ರಾಷ್ಟ್ರ ಪ್ರಶಸ್ತಿ ಗಳಿಸಿದ ನಟ ಸಂಚಾರಿ ವಿಜಯ್, ನಿರ್ದೇಶಕ ಮಂಸೋರೆ
ನಾನು ಅವನಲ್ಲ ಅವಳು ಚಿತ್ರದಲ್ಲಿನ ನಟನೆಗಾಗಿ ಸಂಚಾರಿ ವಿಜಯ್‌ಗೆ ಶ್ರೇಷ್ಠ ನಟ ಮತ್ತು ತನ್ನ ಪ್ರಾದೇಶಿಕ ವಿಭಾಗದಲ್ಲಿ ಯುವ ನಿರ್ದೇಶಕ ಮಂಸೋರೆ ಅವರ ಚೊಚ್ಚಲ ಚಿತ್ರ 'ಹರಿವು'ಗೆ ರಾಷ್ಟ್ರಪ್ರಶಸ್ತಿ.
 
ಹಿನ್ನೋಟ 2015

2015ರ 25 ಪಾಸಿಟಿವ್ ಸುದ್ದಿಗಳು

ಪೋಲೀಸ್‌ನ ಸಾಹಸ ಮತ್ತು ಸಮಯಪ್ರಜ್ಞೆ ಜೀವ ಉಳಿಸಿತು

ಕುಂಭಮೇಳದ ಸಮಯದಲ್ಲಿ ವ್ಯಕ್ತಿಯೊಬ್ಬ ಮುಳುಗುತ್ತಿರುವುದನ್ನು ಕಂಡ 24 ರ ಹರೆಯದ ಮನೋಜ್ ಬರಾಹೆಟ್ ಎಂಬ ಪೊಲೀಸ್ ತನ್ನ ಪ್ರಾಣವನ್ನು ಲೆಕ್ಕಿಸದೆ 20 ಅಡಿ ಎತ್ತರದ ಸೇತುವೆಯಿಂದ ಜಿಗಿದು ಮುಳುಗುತ್ತಿರುವ ವ್ಯಕ್ತಿಯನ್ನು
ಪ್ರಸಾಧನ ಕಲಾವಿದರಿಗೆ ರಾಷ್ಟ್ರ ಪ್ರಶಸ್ತಿ
ನಾನು ಅವನಲ್ಲ ಅವಳು ಚಿತ್ರಕ್ಕಾಗಿ ಅತ್ಯುತ್ತಮ ಪ್ರಸಾಧನ ಕಲಾವಿದ ಪ್ರಶಸ್ತಿ ಗಳಿಸಿದ ನಾಗರಾಜು ಮತ್ತು ರಾಜು. ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲನೇ ಬಾರಿ ಉತ್ತಮ ಪ್ರಸಾಧನಕ್ಕಾಗಿ ರಾಷ್ಟ್ರ ಪ್ರಶಸ್ತಿ ದಕ್ಕಿದೆ.
ಕೊಚ್ಚಿ ಸೌರಶಕ್ತಿ ವಿಮಾನ ನಿಲ್ದಾಣ

ಕೇರಳದ ಕೊಚ್ಚಿ ವಿಮಾನ ನಿಲ್ದಾಣ ಜಗತ್ತಿನ ಪ್ರಥಮ ಸೌರಶಕ್ತಿ ವಿಮಾನ ನಿಲ್ದಾಣವೆಂಬ ಕೀರ್ತಿಗೆ ಪಾತ್ರವಾಯಿತು.

ಎಂಡೋಸಲ್ಫಾನ್‌ನಿಂದ ಅಂಗವೈಕಲ್ಯತೆಗೊಳಾದವಳು ಡಾಕ್ಟರ್ ಆದಳು!
ಕಾಸರಗೋಡಿನ ಎಂಡೋಸಲ್ಫಾನ್  ಪೀಡಿತ ಎಣ್ಮಕಜೆ ಗ್ರಾಮದ ಶ್ರುತಿ ಅಂಗವೈಕಲ್ಯಗಳನ್ನು ಮೆಟ್ಟಿ ನಿಂತು ಡಾಕ್ಟರ್ ಆಗುವ ಕನಸು ಕಾಣುತ್ತಿದ್ದಾಳೆ. ಬಿಹೆಚ್ಎಂಎಸ್ ನಲ್ಲಿ ಸೀಟು ಗಿಟ್ಟಿಸಿಕೊಂಡಿರುವ ಶ್ರುತಿ, ಬಡತನ ಮತ್ತು ವೈಕಲ
ಸಿಖ್ ತನ್ನ ಟರ್ಬಾನ್ ಬಿಚ್ಚಿ ಸಹಾಯ ಮಾಡಿದ

ಈತನ ಹೆಸರು ಹರ್ಮಾನ್ ಸಿಂಗ್. ನ್ಯೂಜಿಲೆಂಡ್‌ನಲ್ಲಿ ಆಪಘಾತಕ್ಕೊಳಗಾದ ಮಗುವೊಂದು ರಕ್ತಸ್ರಾವದಿಂದ ಒದ್ದಾಡುತ್ತಿದ್ದಾಗ ತನ್ನ ಟರ್ಬಾನ್ ಬಿಚ್ಚಿ ಆ ಮಗುವಿಗೆ ಸಹಾಯ ಮಾಡಿದ್ದ.
ಟೈಪಿಸ್ಟ್ ಗೆ ನೆರವಾಯ್ತು ಸೋಷ್ಯಲ್ ಮೀಡಿಯಾ

ಫುಟ್ ಪಾತ್ ವ್ಯಾಪಾರಿಗಳನ್ನು ತೆರವು ಗೊಳಿಸುತ್ತಿದ್ದ ವೇಳೆ ಪೊಲೀಸ್ ಪೇದೆಯೊಬ್ಬ 65ರ ಹರೆಯದ ಟೈಪಿಸ್ಟ್ ಕಿಶನ್ ಕುಮಾರ್ ಅವರ ಟೈಪ್ ರೈಟರ್ ನ್ನು ಕಿತ್ತೆಸೆದು ತನ್ನ ದರ್ಪ ತೋರಿಸಿದ್ದ. ತನ್ನ ಜೀವನದ ಏಕೈಕ ಮಾರ್ಗವಾಗಿದ್ದ ಟ
ಅಜೀಂ ಪ್ರೇಮ್ ಜಿ ದೇಣಿಗೆ ನೀಡಿದ್ದು
ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ಭಾರತದ ಖ್ಯಾತ ಉದ್ಯಮಿ, ವಿಪ್ರೋ ಚೇರ್‌ಮೆನ್ ಅಜೀಂ ಪ್ರೇಮ್ ಜಿ ಶೇ. 40 ರಷ್ಟು ಶೇರ್ ದೇಣಿಗೆ ನೀಡಿದ್ದಾರೆ.
ಚೆನ್ನೈ ಜಲಪ್ರಳಯಕ್ಕೆ ಸಹಾಯ
ಚೆನ್ನೈ ಜಲಪ್ರಳಯಕ್ಕೆ ಜಾತಿ ಮತ ಭೇದ ಮರೆತು ಎಲ್ಲರೂ ಒಂದಾಗಿ ಸಹಾಯ ಮಾಡಿದ್ದು, ನಮ್ಮಲ್ಲಿನ ಐಕ್ಯತೆಗೆ ನಿದರ್ಶನ.
ಮಾದರಿಯಾದ ನಿಖಿಯಾ
 ನಿಖಿಯಾ ಶಂಶೀರ್ ಎಂಬ 13 ರ ಹರೆಯದ ಬಾಲಕಿ ಬ್ಯಾಗ್ಸ್ , ಬುಕ್ಸ್ ಆ್ಯಂಡ್  ಬ್ಲೆಸ್ಸಿಂಗ್ಸ್ ಎಂಬ ಯೋಜನೆಯನ್ನು ಹಮ್ಮಿಕೊಂಡಿದ್ದಾಳೆ.  ಈ ಮೂಲಕ ಈಕೆ 2,500 ಪುಸ್ತಕಗಳನ್ನು, 150 ಬ್ಯಾಗ್‌ಗಳನ್ನು, ನೀರಿನ ಬಾಟಲಿ, ಸ್ಟೇಷನರಿ ಮತ್ತು ವಿದ್ಯಾರ್ಥಿಗಳಿಗ
ಬಿದಿರಿನಿಂದ ಸೇತುವೆ ನಿರ್ಮಿಸಿದ ಯುವಕ

ಸತೇ ನಗರ್‌ನಲ್ಲಿ ವಿದ್ಯಾರ್ಥಿಗಳು ಪ್ರತೀ ದಿನ ಚಂರಂಡಿ ನೀರು ಹರಿಯುತ್ತಿರುವ ತೊರೆ ದಾಟಿ 1.5 ಕಿಮೀ ದೂರ ಸಂಚರಿಸಿ ಶಾಲೆಗೆ ಹೋಗಬೇಕಾಗಿತ್ತು. ಇದನ್ನು ನೋಡಿದ ಅಲ್ಲಿನ ಇಶಾನ್ ಬಲ್‌ಬಲೇ ಎಂಬ 17ರ ಯುವಕ 8 ದಿನಗಳಲ್ಲಿ 4 ಅಡಿ ಅಗಲ
ಇಸ್ರೋ ಸಾಧನೆ

2015ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು, ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಾಕಷ್ಟು ಸಾಧನೆಗಳನ್ನು ಮಾಡಿದೆ. 2015ರಲ್ಲಿ ಇಸ್ರೋದ ಪ್ರಮುಖ ಯಶಸ್ವಿ ಯೋಜನೆಗಳು ಇಂತಿವೆ.

ಆಸ್ಟ್ರೋ
ರೈಲ್ವೇ ಸ್ಟೇಷನ್ ಚಂದಗೊಳಿಸಿದ ಇಂಜಿನಿಯರ್

ಗೌರಂಗ್ ಧಮಾನಿ ಎಂಬ ಇಲೆಕ್ಟ್ರಿಕಲ್ ಇಂಜಿನಿಯರ್  ಮುಂಬೈನ ಕಿಂಗ್ಸ್ ಸರ್ಕಲ್ ರೇಲ್ವೇ ನಿಲ್ದಾಣವನ್ನು ದತ್ತು ತೆಗೆದುಕೊಂಡು ನಾಲ್ಕೇ ನಾಲ್ಕು ತಿಂಗಳಲ್ಲಿ ಸುಂದರವಾಗಿಸಿದ್ದಾರೆ.
ಪಿಂಚಣಿ ಹಣದಿಂದ ರಸ್ತೆಯ ಹೊಂಡ ಸರಿ ಮಾಡಿದರು!
67 ರ ಹರೆಯದ ನಿವೃತ್ತ ರೇಲ್ವೇ ನೌಕರ ಗಂಗಾಧರ ತಿಲಕ್ ಖಟ್ನಾಂ ರಸ್ತೆಯಲ್ಲಿ ಹೊಂಡಗಳನ್ನು  ಮುಚ್ಚುತ್ತಾರೆ. ಹೈದ್ರಾಬಾದ್ ಮೂಲದ ಇವರು ಒಬ್ಬಂಟಿಯಾಗಿಯೇ ಈ ಕೆಲಸ ಮಾಡುತ್ತಿದ್ದು ಎರಡೂವರೆ ವರ್ಷದಲ್ಲಿ 1,125 ಹೊಂಡಗಳನ್ನು ಮುಚ್ಚಿದ್ದಾರ
ಮಂಗಳಮುಖಿಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ
ಇದೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಮಂಗಳಮುಖಿಯರ  ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು.
ಚಿನ್ನಸ್ವಾಮಿ ಸ್ಟೇಡಿಯಂ ಜಗತ್ತಿನ ಮೊದಲ ಸೌರಶಕ್ತಿ ಕ್ರಿಕೆಟ್ ಕ್ರೀಡಾಂಗಣ 
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಜಗತ್ತಿವ ಮೊದಲ ಸೌರಶಕ್ತಿ ಕ್ರಿಕೆಟ್ ಕ್ರೀಡಾಂಗಣವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು
ಕಾರ್ ನಲ್ಲಿ ಹಸಿರು ಕ್ರಾಂತಿ

ಕೊಲ್ಕತ್ತಾದ ಟ್ಯಾಕ್ಸಿ ಚಾಲಕ ಧನಂಜಯ್ ಚಕ್ರಬೊತ್ರಿ ತನ್ನ ಟ್ಯಾಕ್ಸಿ ಕಾರಿನ ಮೇಲೆ ಗಿಡಗಳನ್ನು  ನೆಟ್ಟು ಚಲಿಸುವ ಹೂದೋಟ ನಿರ್ಮಿಸಿದ. ಗಿಡ ನೆಟ್ಟು ಪರಿಸರ ಉಳಿಸಿ ಎಂಬ ಸಂದೇಶವನ್ನು ಸಾರುತ್ತಾ ಈತ ಕಾರು ಚಾಲನೆ ಮಾಡುತ್ತಾನೆ.
 ಚಿಂದಿ ಆಯುವ ಮಹಿಳೆಯಿಂದ ಅಂತಾರಾಷ್ಟ್ರೀಯ ಸಭೆಯಲ್ಲಿ ಭಾಷಣ

ಪುಣೆಯಲ್ಲಿ ಚಿಂದಿ ಆಯುವ 50ರ ಹರೆಯದ ಸುಮನ್ ಮೋರೆ ಎಂಬಾಕೆ ಜಿನೆವಾದಲ್ಲಿ ನಡೆದ ಅಂತಾರಾಷ್ಟ್ರೀಯ ಕಾರ್ಮಿಕ ಒಕ್ಕೂಟದ ಸಭೆಯಲ್ಲಿ  ಭಾಷಣ ಮಾಡಿದ್ದಾರೆ. 
ಪುಣೆಯಲ್ಲಿ ಕಾಗದ್ ಕಚ್
ಸರ್‌ಪಂಚ್‌ನಿಂದ ಸೆಲ್ಫೀ ವಿತ್ ಡಾಟರ್ ಸ್ಪರ್ಧೆ

ಹರ್ಯಾಣದ ಬಿಬಿಪುರ್ ಗ್ರಾಮದ ಸರ್‌ಪಂಚ್ ಆಗಿರುವ ಸುನಿಲ್ ಜಗ್ಲಾನ್  ವಾಟ್ಸಾಪ್‌ನಲ್ಲಿ ಸೆಲ್ಫೀ ವಿತ್ ಡಾಟರ್ ಸ್ಪರ್ಧೆ ಏರ್ಪಡಿಸಿದ್ದು, ಕೆಲವೇ ದಿನಗಳಲ್ಲಿ ಸುಮಾರು 500ಕ್ಕಿಂತಲೂ ಹೆಚ್ಚು ಫೋಟೋಗಳು ಈ ಸ್ಪರ್ಧೆಯಲ್
ಬ್ರೈಲ್ ಲಿಪಿಯಲ್ಲಿ ಬರೆದು ಸುದ್ದಿ ಓದಿದ ಬಾಲಕ

ಸುದ್ದಿವಾಚಕನಾಗಬೇಕೆಂಬ ಆಸೆ ಟಿ ಶ್ರೀರಾಮಾನುಜಂ ಎಂಬ ಹುಡುನದ್ದು. ಐದನೇ ಕ್ಲಾಸಿನಲ್ಲಿ ಓದುತ್ತಿರುವ ಈ ಹುಡುಗನಿಗೆ ದೃಷ್ಟಿದೋಷವಿದೆ. ಆದರೇನಂತೆ ಬ್ರೈಲ್ ಲಿಪಿಯಲ್ಲಿ ಬರೆದ ಸುದ್ದಿಯನ್ನು 22 ನಿಮಿಷಗಳ ಕಾಲ ವಾಚಿಸಿ ತನ್
ಭಗವದ್ಗೀತೆ ಸ್ಪರ್ಧೆ ಗೆದ್ದ ಮುಸ್ಲಿಂ ಬಾಲಕಿ
ಭಗವದ್ಗೀತೆ ಸ್ಪರ್ಧೆಯಲ್ಲಿ ಮರಿಯಂ ಆಸಿಫ್ ಸಿದ್ದಿಖಿ ಎಂಬ ಬಾಲಕಿ ಬಹುಮಾನ ಗೆದ್ದಿದ್ದಳು. ಬಹುಮಾನವಾಗಿ ಸಿಕ್ಕಿದ ಹಣವನ್ನೀಕೆ ಸಾಮಾಜಿಕ ಕಾರ್ಯಗಳಿಗಾಗಿ ಬಳಸಿದ್ದಳು.
ಬಲಿರಾಜಾ ಎಂಬ ಕೃಷಿಕರ ವಾಟ್ಸಾಪ್ ಗ್ರೂಪ್ 

ಮಹಾರಾಷ್ಟ್ರದ ಹಳ್ಳಿಯ ಕೃಷಿಕರು ಬಲಿರಾಜಾ ಎಂಬ ವಾಟ್ಸಾಪ್ ಗ್ರೂಪ್ ಸೃಷ್ಟಿಸಿದ್ದಾರೆ.  . ಈ ಗ್ರೂಪ್‌ಲ್ಲಿ ಸುಮಾರು 400 ಕೃಷಿಕರಿದ್ದು, ಕೃಷಿ ಸಮಸ್ಯೆಗಳು, ಪರಿಹಾರಗಳು ಹಾಗೂ ಹೊಸ ಬೆಳೆಗಳ ಬಗ್ಗೆ ಚರ್ಚೆ ನಡೆಯುತ
ಅಸಹಿಷ್ಣುತೆಯಲ್ಲ ಇಲ್ಲಿದೆ ಸೌಹಾರ್ದತೆ

 ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹಿಂದೂ ಗೆಳೆಯನ ಅಂತ್ಯ  ಸಂಸ್ಕಾರ ಮಾಡಿದ
ಮಧ್ಯ ಪ್ರದೇಶದ ಬೈತುಲ್ ಜಿಲ್ಲೆಯಲ್ಲಿ ರಜಾಖ್ ಖಾನ್  ತಿಕಾರಿ ಎಂಬಾತ ತನ್ನ ಗೆಳೆಯ ಸಂತೋಶ್ ಸಿಂಗ್‌ನ ಅಂತ್ಯ ಸಂಸ್ಕಾರ ಮಾ
ಗಡಿರೇಖೆಯಿಲ್ಲದ ಸಂಚರಿಸುವ ಹಕ್ಕಿಗಾಗಿ ಹೋರಾಟ 
ದೇಶದೆಲ್ಲೆಡೆ ಮುಕ್ತವಾಗಿ ವಾಹನ ಚಲಾಯಿಸುವ ಹಕ್ಕು ಬೇಕೆಂದು ಒತ್ತಾಯಿಸಿ ವಸೀಂ ಮೆಮನ್ ಮತ್ತು 25,000 ಜನರಿರುವ ಆತನ ಗುಂಪು ಹೋರಾಟ ನಡೆಸುತ್ತಿದೆ. ಒಂದು ರಾಜ್ಯದಲ್ಲಿ ನೋಂದಣಿಯಾಗಿರುವ ವಾಹನಗಳು ಇನ್ನೊಂದು ರಾಜ್ಯಕ್ಕೆ ಹೋದಾಗ ಅವುಗ
ಭಾರತೀಯ ರೇಲ್ವೇಯಿಂದ ಟ್ವೀಟ್ ಸಹಾಯ

ರೈಲಿನಲ್ಲಿ ಸಂಚರಿಸುತ್ತಿದ್ದಾಗ ಸಮಸ್ಯೆ ಅನುಭವಿಸಿದ ಪ್ರಯಾಣಿಕರು ಭಾರತೀಯ ರೇಲ್ವೇಗೆ ಟ್ವೀಟ್ ಮಾಡಿ ಕೂಡಲೇ ಅದಕ್ಕೆ ರೇಲ್ವೇ ಇಲಾಖೆ ಸ್ಪಂದಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT