ಯಾರೂ ತಾನೆ ಸದಾ ಸುದ್ದಿಯಲ್ಲಿಬೇಕು ಎಂದು ಭಾವಿಸುವುದಿಲ್ಲ. ಅದರಲ್ಲೂ ಈ ಬಾಲಿವುಡ್ ನಟಿಯರು ಸಹ ಒಂದಿಲ್ಲೊಂದು ಪೋಟೋಗಳನ್ನು ಅಪ್ಲೋಡ್ ಮಾಡಿ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸುತ್ತಿರುತ್ತಾರೆ. ಆದರೆ ಇದೀಗ ಇಬ್ಬರು ನಟಿ ಮಣಿಯರು ತಮ್ಮ ಖಾಸಗಿ ಬದುಕನ್ನು ಬೀದಿಗೆ ತಂದು ಜಗಳವಾಡುತ್ತಿದ್ದಾರೆ. 
ಸಿನಿಮಾ

ಯಾಕಾಗಿ ಈ ಜಗಳ: 'ನಿನ್ನ ಕಣ್ಣಿಗೆ ರಣವೀರ್ ಕಾಣಲಿಲ್ವಾ'; ಸಾಮಾಜಿಕ ಮಾಧ್ಯಮದಲ್ಲಿ ಕಿತ್ತಾಡಿಕೊಂಡ ನಟಿಮಣಿಯರು!

ಯಾರೂ ತಾನೆ ಸದಾ ಸುದ್ದಿಯಲ್ಲಿಬೇಕು ಎಂದು ಭಾವಿಸುವುದಿಲ್ಲ. ಅದರಲ್ಲೂ ಈ ಬಾಲಿವುಡ್ ನಟಿಯರು ಸಹ ಒಂದಿಲ್ಲೊಂದು ಪೋಟೋಗಳನ್ನು ಅಪ್ಲೋಡ್ ಮಾಡಿ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸುತ್ತಿರುತ್ತಾರೆ. ಆದರೆ ಇದೀಗ ಇಬ್ಬರು ನಟಿ ಮಣಿಯರು ತಮ್ಮ ಖಾಸಗಿ ಬದುಕನ್ನು ಬೀದಿಗೆ ತಂದಿದ್ದಾರೆ.

ಸದ್ಯದ ಮಟ್ಟಿಗೆ ತಮ್ಮ ವಿಭಿನ್ನ ಹಾಗೂ ಸಖತ್ ಹಾಟ್ ಉಡುಪುಗಳನ್ನು ತೊಡುವ ಮೂಲಕ ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದಲ್ಲಿ ಹಲ್ ಚಲ್ ಸೃಷ್ಟಿಸುತ್ತಿರುತ್ತಾರೆ. ಆಕೆಯ ಫೋಟೋಗಳು ಅಭಿಮಾನಿಗಳು ದಂಗಾಗುವಂತೆ ಮಾಡುತ್ತವೆ.
ಮತ್ತೊಂದೆಡೆ ಕಿರುತೆರೆ ನಟಿ ಚಹತ್ತ್ ಖನ್ನಾ ಸಹ ತಮ್ಮ ಬಿಕಿನಿ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಆದರೆ ಚಹತ್ತ್ ಖನ್ನಾ ಕಣ್ಣು ಇದೀಗ ಉರ್ಫಿ ಜಾವೇದ್ ಮೇಲೆ ಬಿದ್ದಿವೆ. ಅದು ನಟಿಯ ಮೇಲಿನ ಈರ್ಷ್ಯೆಯೋ ಅಥವಾ ಅಸೂಯೆಯೋ ಒಟ್ಟಿನಲ್ಲಿ ಚಹತ್ತ್ ಖನ್ನಾ ಉರ್ಫಿ ವಿರುದ್ಧ ಪೋಸ್ಟ್ ಮಾಡಿದ್ದಾರೆ.
ಚಹತ್ತ್ ಖನ್ನಾ ತಮ್ಮ ಪೋಸ್ಟ್ ನಲ್ಲಿ, ಅರ್ಧಂಬರ್ಧ ಬಟ್ಟೆಗಳನ್ನು ತೊಟ್ಟು ಮಾಧ್ಯಮಗಳ ಮುಂದೆ ಬಂದರೆ ಬಿಟ್ಟಿಪ್ರಚಾರ ಸಿಗುತ್ತದೆ. ಇನ್ನು ಬಂಡವಾಳ ಮಾಡಿಕೊಂಡು ಉರ್ಫಿ ಜಾವೇದ್ ನಂತಾ ನಟಿಯರು ಮಾಧ್ಯಮಗಳ ಮುಂದೆ ಹರೆಬರೆ ಬಟ್ಟೆಗಳನ್ನು ತೊಟ್ಟು ಬರುತ್ತಿದ್ದಾರೆ. ಅಲ್ಲದೆ ಇದನ್ನೇ ಫ್ಯಾಷನ್ ಎಂದು ಕರೆಯುತ್ತಿದ್ದಾರೆ. ಈ
ಇದಕ್ಕೆ ಉರ್ಫಿ ಸಹ ತಿರುಗೇಟು ಕೊಟ್ಟಿದ್ದು ನಾನು ಹಣವನ್ನು ಸ್ವಂತವಾಗಿ ದುಡಿಯುತ್ತಿದ್ದೇನೆ. ನಾನು ನಿನ್ನ ಹಾಗೇ ಇಬ್ಬರು ಗಂಡಂದರಿಗೆ ವಿಚ್ಛೇದನ ಕೊಟ್ಟು ಅವರು ಕೊಡುವ ಜೀವನಾಂಶದಿಂದ ಬದುಕುತ್ತಿಲ್ಲ ಎಂದು ಕುಟುಕಿದ್ದಾರೆ.
ಚಹತ್ತ್ ಖನ್ನಾ ಅಷ್ಟೊಂದು ಮಡಿವಂತಿಕೆ ಇದ್ದರೆ ನೀವು ನಿಮ್ಮ ನಗ್ನ ಬೆನ್ನಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೀರಾಲ್ಲ ಅದೇನು? ಎಂದು ಉರ್ಫಿ ಪ್ರಶ್ನಿಸಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ ನನ್ನ ಬಗ್ಗೆ ಇಷ್ಟೇಲ್ಲಾ ಮಾತನಾಡುತ್ತೀಯಲ್ಲ. ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಬೆತ್ತಲೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಅದನ್ನು ಯಾಕೆ ಪ್ರಶ್ನಿಸುವುದಿಲ್ಲ. ನಿನ್ನದು ಬೂಟಾಟಿಕೆ ಎಂದು ಕುಟುಕಿದ್ದಾರೆ.
ಉರ್ಫಿ ಜಾವೇದ್
ಉರ್ಫಿ ಜಾವೇದ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂನ ಮಧ್ಯಂತರ ಆದೇಶ ವಿದ್ಯಾರ್ಥಿಗಳ ವಿರುದ್ಧ ದುರ್ಬಳಕೆಯಾಗುವ ಸಾಧ್ಯತೆ: 'ಕಿರುಕುಳ' ಮುಂದುವರಿದರೆ ಸರಿ ಇರಲ್ಲ- ದೀಪ್ಕೆ ವಾರ್ನಿಂಗ್!

ಪ್ರಹ್ಲಾದ್ ಜೋಶಿ ಕೊಳಕು ಮನುಷ್ಯ; ಅತ್ಯಾಚಾರಿಯನ್ನು ರಕ್ಷಿಸುವವರು ನೂತನ ಶಿಕ್ಷಣ ಸಚಿವರಾಗಿದ್ದಾರೆ: ರಾಹುಲ್ ಗಂಭೀರ ಆರೋಪ, Video

Gen-Z ಗಳಿಗೆ ʻಜನರೇಷನ್‌ ಗಟರ್‌ʼಎಂದ ಕಂಗನಾ ರಣಾವತ್; ಅವರನ್ನು ಬಿಜೆಪಿಯೇ ಗಂಭೀರವಾಗಿ ಪರಿಗಣಿಸಿಲ್ಲ, ಸಿಜೆಪಿ ತಿರುಗೇಟು! Video

ದೆಹಲಿಗೆ ಬಂದು ನಾಟಕವಾಡುವ ನಿಮಗೆ KPSC ಹಗರಣ ಅನ್ಯಾಯ ಅನಿಸಲಿಲ್ಲವೇ?: ಲೋಕಸಭೆಯಲ್ಲಿ ಸಿಎಂ ಶಿವಕುಮಾರ್ ವಿರುದ್ಧ ತೇಜಸ್ವಿ ವಾಗ್ದಾಳಿ!

NEET ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ಹಿಂಪಡೆಯಲು ಮಹಾರಾಷ್ಟ್ರ ಸರ್ಕಾರ ಮುಂದು!