ ಎನ್ನುವ ನಂಬಿಕೆಯನ್ನು ಬದುಕು ಹುಸಿಗೊಳಿಸುತ್ತಿದೆ.
ಬಾಲಿವುಡ್ ನಟಿ ಸ್ವರ ಭಾಸ್ಕರ್: ಪುನೀತ್ ರಾ ಕುಮಾರ್ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಸಂತಾಪ ಭರಿಸುವ ಶಕ್ತಿ ಕರುಣಿಸಲಿ.
ಗಾಯಕಿ ಶ್ರೇಯಾ ಘೋಷಾಲ್: ವಿಧಿ ತುಂಬಾ ಕ್ರೂರಿ. ಇಷ್ಟು ಚಿಕ್ಕ ವಯಸ್ಸಿಗೇ ಸೂಪರ್ ಸ್ಟಾರ್ ಆಗಿದ್ದ ಪುನೀತ್ ರನ್ನು ನಮ್ಮಿಂದ ಕಸಿದುಕೊಂಡಿದೆ.
ಬಾಲಿವುಡ್ ನಟ ಅನುಪಂ ಖೇರ್: ಪುನೀತ್ ಅವರ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಅವರ ಗುಣಗಾನ ಮಾಡುತ್ತಿದ್ದಾರೆ. ಅವರ ನಿಧನ ಅಭಿಮಾನಿಗಳಿಗೆ ಹಾಗೂ ಕುಟುಂಬಕ್ಕೆ ನಷ್ಟವನ್ನುಂಟು ಮಾಡಿದೆ.
ಟಾಲಿವುಡ್ ನಟ ರಾಮ್ ಚರಣ್: ನನ್ನ ನೆಚ್ಚಿನ ಪುನೀತ್ ರಾಜ್ ಕುಮಾರ್ ನಿದ್ಘನರಾಗಿದ್ದಾರೆ ಎನ್ನುವುದನ್ನು ನನ್ನಿಂದ ಅರಗಿಸಿಕೊಳ್ಲಲು ಆಗುತ್ತಿಲ್ಲ. ಸೋದರ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.
ಕಾಲಿವುಡ್ ನಟ ಕಮಲ್ ಹಾಸನ್: ನಾವೆಲ್ಲರೂ ಒಂದೇ ಕುಟುಂಬದಂತೆ ಇದ್ದೆವು. ಕರ್ನಾತಕದ ಅವರ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬವರ್ಗಕ್ಕೆ ನನ್ನ ಸಂತಾಪಗಳು.
ಬಾಲಿವುಡ್ ನಟ ಸಂಜಯ್ ದತ್: ನಾನು ಭೇಟಿ ಮಾಡಿದ ಸಿಂಪಲ್ ಹಾಗೂ ಒಳ್ಳೆಯ ವ್ಯಕ್ತಿ ಪುನೀತ್.
ನಟಿ ಹನ್ಸಿಕಾ ಮೋಟ್ವಾನಿ: ಅವರಷ್ಟು ಪ್ಯಾಷನೇಟ್, ವಿನಮ್ರ ಹಾಗೂ ಹೃದ್ಯ ವ್ಯಕ್ತಿ ಇನ್ನಿಲ್ಲ ಎನ್ನುವುದನ್ನು ನಂಬಲು ನನ್ನಿಂದ ಆಗುತ್ತಿಲ್ಲ.
ಬಾಲಿವುಡ್ ನಟಿ ಯಾಮಿ ಗೌತಮ್: ಪುನೀತ್ ಅವರ ಕುಟುಂಬಕ್ಕೆ ಹಾಗೂ ಅವರ ಅಸಂಖ್ಯ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.
ಮಾಲಿವುಡ್ ನಟ ಮಮ್ಮೂಟಿ: ಪುನೀತ್ ನಮ್ಮನ್ನು ಅಗಲಿದ್ದಾರೆ ಎನ್ನುವ ಸಂಗತಿ ಅಘಾತ ತರುವಂಥದ್ದು. ಇಡೀ ಚಿತ್ರರಂಗಕ್ಕೇ ತುಂಬಲಾರದ ನಷ್ತ.
ಟಾಲಿವುಡ್ ನಟ ಮಹೇಶ್ ಬಾಬು: ನಾನು ಭೇಟಿ ಮಾಡಿದ ವಿನಮ್ರ ವ್ಯಕ್ತಿಗಳಲ್ಲಿ ಪುನೀತ್ ಅವರೂ ಒಬ್ಬರು. ಅವರ ಕುಟುಂಬಕ್ಕೆ ದೇವರು ಪುನೀತ್ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ.
ಟಾಲಿವುಡ್ ನಟ ಪವನ್ ಕಲ್ಯಾಣ್: ಪುನೀತ್ ಬಾಲ ನಟರಾಗಿ ಅಭಿನಯಿಸಿದ್ದ ಬೆಟ್ಟದ ಹೂ ಸಿನಿಮಾ ನೋಡಿದಾಗಿನಿಂದ ಅವರು ನನಗೆ ಪ್ರೀತಿ ಪಾತ್ರರು. ಇಷ್ಟು ಬೇಗನೆ ನಿಧನರಾಗಿರುವುದು ದುರಾದೃಷ್ಟ.
ರಶ್ಮಿಕಾ ಮಂದಣ್ಣ: ಪುನೀತ್ ಸರ್ ನೀವೆಲ್ಲೇ ಇರಿ, ಯಾವತ್ತಿನಂತೆ ನಗುತ್ತಾ ಇರುತ್ತೀರಿ ಎಂದು ನಂಬಿದ್ದೇನೆ.
ಕಾಲಿವುಡ್ ನಟಿ ಸಮಂತಾ: ಬಹಳ ಬೇಗನೆ ನಮ್ಮನ್ನು ಬಿಟ್ಟು ಅಗಲಿದ್ದಾರೆ.
ಬಾಲಿವುಡ್ ನಟ ಸೋನು ಸೂದ್: ಸಹೋದರ ನಿಮ್ಮನ್ನು ಯಾವತ್ತೂ ಮಿಸ್ ಮಾಡಿಕೊಳ್ಳುತ್ತೇನೆ
ಬಾಲಿವುಡ್ ನಟ ರಣ್ ವೀರ್ ಶೋರೆ: ತುಂಬಾ ಶಾಕಿಂಗ್. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ
ಕಾಲಿವುಡ್ ನಟ ಮಾಧವನ್: ನನಗೆ ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ. ಇದು ನಿಜ ಎಂದು ನಂಬಲು ಸಾಧ್ಯವಾಗುತ್ತಿಲ್ಲ.
ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್: ಪುನೀತ್ ಅವರ ಹಠಾತ್ ಅಗಲಿಕೆ ಅಘಾತ ತಂದಿದೆ. ಲಕ್ಷಾಂತರ ಮಂದಿಯ ಹೃದಯ ಗೆದ್ದಿದ್ದ ಆತ ಒಬ್ಬ ಅತ್ಯುತ್ತಮ ನಟ.
ಕಾಲಿವುಡ್ ನಟ ಸಿದ್ಧಾರ್ಥ್: ಈ ಸುದ್ದಿಯನ್ನು ನಂಬಲು ನನ್ನಿಂದ ಆಗುತ್ತಿಲ್ಲ. ನಿರ್ಭೀತ ಸ್ವಭಾವದ, ಒಳ್ಲೆಯ ಹೃದಯವಂತ ವ್ಯಕ್ತಿತ್ವದ ಪುನೀತ್ ಇನ್ನಷ್ಟು ಸಾಧನೆ ಮಾಡುವವರಿದ್ದರು.
ಬಾಲಿವುಡ್ ನಟ ವಿವೇಕ್ ಒಬೆರಾಯ್: ಅಪ್ಪು ನಿಮ್ಮನ್ನು ನಾವೆಲ್ಲರೂ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನೀವು ನಮ್ಮ ಹೃದಯಗಳಲ್ಲಿ ಜೀವಂತವಾಗಿರುತ್ತೀರಿ.
ಟಾಲಿವುಡ್ ನಟ ವರುಣ್ ತೇಜ್: ಇದು ಶಾಕಿಂಗ್ ನ್ಯೂಸ್. ದುರಾದೃಷ್ಟಕರವಾದುದು. ಕುಟುಂಬ ಹಾಗೂ ಫ್ಯಾನ್ ಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.
ನಟಿ ಪೂಜಾ ಹೆಗ್ಡೆ: ನನ್ನ ಕಿವಿಗಳನ್ನೇ ನಂಬಲಾಗುತ್ತಿಲ್ಲ. ಭಾರತೀಯ ಸಿನಿಮಾರಂಗಕ್ಕೆ ತುಂಬಲಾರದ ನಷ್ಟ. ನನ್ನ ಮೊದಲ ಸಿನಿಮಾ ಶೋನಲ್ಲಿ ಅವರನ್ನು ಭೇಟಿ ಮಾಡಿದ್ದೆ. ತುಂಬಾ ಒಳ್ಳೆಯ ವ್ಯಕ್ತಿ ಅವರಾಗಿದ್ದರು.
ಮಲಯಾಳಂ ನಟ ದುಲ್ಖರ್ ಸಲ್ಮಾನ್: ಹೃದಯದಿಂದ ತುಂಬಾ ಒಳ್ಳೆಯ ವ್ಯಕ್ತಿ. ಆ ದೇವರು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ.
ನಟಿ ತಮನ್ನಾ ಭಾಟಿಯಾ: ಶಾಕ್ ಆಗಿದ್ದೇನೆ, ದುಃಖಿತಳಾಗಿದ್ದೇನೆ. ಅದನ್ನು ತೋರ್ಪಡಿಸಲು ಪದಗಳೇ ಸಿಗುತ್ತಿಲ್ಲ.
ಬಾಲಿವುಡ್ ನಟ ಅಭಿಷೇಕ್ ಬಚ್ಚನ್: ಚಿಕ್ಕ ವಯಸ್ಸಿಗೇ ಅಗಲಿದ್ದು ಶಾಕಿಂಗ್. ಪುನೀತ್ ಅಭಿಮಾನಿಗಳಿಗೆ, ಕುಟುಂಬವರ್ಗಕ್ಕೆ ನನ್ನ ಸಂತಾಪಗಳು.
ಟಾಲಿವುಡ್ ನಟ ಚಿರಂಜೀವಿ: ಕನ್ನಡ ಹಾಗೂ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಕುಟುಂಬವರ್ಗಕ್ಕೆ ನನ್ನ ಸಂತಾಪಗಳು.
ಮಲಯಾಳಂ ನಟ ಪೃಥ್ವಿರಾಜ್: ತುಂಬಾ ನೋವುಂಟುಮಾಡುವ ಸಂಗತಿ. ಅವರ ಲಕ್ಷಾಂತರ ಅಭಿಮಾನಿಗಳು ಮತ್ತು ಕುಟುಂಬವರ್ಗಕ್ಕೆ ನೋವನ್ನು ಸಹಿಸುವ ಶಕ್ತಿ ಕರುಣಿಸಲಿ.
ಟಾಲಿವುಡ್ ನಟ ಜೂನಿಯರ್ ಎನ್ ಟಿ ಆರ್: ಹೃದಯ ಒಡೆದಿದೆ. ಪುನೀತ್ ನಮ್ಮನ್ನೆಲ್ಲ ಬಿಟ್ಟು ಬೇಗನೆ ಹೋಗಿಬಿಟ್ಟಿದ್ದಾರೆ.
ಬಾಲಿವುಡ್ ನಟ ಅಜಯ್ ದೇವಗನ್: ಪುನೀತ್ ಅವರ ಸಾಧನೆ, ದಂತಕಥೆಯಾಗಿ ಉಳಿಯಲಿದೆ.
ನರೇಂದ್ರ ಮೋದಿ: ಒಬ್ಬ ಪ್ರತಿಭಾನ್ವಿತ ಕಲಾವಿದನನ್ನು ವಿಧಿ ನಮ್ಮಿಂದ ಕಿತ್ತುಕೊಂಡಿದೆ. ಇದು ಅವರು ಸಾಯುವ ವಯಸ್ಸಲ್ಲ.
ರಾಹುಲ್ ಗಾಂಧಿ: ಕನ್ನಡ ನಟ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು: ಬಾಲನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುನೀತ್ ಕಲಾವಿದನಾಗಿ, ಗಾಯಕನಾಗಿ ಅಪ್ರತಿಮ ಸಾಧನೆ ತೋರಿದವರು. ಅವರು ಬಹುಮುಖ ಪ್ರತಿಭೆ.
ಸಿಎಂ ಬಸವರಾಜ ಬೊಮ್ಮಾಯಿ: ಕರ್ನಾತಕದ ಅತ್ಯಂತ ಪ್ರೀತಿಪಾತ್ರ ಸೂಪರ್ ಸ್ಟಾರ್ ಆದ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿರುವುದು ತುಂಬಾ ಬೇಸರ ತಂದಿದೆ. ಭಗವಂತ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬವರ್ಗ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ.
ತಮಿಳುನಾಡು ಸಿಎಂ ಸ್ಟಾಲಿನ್: ಚಿತ್ರರಂಗದ ದಂತಕಥೆ ರಾಜ್ ಕುಮಾರ್ ಅವರ ಪುತ್ರ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ತೀವ್ರ ಆಘಾತ ತಂದಿದೆ.
ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್: ಪುನೀತ್ ರಾಜ್ ಕುಮಾರ್ ಅವರು ಉಜ್ವಲ ನಕ್ಷತ್ರದಂತಿದ್ದರು. ಇನ್ನಷ್ಟು ಎತ್ತರಕ್ಕೆ ಅವರು ಏರುತ್ತಿದ್ದರು. ಅವರ ಅಗಲಿಕೆಯ ನಷ್ಟವನ್ನು ಭರಿಸುವ ಶಕ್ತಿ ಅಭಿಮಾನಿಗಳಿಗೆ, ಕುಟುಂಬದವರಿಗೆ ಸಿಗಲಿ.
SCROLL FOR NEXT