ಇರಾನ್ ಜತೆಗಿನ ಆರ್ಥಿಕ ಸಂಬಂಧ ಸುಧಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 22 ಮತ್ತು 23ರಂದು ತೆಹ್ರಾನ್ ಗೆ ಭೇಟಿ ನೀಡಿದ್ದರು. ಈ ಭೇಟಿ ವೇಳೆ ಚಾಬಹಾರ್ ಬಂದರು ಒಪ್ಪಂದ ಸೇರಿ 12 ಒಪ್ಪಂದಗಳಿಗೆ ಸಹಿ ಮಾಡಲಾಗಿದೆ.
 
ಹಿನ್ನೋಟ 2015

ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ-2015-16

ದ್ವಿಪಕ್ಷೀಯ ಮಾತುಕತೆ ಸಂಬಂಧ ಏಪ್ರಿಲ್ 2 ಮತ್ತು 3 ರಂದು ಸೌಧಿ ಅರೇಬಿಯಾದ ರಾಜಧಾನಿ ರಿಯಾದ್ ಗೆ ಭೇಟಿ ನೀಡಿದರು.
ಬೆಲ್ಜಿಯಂ ಭೇಟಿ ಮುಗಿಸಿದ ಪ್ರಧಾನಿ ಮೋದಿ ಅವರು ಪರಮಾಣು ಭದ್ರತಾ ಶೃಂಗದಲ್ಲಿ ಪಾಲ್ಗೊಳ್ಳಲು ಮಾರ್ಚ್ 31 ಹಾಗೂ ಏಪ್ರಿಲ್ 1 ರಂದು ಅಮೆರಿಕದ ವಾಷಿಂಗ್ಟನ್ ಗೆ ಭೇಟಿ.
ಯೂರೋಪಿನ್ ಯೂನಿಯನ್ ಸಮಿತಿಯಲ್ಲಿ ಭಾಗವಹಿಸುವ ಸಲುವಾಗಿ 2016ರ ಮಾರ್ಚ್ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಲ್ಜಿಯಂಗೆ ತೆರಳಿದ್ದರು. ಈ ವೇಳೆ ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್ ಮೈಕೆಲ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.
ಜುಲೈ-7 ಕಝಕಿಸ್ತಾನ ಪ್ರವಾಸ, ರಕ್ಷಣಾ ಕ್ಷೇತ್ರ, ಸೇನಾ ಸಹಕಾರ, ಯುರೇನಿಯಂ ಪೂರೈಕೆಗೆ ಸಂಬಂಧಿಸಿದಂತೆ ಐದು ಪ್ರಮುಖ ಒಪ್ಪಂದಗಳಿಗೆ ಸಹಿ.
ಜುಲೈ-6 ಉಜ್ಬೇಕಿಸ್ತಾನಕ್ಕೆ ಭೇಟಿ: ಉಜ್ಬೇಕಿಸ್ತಾನ ಅಧ್ಯಕ್ಷ ಇಸ್ಲಾಮ್‌ ಕಾರಿಮೊವ್‌ ಅವರೊಂದಿಗೆ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಮಾತುಕತೆ. ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ನಿಯಮಾವಳಿಗಳ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೂರು ಒಪ್ಪಂದಗಳಿಗೆ ಸಹಿ. 
41 ವರ್ಷದಿಂದ ಬಗೆಹರಿಯದೇ ಉಳಿದಿದ್ದ ಗಡಿ ವಿವಾದ ಬಗೆಹರಿಸಿದ್ದು ಮಹತ್ವದ ಮೈಲಿಗಲ್ಲು.
ಜೂನ್- 6-7 ಬಾಂಗ್ಲಾದೇಶ ಪ್ರವಾಸ: ಮಾನವ ಕಳ್ಳಸಾಗಣೆ, ನಕಲಿ ಕರೆನ್ಸಿ ಕಳ್ಳಸಾಗಣೆ ತಡೆಯುವುದು ಮತ್ತು ಭಾರತೀಯ ಆರ್ಥಿಕ ವಲಯ ಸ್ಥಾಪನೆಗೆ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವುದು ಸೇರಿದಂತೆ ಒಟ್ಟು 22 ಮಹತ್ವದ ಒಪ್ಪಂದಗಳಿಗೆ ಸಹಿ. 2 ಬಿಲಿಯನ್ ಡಾಲರ್ ನೆರವು ಘೋಷಣೆ.
ಭಾರತಕ್ಕೆ ಮೂಲಸೌಕರ್ಯ, ಸ್ಮಾರ್ಟ್‌ ಸಿಟಿ, ರೈಲ್ವೆ, ವಿದ್ಯುತ್‌ ಉತ್ಪಾದನೆಯಂಥ ಮಹತ್ವದ ಕ್ಷೇತ್ರಗಳಲ್ಲಿ 63500 ಕೋಟಿ ರೂ. ಹೂಡಲು ದಕ್ಷಿಣ ಕೊರಿಯಾದ ನಿರ್ಧಾರ.
ಮೇ-18-19, ದಕ್ಷಿಣ ಕೊರಿಯಾ ಭೇಟಿ, ಆದಾಯ ತೆರಿಗೆಗೆ ಸಂಬಂಧಿಸಿದಂತೆ ಡಬ್ಬಲ್ ಟ್ಯಾಕ್ಸೇಷನ್ ಹಾಗೂ ತೆರಿಗೆ ತಪ್ಪಿಸಿಕೊಳ್ಳುವಿಕೆ ತಡೆಗಟ್ಟಲು ಒಪ್ಪಂದ. ದೃಶ್ಯ ಹಾಗೂ ಶ್ರವ್ಯ ಮಾಧ್ಯಮದಲ್ಲಿ ಸಹಕಾರ, ಇಂಧನ, ವ್ಯಾಪಾರ, ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಹಕಾರ, ಎಲೆಕ್ಟ್ರಿಕ್ ಹಾಗೂ ಹೊಸ ಇಂಧನ ಉತ್ಪಾದನ
ಕಝಕ್ ಅಧ್ಯಕ್ಷರಿಗೆ ಮೋದಿಯಿಂದ ಧಾರ್ಮಿಕ ಪುಸ್ತಕಗಳ ಉಡುಗೊರೆ: ‘ಗುರು ಗ್ರಂಥ ಸಾಹಿಬ್‌ನ ಇಂಗ್ಲಿಷ್ ಅನುವಾದ, ಜೈನ ಧರ್ಮದ ಅತ್ಯಂತ ಪೂಜ್ಯ ಗ್ರಂಥಗಳ ಪೈಕಿ ಒಂದಾಗಿರುವ 15ನೆ ಶತಮಾನದ ಪ್ರಾಕೃತ ಭಾಷೆಯಲ್ಲಿರುವ ಭದ್ರಬಾಹುವಿನ ಕಲ್ಪಸೂತ್ರ, ಬೌದ್ಧ ಧರ್ಮದ ಅತ್ಯಂತ ಪೂಜ್ಯ ಗ್ರಂಥಗಳ ಪೈಕಿ ಒಂದಾಗಿರುವ 12ನೆ ಶತಮ
ಜುಲೈ-8-10 ರಂದು ರಷ್ಯಾ ಭೇಟಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ.
ಜುಲೈ- 10-11ರಂದು ತುರ್ಕಮೆನಿಸ್ತಾನಕ್ಕೆ ಭೇಟಿ: ಭಯೋತ್ಪಾದನಾ ನಿಗ್ರಹ, ಮಾದಕ ವಸ್ತು ಕಳ್ಳಸಾಗಣೆ ತಡೆ, ರಕ್ಷಣಾ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ  ತುರ್ಕ್ ಮೆನಿಸ್ತಾನ ಅಧ್ಯಕ್ಷ ಗುರ್ಬಾಂಗುಲಿ ಬೆರ್ಡಿಮುಹಮದೆವ್ ಅವರೊಂದಿಗೆ  ಒಟ್ಟು 7 ಒಪ್ಪಂದಗಳಿಗೆ ಸಹಿ. 
ಅಶ್ಗಬಾತ್ ನಲ್ಲಿ ಗಾಂಧಿ ಪ್ರತಿಮೆ ಉದ್ಘಾಟನೆ. ತುರ್ಕಮೆನಿಸ್ತಾನದ ಅಧ್ಯಕ್ಷರಿಗೆ ಕುದುರೆಗೆ ತಡಿಯನ್ನು ಉಡುಗೊರೆಯಾಗಿ ನೀಡಿದ ಪ್ರಧಾನಿ ಮೋದಿ

ಜುಲೈ-12ರಂದು ಕಿರ್ಗಿಸ್ತಾನಕ್ಕೆ ಭೇಟಿ: ಜಂಟಿ ಸೇನಾ ಕಾರ್ಯಾಚರಣೆ, ಭಯೋತ್ಪಾದನೆ ನಿಗ್ರಹ ಸೇರಿದಂತೆ 4 ಮಹತ್ವದ ಒಪ್ಪಂದಗಳಿಗೆ ಸಹಿ. 
ಆಗಸ್ಟ್ 16-17 ಯುಎಇ(ಅರಬ್‌ ಸಂಯುಕ್ತ ಒಕ್ಕೂಟ ರಾಷ್ಟ್ರಗಳಿಗೆ)ಗೆ ಭೇಟಿ: ಆರ್ಥಿಕ ಸಹಕಾರ ಮತ್ತು ನಿರ್ದಿಷ್ಟವಾದ ಗುರಿ ತಲುಪುವ ಬಗ್ಗೆ ದ್ವಿಪಕ್ಷೀಯ ಒಪ್ಪಂದ. ಭಾರತದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಯುಎಇ ಯಿಂದ 75 ಬಿಲಿಯನ್ ಡಾಲರ್ ಆರ್ಥಿಕ ನೆರವು. 
ಭಾರತೀಯ ಸಮುದಾಯಕ್ಕಾಗಿ ಅಬುಧಾಬಿಯಲ್ಲಿ ದೇವಸ್ಥಾನ ನಿರ್ಮಿಸಲು ಜಮೀನು ನೀಡುವುದಾಗಿ ಯುಎಇ ಭರವಸೆ

ಸೆಪ್ಟೆಂಬರ್ 23 ರಂದು ಐರ್ಲೆಂಡ್ ಗೆ ಭೇಟಿ:ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವಕ್ಕೆ, ಅಂತಾರಾಷ್ಟ್ರೀಯ ರಫ್ತು ನಿಯಂತ್ರಣ ಪದ್ಧತಿಗೆ ಬೆಂಬಲ ಕೋರಿದ್ದು, ಐರ್ಲೆಂಡ್ ಪ್ರಧಾನಿ ಎಂಡಾ ಕೆನ್ನೆ ಮೋದಿ ದ್ವಿಪಕ್ಷೀಯ ಮಾತುಕತೆಯ ಪ್ರಮುಖಾಂಶ.ಪ್ರಧಾನಿ ನರೇಂದ್ರ ಮೋದಿ ಅವರು ಐರ್ಲೆಂಡ್ ಪ್ರಧಾನಿ
ಮೋದಿ ಅವರಿಗೆ ಮಂಗೋಲಿಯಾ ಸರ್ಕಾರ ಕುದುರೆ ಮತ್ತು ಪಿಟೀಲನ್ನು ಉಡುಗೊರೆಯಾಗಿ ನೀಡಿತು.

ಮಂಗೋಲಿಯಾ ಸಂಸತ್ ಉದ್ದೇಶಿಸಿ ಭಾಷಣ. ಮಂಗೋಲಿಯಾದಲ್ಲಿರುವ 150 ಐಟಿ ಇಸಿ ತರಬೇತಿ ಕೇಂದ್ರಗಳು 200 ಕ್ಕೆ ಹೆಚ್ಚಳಕ್ಕೆ ಒಪ್ಪಿಗೆ, ಭಾರತ ಮಂಗೋಲಿಯಾ ಜಂಟಿ ಶಾಲೆ, ಉಭಯ ರಾಷ್ಟ್ರಗಳ ನಡುವಿನ ಸ್ನೇಹಮಯ ಒಪ್ಪಂದಗಳ ನವೀಕರಣ, ಉಭಯ ರಾಷ್ಟಗಳ ಗಡಿಭದ್ರತೆಹಾಗೂ ಸೈಬರ್‌ ಭದ್ರತೆ ವಿಚಾರಗಳಲ್ಲಿ ಹೆಚ್ಚಿನ ಸಹಕಾರಕ್ಕೆ ಸಂಬಂಧಿಸಿ
ಮೇ.16-17- ಮಂಗೋಲಿಯಾ ಪ್ರವಾಸ: ಮಂಗೋಲಿಯಾದ ಅಭಿವೃದ್ಧಿಗೆ 1 ಬಿಲಿಯನ್ ಡಾಲರ್ ನೆರವು ಘೋಷಣೆ, ಆಂತರಿಕ ಭದ್ರತೆ, ವಿಮಾ ಸಾರ್ವಜನಿಕ ವಲಯಗಳಲ್ಲಿ ಉಭಯ ದೇಶಗಳ ನಡುವೆ ಮಹತ್ವದ ಒಪ್ಪಂದ ಸೇರಿದಂತೆ 29 ಒಪ್ಪಂದಗಳಿಗೆ ಮಂಗೋಲಿಯಾ ಪ್ರಧಾನಿ ಹಾಗೂ ಮೋದಿ ಸಹಿ. 
ಸಿಶೇಲ್ಸ್ ನಲ್ಲಿ ಕರಾವಳಿ ಕಣ್ಗಾವಲು ರಾಡಾರ್ ಯೋಜನೆ ಫಲಕದೊಂದಿಗೆ ಪ್ರಧಾನಿ ನರೇಂದ್ರ ಮೋದಿ
2015 ರ ಮಾರ್ಚ್ 11-13ರಂದು ಮಾರೀಷಸ್ ಗೆ ಭೇಟಿ, ಮಾರೀಷಸ್ ನೊಂದಿಗೆ ಅವಳಿ ತೆರಿಗೆ ವಂಚನೆ ತಡೆ ಒಪ್ಪಂದಕ್ಕೆ ಸಹಿ. ನೆರೆಯ ರಾಷ್ಟ್ರದ ಅಭಿವೃದ್ಧಿಗೆ ಸಹಕಾರ ನೀಡಲು ಮುಂದಾಗಿರುವ ಪ್ರಧಾನಿ ನರೇಂದ್ರಮೋದಿ ಯವರು ದ್ವೀಪರಾಷ್ಟ್ರದ ಅಭಿವೃದ್ಧಿಗಾಗಿ 500 ಮಿಲಿಯನ್ ಡಾಲರ್ ಹಣಕಾಸಿನ ನೆರವು ಘೋಷಣೆ. 
ಸಾಗರೋತ್ಥಾನ ಅಭಿವೃದ್ಧಿ ಸೇರಿದಂತೆ ಇನ್ನಿತರ ಹಲವಾರು ಮಹತ್ವದ ವಿಷಯಗಳ ಬಗ್ಗೆಯೂ ಮಾರೀಷಸ್-ಭಾರತದ ಒಪ್ಪಂದ . 
2015 ಮಾರ್ಚ್ 13-14: ಶ್ರೀಲಂಕಾ ಗೆ ಭೇಟಿ, ವೀಸಾ, ಸುಂಕ, ಯುವಜನ ಅಭಿವೃದ್ಧಿ ಮತ್ತು ಶ್ರೀಲಂಕಾದಲ್ಲಿ ರವೀಂದ್ರನಾಥ್‌ ಟ್ಯಾಗೋರ್‌ ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಮುಖ 4 ಒಪ್ಪಂದಗಳಿಗೆ ಸಹಿ, ಟ್ರಿಂಕೋಮಲಿ ಬಂದರು ಪಟ್ಟಣವನ್ನು ಪೆಟ್ರೋಲಿಯಂ ಹಬ್‌ ಆಗಿ ರೂಪಿಸಲು ನೆರವು ನೀಡುವುದಾಗಿ
ಶ್ರೀಲಂಕಾ ಸಂಸತ್ ಉದ್ದೇಶಿಸಿ ಮೋದಿ ಭಾಷಣ 
2015, ಮಾರ್ಚ್ 29: ಸಿಂಗಾಪುರದ ಮಾಜಿ ಪ್ರಧಾನಿ ಲೀ ಕ್ವಾನ್ ಯೀವ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಿಂಗಾಪುರಕ್ಕೆ ಭೇಟಿ. 

2015 ಏಪ್ರಿಲ್9-12: ಪ್ಯಾರೀಸ್ ಗೆ ಭೇಟಿ, ಫ್ರಾನ್ಸ್ ನಿಂದ 36 ರಾಫೆಲ್ ಜೆಟ್ ಖರೀದಿಗೆ ಒಪ್ಪಿಗೆ, ರಕ್ಷಣಾ, ಅಣುಶಕ್ತಿಗೆ ಸಂಬಂಧಿಸಿದಂತೆ ಒಟ್ಟು 17 ಒಪ್ಪಂದಗಳಿಗೆ ಸಹಿ.
ಫ್ರಾನ್ಸ್ ನಲ್ಲಿ ಗೌರವ ವಂದನೆ ಸ್ವೀಕರಿಸಿದ ಪ್ರಧಾನಿ
ಏಪ್ರಿಲ್ 12-14: ಜರ್ಮನಿಗೆ ಭೇಟಿ, ಜರ್ಮನಿ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ, ಯಾವುದೇ ಒಪ್ಪಂದಗಳಿಗೆ ಸಹಿ ಇಲ್ಲ. ಭಾರತ-ಜರ್ಮನ್ ವ್ಯಾಪಾರ- ಹೂಡಿಕೆ ಉತ್ತಮಗೊಳಿಸುವ ನಿಟ್ಟಿನಲ್ಲಿ ದ್ವಿಪಕ್ಷೀಯ ಮಾತುಕತೆ ಫಲಪ್ರದ. 
 ಜರ್ಮನಿ ಚಾನ್ಸಲರ್‌ ಜತೆ ಹನೋವರ್‌’ನಲ್ಲಿ ವಿಶ್ವದ ದೊಡ್ಡ ವಾಣಿಜ್ಯ ಮೇಳ ಉದ್ಘಾಟನೆ. 

 ಜರ್ಮನಿ ಚಾನ್ಸಲರ್‌ ಜತೆ ಹನೋವರ್‌’ನಲ್ಲಿ ವಿಶ್ವದ ದೊಡ್ಡ ವಾಣಿಜ್ಯ ಮೇಳ ಉದ್ಘಾಟನೆ. 
ಏಪ್ರಿಲ್ 14-16: ಕೆನಡಾ ಪ್ರವಾಸ, ಯುರೇನಿಯಂ ಪೂರೈಕೆ, ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ 13 ಒಪ್ಪಂದಗಳಿಗೆ ಸಹಿ,  $350-ಮಿಲಿಯನ್ ಯುರೇನಿಯಂ ಒಪ್ಪಂದಕ್ಕೆ ಸಹಿ ಹಾಕಿದ್ದು ಮಹತ್ವದ ವಿಷಯ.

ಕೆನಡಾ ಭೇಟಿ ವೇಳೆ ಖುಜುರಾಹೋ ದೇಗುಲದ ಸುಮಾರು 900 ವರ್ಷಗಳ ಹಳೆಯ ಶಿಲ್ಪಾಕೃತಿ(ಶುಕ ಕನ್ನಿಕೆ)ಯನ್ನು ಅಲ್ಲಿನ ಪ್ರಧಾನಿ ಸ್ಟೀಫನ್ ಹರ್ಫರ್ ಮೋದಿಗೆ ಹಸ್ತಾಂತರಿಸಿದ್ದು.
ಕೆನಡಾ ಭೇಟಿ ವೇಳೆ ಖುಜುರಾಹೋ ದೇಗುಲದ ಸುಮಾರು 900 ವರ್ಷಗಳ ಹಳೆಯ ಶಿಲ್ಪಾಕೃತಿ(ಶುಕ ಕನ್ನಿಕೆ)ಯನ್ನು ಅಲ್ಲಿನ ಪ್ರಧಾನಿ ಸ್ಟೀಫನ್ ಹರ್ಫರ್ ಮೋದಿಗೆ ಹಸ್ತಾಂತರಿಸಿದ್ದು.

ಮೇ.14-16 ಚೀನಾ ಪ್ರವಾಸ: ಭಾರತ, ಚೀನಾ ನಡುವೆ ನವೀಕರಿಸಬಲ್ಲ ಶಕ್ತಿ, ಇಂಧನ, ವಿದ್ಯುತ್‌ ಮೂಲಸೌಕರ್ಯ, ಉಕ್ಕು, ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಒಟ್ಟು 10 ಬಿಲಿಯನ್ ಡಾಲರ್ ಮೊತ್ತದ 24 ವ್ಯವಹಾರಿಕ ಒಪ್ಪಂದಗಳಿಗೆ " attribution="">

ಚೀನಾ ಪ್ರಧಾನಿ ಲೀ ಕೆಕಿಯಾಂಗ್ ರೊಂದಿಗೆ ಪ್ರಧಾನಿ ಮೋದಿ ಸೆಲ್ಫಿ.
ಚೀನಾದ ಐತಿಹಾಸಿಕ ಟೆರಾಕೋಟಾ ಯುದ್ಧವೀರರ ಮ್ಯೂಸಿಯಂನಲ್ಲಿಮೋದಿ ಪೋಸ್ ಕೊಟ್ಟಿದ್ದು ಹೀಗೆ....
2015 ರ ಮಾರ್ಚ್ 10-11 ದ್ವೀಪರಾಷ್ಟ್ರ ಸಿಶೇಲ್ಸ್ ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಸಿಶೇಲ್ಸ್ ಅಧ್ಯಕ್ಷರೊಂದಿಗೆ ಕರಾವಳಿ ಕಣ್ಗಾವಲು ರಾಡಾರ್ ಯೋಜನೆ, ಕಡಲ ಭದ್ರತಾ ಒಪ್ಪಂದಗಳಿಗೆ ಸಹಿ ಹಾಕಿ ಸಿಶೇಲ್ಸ್ ಗೆ  ಡಾರ್ನಿಯರ್ ವಿಮಾನವನ್ನು ನೀಡುವುದಾಗಿ ಘೋಷಣೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT