ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಮೇಕ್ರಿ ಸರ್ಕಲ್ ನಿಂದ ಹೆಬ್ಬಾಳ ಕಡೆಗೆ ಹೋಗುವ ಹಾದಿಯಲ್ಲಿ ಮೇಲ್ಸೇತುವೆ ಪಕ್ಕದಲ್ಲಿ ಗೋಡೆಯ ಮೇಲೆ ಚಿತ್ತಾಕರ್ಷಕ ಬರಹಗಳು, ಚಿತ್ರಗಳನ್ನು ಹಲವರು ಕಂಡಿರಬಹುದು.
ಇಲ್ಲಿ ಹಲವು ಮಹಿಳೆಯರು-ಪುರುಷರು ಕೈಯಲ್ಲಿ ಪೈಂಟ್ -ಬ್ರಷ್ ಹಿಡಿದುಕೊಂಡು ಏಕಚಿತ್ತದಿಂದ ಮನಸಾರೆ ಗೋಡೆಯ ಮೇಲೆ ಕೈಯಾಡಿಸುತ್ತಿದ್ದರು. ಅಲ್ಲಿ ರಸ್ತೆಯಲ್ಲಿ ಹೋಗುವವರು-ಬರುವವರು ಒಂದು ಕ್ಷಣ ಅತ್ತ ಕಡೆ ಕಣ್ಣಾಡಿಸದೆ ಹೋಗದಿರಲಿಕ್ಕಿಲ್ಲ.ಹೀಗೆ ಗೋಡೆ ಮೇಲೆ ಬಣ್ಣ ಬಣ್ಣದ ಚಿತ್ತಾಕರ್ಷಕ ಬರಹ, ಚಿತ್ರ ಮೂಡಿಸಿದವರು ಸುಮನಾ ಫೌಂಡೇಶನ್ ಎಂಬ ಸರ್ಕಾರೇತರ ಸಂಘಟನೆಯ ಕಾರ್ಯಕರ್ತರು. ಸುಂದರ ಮನಸಿನ ನಾಗರಿಕ ವೇದಿಕೆ ಎಂದು ಟ್ಯಾಗ್ ಲೈನ್ ಇಟ್ಟುಕೊಂಡಿರುವ ಸುಮನಾ ಫೌಂಡೇಶನ್ ನಲ್ಲಿ ಸಾವಿರಾರು ಯುವಕ-ಯುವತಿಯರು, ಎಂಜಿನಿಯರ್ ಗಳು, ವೈದ್ಯರು, ಪ್ರೊಫೆಸರ್ ಗಳು, ವಿದ್ಸುಮನಾ ಫೌಂಡೇಶನ್ ನ ಸ್ಥಾಪಕಿ ಹಾಗೂ ನಿರ್ದೇಶಕಿ ಡಾ ಸುನಿತಾ ಮಂಜುನಾಥ್. ನಮ್ಮ ಸಂಸ್ಥೆ ನಗರದಲ್ಲಿ ಸ್ವಚ್ಛತಾ ಅಭಿಯಾನ, ಪರಿಸರ ರಕ್ಷಣೆ, ಮಹಿಳಾ ಸಶಕ್ತೀಕರಣ, ದೀನದಲಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಭಾರತೀಯ ಸಂಸ್ಕೃತಿ ಮತ್ತು ಪದ್ಧತಿಗಳನ್ನು ಎತ್ತಿಹಿಡಿಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎನ್ನುತ್ತಾರೆ ಡಾ ಸುನಸುಮನಾ ಫೌಂಡೇಶನ್ ಇದುವರೆಗೆ 100ಕ್ಕೂ ಹೆಚ್ಚು ಕಡೆಗಳಲ್ಲಿ ಸ್ವಚ್ಛ ಭಾರತ ಅಭಿಯಾನ, ಗೋಡೆಗಳ ಮೇಲೆ ಸುಂದರ ಚಿತ್ರಗಳು, ಸಂದೇಶಗಳ ಮೂಲಕ ಜನತೆಯಲ್ಲಿ ಅರಿವು, ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.ಜನರಲ್ಲಿ ಜಾಗೃತಿ, ಅರಿವು ಮೂಡಿಸುವ ಬರಹಗಳನ್ನು ಬರೆಯುತ್ತಾರೆ.ಇತ್ತೀಚೆಗೆ ಸುಮನಾ ಫೌಂಡೇಶನ್ ವತಿಯಿಂದ ನಡೆದ ಜಾಗೃತಿ ಅಭಿಯಾನ ಕಾರ್ಯದಲ್ಲಿ ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಕೈಜೋಡಿಸಿದ್ದರು.ಕೇಂದ್ರ ಸಚಿವ ಸದಾನಂದ ಗೌಡ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿರುವುದುFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos