ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಅವರು ಅನಾರೋಗ್ಯದಿಂದಾಗಿ ಡಿ.23ರಂದು ಸಾವನ್ನಪ್ಪಿದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. 
ಹಿನ್ನೋಟ 2014

ನಮ್ಮನ್ನಗಲಿದ ಗಣ್ಯರು 2014

ಹಾಲಿವುಡ್ ಹೆಸರಾಂತ ಹಾಸ್ಯ ಕಲಾವಿದ ರಾಬಿನ್ ವಿಲಿಯಮ್ಸ್ ಅವರು ಮಾನಸಿಕವಾಗಿ ಘಾಸಿಗೊಂಡು ಆ.11 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಹೆಸರಾಂತ ಛಾಯಾಗ್ರಾಹಕ ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ವಿ.ಕೆ. ಮೂರ್ತಿ ಅವರು ಏ.7ರಂದು ಸಾವನ್ನಪ್ಪಿದ್ದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಖ್ಯಾತ ಮಲೆಯಾಳಂ ಚಿತ್ರ ನಿರ್ದೇಶಕ ಪಿ.ರಾಮದಾಸ್ ಅವರು ಮಾರ್ಚ್ 27ರಂದು ಸಾವನ್ನಪ್ಪಿದ್ದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಖ್ಯಾತ ಕಾದಂಬರಿಕಾರ, ಪತ್ರಕರ್ತರಾದ ಕುಶ್ವಂತ್ ಸಿಂಗ್ ಅವರು ಮಾರ್ಚ್ 20 ರಂದು ಇಹಲೋಕ ತ್ಯಜಿಸಿದರು. ಅವರಿಗೆ 99 ವರ್ಷ ವಯಸ್ಸಾಗಿತ್ತು.
ಹಾಲಿವುಡ್ ಚಿತ್ರರಂಗದ ಬಾಲ ನಟಿ ಶರ್ಲಿ ಟೆಂಪಲ್ ಅವರು ಫೆ.10 ರಂದು 85 ವರ್ಷದ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರು.
ಹೆಸರಾಂತ ಲೇಖಕ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಅಮರ್ ಕಾಂತ್ ಅವರು ಫೆ.17ರಂದು 89ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದರು.
ತಮಿಳು ಚಿತ್ರರಂಗ ಹೆಸರಾಂತ ನಿರ್ದೇಶಕ ಬಾಲು ಮಹೇಂದ್ರ ಅವರು ಫೆ.13ರಂದು ತಮ್ಮ 74ನೇ ವರ್ಷ ವಯಸ್ಸಿನಲ್ಲಿ ಸಾವನ್ನಪ್ಪಿದ್ದರು.
ಭಾರತೀಯ ಸಂಗೀತ ರಂಗದ ಖ್ಯಾತ ಗಾಯಕಿ ಜುತಿಕಾ ರಾಯ್ ಅವರು ಫೆ.5ರಂದು ತಮ್ಮ 94ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದರು.
ಅಮೆರಿಕಾದ ಖ್ಯಾತ ಗೀತ ರಚನೆಗಾರ ಹಾಗೂ ಜಾನಪದ ಸಂಗೀತಗಾರ ಪೀಟರ್ ಸೀಗರ್ ಅವರು ಜ.27ರಂದು ವಿಧಿವಶರಾಗಿದ್ದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಖ್ಯಾತ ಬೆಂಗಾಲಿ ಚಿತ್ರ ನಟಿ ಹಾಗೂ ಬಾಲಿವುಡ್ ನಟಿ ಸುಚಿತ್ರ ಸೇನ್ ಬೆಂಗಾಲಿ ಅವರು ಅನಾರೋಗ್ಯದಿಂದಾಗಿ ಜ.17 ರಂದು ಸಾವನ್ನಪ್ಪಿದ್ದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಕರ್ನಾಟಕ ಸಬ್‌ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಅವರು ರೌಡಿ ಶೀಟರ್ ಒಬ್ಬನನ್ನು ಬಂಧಿಸಲು ಹೋಗಿ ಆತನ ಗುಂಡೇಟಿಗೆ ಬಲಿಯಾಗಿ ಜ.15ರಂದು ಹತ್ಯೆಗೀಡಾಗಿದ್ದರು. ಅವರಿಗೆ 40 ವರ್ಷ ವಯಸ್ಸಾಗಿತ್ತು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಮಿಳು ಚಿತ್ರರಂಗದ ಖ್ಯಾತ ನಟಿ ಅಂಜಲಿ ದೇವಿ ಅವರು ಜ.13 ರಂದು ಸಾವನ್ನಪ್ಪಿದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಹಾಕಿ ಪಿತಾಮಹಾ ಎಂದೇ ಖ್ಯಾತರಾಗಿದ್ದ ಮಲೇಷ್ಯಾದ ಹಾಕಿ ಸಂಸ್ಥೆಯ ಅಧ್ಯಕ್ಷ ಸುಲ್ತಾನ್ ಅಜ್ಲನ್ ಶಾ ಅವರು ಮೇ.28ರಂದು ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ತೆಲುಗು ಚಿತ್ರರಂಗದಲ್ಲಿ ತೆಲಂಗಾಣ ಶಕುಂತಲಾ ಎಂದೇ ಖ್ಯಾತಿಗಳಿಸಿದ್ದ ಖ್ಯಾತ ನಟಿ ಶಕುಂತಲಾ ಅವರು ಜೂನ್ 14ರಂದು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ತೆಲಂಗಾಣ ಪ್ರದೇಶದ ಸಂಸದರಾಗಿಯೂ ಕೂಡ ಅವರು ಸೇವೆ ಸಲ್ಲಿಸಿದ್ದರು.
ಹಿಂದಿ ಕಿರುತೆರೆಯ ಹೆಸರಾಂತ ಕಲಾವಿದ ದೇವನ್ ವರ್ಮಾ ಅವರಿಗೆ ಡಿ.2 ರಂದು ಬಂದ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಎನ್‌ಟಿಆರ್ ಮೊಮ್ಮಗ ಹಾಗೂ ತೆಲುಗು ಚಿತ್ರರಂಗದ ಹೆಸರಾಂತ ನಿರ್ಮಾಪಕ, ನಿರ್ದೇಶಕ ಜಾನಕಿ ರಾಮ್ ಅವರು ರಸ್ತೆ ಅಪಘಾತದಿಂದಾಗಿ ಡಿ.6 ರಂದು ಸಾವನ್ನಪ್ಪಿದ್ದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.
ತೆಲುಗು ಚಿತ್ರರಂಗದ ಹೆಸರಾಂತ ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ಚಕ್ರಿ ಅವರಿಗೆ ಡಿ.15 ರಂದು ಉಂಟಾದ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದರು. ಅವರಿಗೆ 40 ವರ್ಷ ವಯಸ್ಸಾಗಿತ್ತು.
ಖ್ಯಾತ ಬಾಲಿವುಡ್ ನಟ ಸದಾಶಿವ್ ಅಮ್ರಾಪುರ್ಕರ್ ಅವರು ನವೆಂಬರ್ 3ರಂದು ಶ್ವಾಸಕೋಶ ಸಂಬಂಧಿ ಖಾಯಿಲೆಗೆ ತುತ್ತಾಗಿ ಸಾವನ್ನಪ್ಪಿದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.
ಸಿಪಿಎಂ ಪಕ್ಷದ ಸಂಸ್ಥಾಪಕ ಎಂ.ವಿ. ರಾಘವನ್ ಅವರು ನವೆಂಬರ್ 9 ರಂದು ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಖ್ಯಾತ ಬಾಲಿವುಡ್ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ರವಿ ಚೋಪ್ರಾ ಅವರು ಶ್ವಾಸಕೋಶ ಸಂಬಂಧಿ ಖಾಯಿಲೆಯಿಂದಾಗಿ ನವೆಂಬರ್ 12ರಂದು ಸಾವನ್ನಪ್ಪಿದರು.
ಮ್ಯಾಂಡೊಲಿನ್ ವಾದಕ ಉಪ್ಪಲು ಶ್ರೀನಿವಾಸ್ ಅವರು ಯಕೃತಿ ಕಸಿ ಶಸ್ತ್ರ ಚಿಕಿತ್ಸೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದರು. ಅವರಿಗೆ 45 ವರ್ಷ ವಯಸ್ಸಾಗಿತ್ತು.
ಖ್ಯಾತ ಯೋಗಗುರು ಬಿಕೆಎಸ್ ಅಯ್ಯಂಗಾರ್ ಅವರು ಆಗಸ್ಟ್ 20ರಂದು ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.
ಕನ್ನಡ ಖ್ಯಾತ ಲೇಖಕ ಯುಆರ್ ಅನಂತಮೂರ್ತಿ ಅವರು ಆಗಸ್ಟ್ 22 ರಂದು ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ದೇಹತ್ಯಾಗ ಮಾಡಿದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಖ್ಯಾತ ಇತಿಹಾಸಕಾರ ಬಿಪಿನ್ ಚಂದ್ರ ಅವರು ಆಗಸ್ಟ್ 30ರಂದು ನಿಧನರಾದರು.
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಹಾಗೂ ಧೀರ್ಘಾಯುಷಿ ಎಂದು ಖ್ಯಾತಿ ಗಳಿಸಿದ್ದ ಜೊಹ್ರಾ ಸೆಹ್ಗಲ್ ಅವರು ಜು.10 ರಂದು ಹೃದಯ ಸ್ತಂಭನದಿಂದಾಗಿ ಸಾವನ್ನಪ್ಪಿದ್ದರು. ಅವರಿಗೆ 102 ವರ್ಷ ವಯಸ್ಸಾಗಿತ್ತು
ಮಹಾರಾಷ್ಟ್ರದ ಪ್ರಭಾವಿ ರಾಜಕಾರಣಿಯಾಗಿದ್ದ ಗೋಪಿನಾಥ್ ಮುಂಡೆ ಅವರು ಜೂನ್ 3ರಂದು ನಡೆದ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದರು. ಬಿಜೆಪಿ ಮತ್ತು ಶಿವಸೇನೆ ಮೈತ್ರೀಕೂಟದ ಸರ್ಕಾರದಲ್ಲಿ ಸಚಿವರಾಗಿ ಸೇವೆಸಲ್ಲಿಸಿದ್ದರು. ಇತ್ತೀಚೆಗೆ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ
ತೆಲುಗು ಚಿತ್ರರಂಗದ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರ ರಾವ್ (ಎಎನ್‌ಆರ್) ಅವರು ಕ್ಯಾನ್ಸರ್ ರೋಗ ಪೀಡಿತರಾಗಿ ಜ.22ರಂದು ಸಾವನ್ನಪ್ಪಿದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ನಮ್ಮ ಶಕ್ತಿ ಇರಾನ್ ನಿರ್ನಾಮಕ್ಕೆ ಮೀಸಲು, ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲ್ಲ: ಅಮೆರಿಕ

ಮಾರ್ಚ್ 16 ರಂದು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

ಬ್ರದರ್ ನಿಮಗೆ ತೊಂದರೆಯಾಗಿದ್ದರೆ ಇರಾನ್‌ಗೆ ಹೋಗಿ ಹೋರಾಡಿ: ಯುಪಿ ಪೊಲೀಸ್ ಅಧಿಕಾರಿ ಹೀಗೆ ಹೇಳಿದ್ದು ಯಾರಿಗೆ?

SCROLL FOR NEXT