ಇಂದು ಸೋಷಿಯಲ್ ಮೀಡಿಯಾ ತುಂಬ ಪ್ರಧಾನಿ ನರೇಂದ್ರ ಮೋದಿಯವರು ಸಫಾರಿ ಸೂಟ್ ನಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ನಡೆಸಲು ಸಜ್ಜಾಗಿ ಹೋಗುತ್ತಿರುವ ಫೋಟೋ ಹರಿದಾಡುತ್ತಿದೆ. 
ಕರ್ನಾಟಕ

ಸಫಾರಿ ಸೂಟ್ ನಲ್ಲಿ 'ಹೀರೋ' ನಂತೆ ಮಿಂಚಿದ ಪ್ರಧಾನಿ ನರೇಂದ್ರ ಮೋದಿ

ಇಂದು ಸೋಷಿಯಲ್ ಮೀಡಿಯಾ ತುಂಬ ಪ್ರಧಾನಿ ನರೇಂದ್ರ ಮೋದಿಯವರು ಸಫಾರಿ ಸೂಟ್ ನಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ನಡೆಸಲು ಸಜ್ಜಾಗಿ ಹೋಗುತ್ತಿರುವ ಫೋಟೋ ಹರಿದಾಡುತ್ತಿದೆ.

ಪ್ರಧಾನಿ ಮೋದಿಯವರ ಫೋಟೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಹೀರೋನಂತೆ ಕಂಗೊಳಿಸುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇಂದು ಬೆಳಗ್ಗೆ ಅದಕ್ಕೂ ಮುನ್ನ ಹೆಲಿಕಾಪ್ಟರ್ ನಲ್ಲಿ ಬಂಡೀಪುರ ಅಭಯಾರಣ್ಯಕ್ಕೆ ಬಂದಿಳಿದ ಪ್ರಧಾನಿ ಮೋದಿಯವರನ್ನು ಅರಣ್ಯಾಧಿಕಾರಿಗಳು ಬರಮಾಡಿಕೊಂಡರು. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜನಪ್ರತಿನಿಧಿಗಳು ಭಾಗವಹಿಸಿಲ್ಲ.
ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳ ಆವಾಸ ಸ್ಥಾನವಾಗಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಯೋಜನೆಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಹಾಗೂ 'ಪ್ರಾಜೆಕ್ಟ್ ಟೈಗರ್' 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಬಂಡೀಪುರ ಅರಣ್ಯದಲ್ಲಿ ಪ್ರಧಾನಿ ಮೋದಿ ಸಫಾರಿ ನಡೆಸಿದ್ದಾರೆ.
ಹುಲಿ ರಕ್ಷಿತಾರಣ್ಯದಲ್ಲಿ ಸುಮಾರು 15 - 20 ಕಿ.ಮೀ. ವರೆಗೆ ಮೋದಿ 2 ಗಂಟೆಗಳ ಕಾಲ ಸಫಾರಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಈ ಫೋಟೋದಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್‌ ಮಾಡಿದರೆ, ಎಲ್ಲ ಕಾಲಗಳ ಹೀರೋ ಎಂದು ಇನ್ನೊಬ್ಬರು ಹಂಚಿಕೊಂಡಿದ್ದಾರೆ. ಪ್ರಧಾನಿ ಧರಿಸಿರುವ ಹ್ಯಾಟ್‌ ಚೆನ್ನಾಗಿದೆ ಎಂದು ಮತ್ತೊಬ್ಬರು ಹೇಳಿದ್ದರೆ, ಇನ್ನೊಬ್ಬರು ಮೋದಿ ಎನರ್ಜೆಟಿಕ್‌ ಆಗಿ ಕಾಣುತ್ತಿದ್ದಾರೆ ಎಂದೂ ನೆಟ್ಟಿಗರೊಬ್
ಬಂಡೀಪುರ ಲೋಗೋ ಇರುವ ಸೂಟ್ ಧರಿಸಿ ಕ್ಯಾಮರಾಕ್ಕೆ ಹುಲಿಯ ಚಿಹ್ನೆ ಮುಂದೆ ಫೋಸ್ ನೀಡಿದ ಪ್ರಧಾನಿ ನರೇಂದ್ರ ಮೋದಿ
ಕ್ಯಾಮರಾದಲ್ಲಿ ಅರಣ್ಯದ ಸೌಂದರ್ಯಗಳನ್ನು ಸವಿಯುತ್ತಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
ಕ್ಯಾಮರಾದೊಂದಿಗೆ ಸಜ್ಜಾಗಿ ನಿಂತಿರುವ ಪ್ರಧಾನ ಮಂತ್ರಿಗಳು
ಕರ್ನಾಟಕ ಸರ್ಕಾರದ ಜೀಪ್ ನಲ್ಲಿ ಸಫಾರಿ ಸಾಗುತ್ತಿರುವ ಪ್ರಧಾನ ಮಂತ್ರಿಗಳು
ಕ್ಯಾಮರಾದಲ್ಲಿ ಸೆರೆಹಿಡಿಯಲು ಪ್ರಯತ್ನ
ಕಾಡೆಮ್ಮೆಗಳ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ ಪ್ರಧಾನ ಮಂತ್ರಿಗಳು
ಜಿಂಕೆಗಳು
ಕ್ಯಾಮರಾದಲ್ಲಿ ಸೆರೆಹಿಡಿಯುವ ಪ್ರಯತ್ನ
ಸಿಂಗಳಿಕ ಪ್ರಧಾನ ಮಂತ್ರಿಗಳ ಕ್ಯಾಮರಾದಲ್ಲಿ ಕಂಡುಬಂದಿದ್ದು ಹೀಗೆ
ದಟ್ಟಡವಿಯಲ್ಲಿ ಸಾಗುತ್ತಿರುವ ಆನೆಗಳು
ಸಫಾರಿ ಸಾಗುತ್ತಾ ಪ್ರಧಾನಿಗಳಿಂದ ವೀಕ್ಷಣೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಮ್ಮ ಪೋಸ್ಟ್‌ಗಳನ್ನು ಡಿಲೀಟ್ ಮಾಡಬಹುದು, ಆದರೆ ನಮ್ಮನ್ನು ಅಳಿಸಲು ಸಾಧ್ಯವಿಲ್ಲ': Cockroach Janta Party ಸಂಸ್ಥಾಪಕ ಅಭಿಜೀತ್ ದೀಪ್ಕೆ

ಸಿಎಂ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಕಾಯುತ್ತೇನೆ: Ramalinga Reddy

Z-Plus ಭದ್ರತೆ ವಾಪಸ್ ಪಡೆದ ಸರ್ಕಾರ: ಹೊಸ ಭದ್ರತಾ ವ್ಯವಸ್ಥೆ ತಿರಸ್ಕರಿಸಿದ ಲಾಲು ಪ್ರಸಾದ್, ರಾಬ್ರಿ ದೇವಿ!

Cricket: ಸೂರ್ಯಗೆ ಗೇಟ್ ಪಾಸ್, Shreyas Iyer ನೂತನ ನಾಯಕ, ಕೊನೆಗೂ Vaibhav Sooryavanshi ಪದಾರ್ಪಣೆ, ಕೊಹ್ಲಿ ಬದಲಿಗೆ ಯಾರು?

ಐಪಿಎಲ್ ವಿಡಿಯೋ ವಿವಾದ: 'ಭಾವನೆಗಳ ಉಲ್ಲಂಘನೆ, ಇನ್ನು ಸಾಕು ಮಾಡಿ'; ನಟಿ Nushrratt Bharuccha ಅಳಲು

SCROLL FOR NEXT