ಇತರೆ

ಫೋಟೋ ಕ್ಲಿಕ್ ಮಾರ್ಚ್ 2016

Vishwanath S
ಐಶು ಮಾತು... ಮುಂಬೈನಲ್ಲಿ ಮಂಗಳವಾರ ನಡೆದ ವಿಮನ್ ಆಫ್ ವತ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು ಹೀಗೆ.
<b>ಐಶು ಮಾತು...</b> ಮುಂಬೈನಲ್ಲಿ ಮಂಗಳವಾರ ನಡೆದ ವಿಮನ್ ಆಫ್ ವತ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು ಹೀಗೆ.
ನೀಲ್ ಸೇಥಿಯಿಂದ ದಿ ಜಂಗಲ್ ಬುಕ್ ಪ್ರಮೋಷನ್...
ಹಾಲಿವುಡ್ ನ ದಿ ಜಂಗಲ್ ಬುಕ್ ಚಿತ್ರದಲ್ಲಿ ಪ್ರಮುಖ ಪಾತ್ರ ಮೊಗ್ಲಿ ಪಾತ್ರಧಾರಿ ಮುಂಬೈನ ಬಾಲ ನಟ ನೀಲ್ ಸೇಥಿ ಪ್ರಮೋಷನ್ ನಲ್ಲಿ ತೊಡಗಿರುವುದು.
ಶ್ರೀ ಶ್ರೀ ರವಿಶಂಕರ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ...
2016ರ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶ್ರೀ ಶ್ರೀ ರವಿಶಂಕರ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಧಾನ ಮಾಡಿದರು.
ಪ್ರೇಕ್ಷಕರಿಂದ ಟೀಂ ಇಂಡಿಯಾಗೆ ಜೈಹೋ...
ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸದ್ದು ಟೀಂ ಇಂಡಿಯಾಗೆ ಜೈ ಹೋ ಹೇಳಿದ ಪ್ರೇಕ್ಷಕರು.
ತಾಜ್ ಮಹಲ್ ಮುಂದೆ ಆಸ್ಟ್ರೇಲಿಯಾ ಕ್ರಿಕೆಟ್ ಮಹಿಳಾಮಣಿಗಳ ಸೆಲ್ಫಿ...
ಐತಿಹಾಸಿಕ ತಾಜ್ ಮಹಲ್ ಗೆ ಭೇಟಿ ನೀಡಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಹಿಳಾಮಣಿಗಳು ಸೆಲ್ಫಿ ತೆಗೆದುಕೊಂಡ ಪರಿ.
ಶ್ರೀಕೃಷ್ಣನ ಜತೆ ಕೊಹ್ಲಿಗೂ ಪೂಜೆ...
ಇದು ಅಭಿಮಾನವೋ ಅತಿರೇಕವೋ ಎಂದು ಹೇಳುವುದು ಕಷ್ಟ. ಕೋಲ್ಕತಾದ ಅರ್ಚಕನೊಬ್ಬ ಬಸಂತ ಉತ್ಸವದ ಪ್ರಯುಕ್ತ ಶ್ರೀಕೃಷ್ಣನ ಜತೆಗೆ ಹಿಂಬಾಗದಲ್ಲಿರುವ ವಿರಾಟ್ ಕೊಹ್ಲಿ ವಿಗ್ರಹಕ್ಕೂ ಪೂಜೆ ಸಲ್ಲಿಸಿದರು.
ನಾನೇ ರಾಜಕುಮಾರ... ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುಟ್ಟೂರಾದ ಮೈಸೂರು ತಾಲೂಕಿನ ಸಿದ್ದರಾಮನ ಹುಂಡಿಯಲ್ಲಿರುವ ಶುಕ್ರವಾರ ತಮ್ಮ ನಿವಾಸದಲ್ಲಿ ಕೆಲಕಾಲ ವಿಶ್ರಾಂತಿ ಪಡೆದಿದ್ದು ಹೀಗೆ.
ಟ್ಯಾಂಗೋ ನೃತ್ಯಗಾರ್ತಿ ಜತೆ ಒಬಾಮ ನೃತ್ಯ...
ಅರ್ಜೆಂಟೀನಾ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಒಬಾಮ ಅವರು ಗುರುವಾರ ಟ್ಯಾಂಗೋ ನೃತ್ಯಗಾರ್ತಿ ಜತೆಗೆ ಹೆಜ್ಜೆ ಹಾಕಿದ ರೀತಿ. 


ಸೋನಿಯಾ, ರಾಹುಲ್ ಹೋಳಿಯಾಟ... ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಗುರುವಾರ ದೆಹಲಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಹೋಳಿ ಆಚರಿಸಿದ ವೇಳೆ ಕಂಡುಬಂದ ದೃಶ್ಯವಿದು.
ಹೋಳಿ ಬಳಿಕ ಯುವತಿಯರ ಸೆಲ್ಫಿ...
ಹೋಳಿ ಆಚರಣೆ ಹಿನ್ನೆಲೆ ಯುವತಿಯರು ಪರಸ್ಪರ ಹೋಳಿ ಹಚ್ಚಿಕೊಂಡು ಸೆಲ್ಫಿಗೆ ಫೋಸ್ ಕೊಟ್ಟಿದ್ದು ಹೀಗೆ.
ಬೆಂಗಳೂರಿನ ಅಭಿಮಾನಿಗಳ ಜತೆ ಕೊಹ್ಲಿ ಸೆಲ್ಫಿ...
ಬಾಂಗ್ಲಾದೇಶದ ವಿರುದ್ಧದ ಪಂದ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿರುವ ಟೀಂ ಇಂಡಿಯಾ ಅಭ್ಯಸದಲ್ಲಿ ತೊಡಗಿದೆ. ಈ ಮಧ್ಯೆ ವಿರಾಟ್ ಕೊಹ್ಲಿ ಅವರು ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡರು. 
ಯೋಧರೊಂದಿಗೆ ಹೋಳಿ ಮಿಲನ: ಎಲ್ ಜೆಪಿ ಮಹಿಳಾ ಕಾರ್ಯಕರ್ತರು ಮಂಗಳವಾರ ಪಾಟ್ನಾದ ಪಕ್ಷದ ಕಚೇರಿಯಲ್ಲಿ ನಡೆದ ಹೋಳಿ ಮಿಲನ ಕಾರ್ಯಕ್ರದಲ್ಲಿ ಯೋಧರೊಂದಿಗೆ ಹೋಳಿ ಆಚರಿಸಿದರು.
ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ ನಮಿತಾ...
ಚೆನ್ನೈನಲ್ಲಿ ನಡೆದ ಫ್ಯಾಶನ್ ಪ್ರೀಮಿಯರ್ ಸಪ್ತಾಹದಲ್ಲಿ ನಟಿ ನಮಿತಾ ರ್ಯಾಂಪ್ ವಾಕ್ ಮಾಡಿದರು.
ರಾಧಾ-ಕೃಷ್ಣರ ಹೋಳಿ ಸಂಭ್ರಮ... ಮಥುರಾದಲ್ಲಿ ಭಾನುವಾರ ಹೋಳಿ ಆಚರಣೆ ವೇಳೆ ರಾಧಾ-ಕೃಷ್ಣನ ವೇಷಧಾರಿ ಕಲಾವಿದರು ನೃತ್ಯ ಮಾಡಿ ಸಂಭ್ರಮಿಸಿದ್ದು ಹೀಗೆ.
ಬಜೆಟ್ ಗೆ ಕತ್ತಲು ಕವಿದ ಕ್ಷಣ...
ವಿಧಾನಸೌಧದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮಂಡಿಸಿದ 4ನೇ ಬಜೆಟ್ ವೇಳೆ ಪವರ್ ಕಟ್ ಆಗಿ ಮೊಬೈಲ್ ಟಾರ್ಚ್ ನಲ್ಲಿ ಬಜೆಟ್ ಓದುವಂತ ಪರಿಸ್ಥಿತಿ ಉದ್ಬವಿಸಿತ್ತು.
ಹಿಮದ ನಡುವೆ ನಡಿಗೆ...
ಜಮ್ಮು ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ತಂಗ್ ಮರ್ಗ್ ನಲ್ಲಿ ಹಿಮಪಾತವಾಗುತ್ತಿದ್ದು, ಹಿಮಪಾತದ ನಡುವೆ ಜನರ ಓಡಾಟ. 
ಅಂಧಾಭಿಮಾನ... ಮುಂಬೈನಲ್ಲಿ ಗುರುವಾರ ಅಂಧರ ರಾಷ್ಟ್ರೀಯ ಸಂಸ್ಥೆಯ ವಿದ್ಯಾರ್ಥಿಗಳು ವಿಶ್ವಕಪ್ ಟಿ20ಯಲ್ಲಿ ಭಾರತೀಯ ತಂಡವನ್ನು ಬೆಂಬಲಿಸಿದ್ದು ಹೀಗೆ.
ತರಕಾರಿ ತಿನ್ನಿ... ಬೆಂಗಳೂರಿನ ಲಾಲ್ ಬಾಗ್ ಗೇಟ್ ನಲ್ಲಿ  ಬುಧವಾರ ಪೇಟಾ ಸದಸ್ಯರಿಬ್ಬರು ತಮ್ಮ ದೇಹಕ್ಕೆ ಹಸಿರು ಬಣ್ಣ ಹಚ್ಚಿಕೊಂಡು ತರಕಾರಿ ತಿನ್ನಿ, ಶಾಖಾಹಾರಿಯಾಗಿರಿ ಎಂಬ ಪದಕದೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.
ನವದೆಹಲಿಯಲ್ಲಿ ನಡೆದ 2016ರ ವಿಸಿಟರ್ಸ್ ಅರ್ವಾಡ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ವೇಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಾನವ ಸಂಪನ್ಮೂಲ ಸಚಿವೆ ಸ್ಮಿತಿ ಇರಾನಿ ಅವರೊಂದಿಗೆ ಮಾತನಾಡಿದ ಪರಿ.
ಹೆಣ್ಣು ಮಗುವನ್ನು ರಕ್ಷಿಸಿ... ಇಂದೋರ್ ನಲ್ಲಿ ಭಾನುವಾರ ನಡೆದ ಹೆಣ್ಣು ಮಗು ರಕ್ಷಿಸಿ ಎಂಬ ಕಾರ್ ರ್ಯಾಲಿಯಲ್ಲಿ ಮಹಿಳಾ ಕ್ಲಬ್ ನ ಸದಸ್ಯರು ಕಾಣಿಸಿಕೊಂಡಿದ್ದು ಹೀಗೆ.
ಅಭಿಮಾನದ ಸೆಲ್ಫಿ... ಕೋಲ್ಕತಾದಲ್ಲಿ ಶನಿವಾರ ನಡೆದ ತರಬೇತಿ ಪಂದ್ಯದ ವೇಳೆ ವೆಸ್ಟ್ ಇಂಡೀಸ್ ತಂಡದ ನಾಯಕ ಡರೇನ್ ಸಮಿ ಅವರು ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ನಾಯಕಿಗೆ ನಮಸ್ಕಾರ... ಶುಕ್ರವಾರ ಸಂಸತ್ ಬಜೆಟ್ ಅಧಿವೇಶನಕ್ಕೆ ಆಗಮಿಸಿದ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರನ್ನು ಪಕ್ಷದ ನಾಯಕರು ಗೌರವಿಸಿದ್ದು ಹೀಗೆ.
ನನ್ನ ಸಮಯ ಶುರು...
ಬೆಂಗಳೂರಿನಲ್ಲಿ ಲೊಂಗಿನೆಸ್ ಸೈಮ್ಫೋನೆಟೆ ವಾಚ್ ಗಳ ಉದ್ಘಾಟನೆ ವೇಳೆ ಕನ್ನಡದ ನಟಿ ಪ್ರಣೀತ ಸುಭಾಶ್ ಫೋನ್ ನೀಡಿದ ರೀತಿ.
ಇದು ಹೂವಿನ ಹೋಳಿ... ಕೋಲ್ಕತಾದಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲ ಕೇಶರಿನಾಥ್ ತ್ರಿಪಾಠಿ ಅವರು ಬಣ್ಣದ ಹಬ್ಬ ಹೋಳಿಯ ಅಂಗವಾಗಿ ಗುರುವಾರ ಹೂವಿನ ಹೋಳಿಯಾಡಿದ್ದು ಹೀಗೆ.
ಲೋರಿಯಲ್ ಪಾರ್ಟಿಯಲ್ಲಿ ಲಲನೆಯರು ಫೋಸ್...
ಲೋರಿಯಲ್ ರೆಡ್ ಅಬ್ಸಿಸನ್ ಪಾರ್ಟಿಯಲ್ಲಿ ಪ್ಯಾರಿಸ್ ಫಾರ್ಮುಲಾ ಒನ್ ಆಟಗಾರ ಹಾಮಿಲ್ಟನ್, ನಟಿ ಇವಾ ಲ್ಯಾಂಗೊರಿಯಾ ಮಾಡೆಲ್ ಗಳು ಭಾಗವಹಿಸಿದ್ದರು.
ಮಹಿಳಾ ದಿನದ ಶುಭಾಶಯ... ಫರಿದಾಬಾದ್ ನ ಕಾಲೇಜ್ ವೊಂದರ ವಿದ್ಯಾರ್ಥಿನಿಯರು ಮಂಗಳವಾರ ವಿಶ್ವ ಮಹಿಳಾ ದಿನವನ್ನು ಆಚರಿಸಿದ್ದು ಹೀಗೆ.
ಏರ್ ಇಂಡಿಯಾ ಗಗನ ಸಖಿಯರು...
ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಪುರಿ ಬೀಚ್ ನಲ್ಲಿ ಏರ್ ಇಂಡಿಯಾ ಗಗನಸಖಿಯರ ಚಿತ್ರ ಬರೆದು ಮಹಿಳೆಯರಿಗೆ ಅರ್ಪಿಸಿದರು.
ಮಹಾಶಿವರಾತ್ರಿಯಂದು ಧರ್ಮಸ್ಥಳ ಮಂಜುನಾಥನಿಗೆ ವಿಶೇಷ ಪೂಜೆ... ಮಹಾಶಿವರಾತ್ರಿಯಂದು ಧರ್ಮಸ್ಥಳದಲ್ಲಿ ಹಲವು ರೀತಿಯ ಪೂಜಾ ಕೈಂಕರ್ಯಗಳು ನಡೆಯಲಿವೆ. ಶ್ರೀ ಮಂಜುನಾಥನಿಗೆ ವಿಶೇಷ ಪೂಜೆಗಳ ಮೂಲಕ ನಮಿಸಲಾಗುತ್ತದೆ. ಶಿವರಾತ್ರಿಯಂದು ಲಕ್ಷಾಂತರ ಮಂದಿ ಧರ್ಮಸ್ಥಳಕ್ಕೆ ಭೇಟಿ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತ
ವಂದಿಸಿದ ಸಿಂಹಗಳು...
ಉಕ್ರೇನ್ ನ ರಾಷ್ಟ್ರೀಯ ಸರ್ಕಸ್ ನಲ್ಲಿ ವಂದಿಸಿದ ಕಾಡಿನ ರಾಜ.

ಬದಲಾದ ಮೋದಿ ಹೇರ್ ಸ್ಟೈಲ್..
ಪ್ರಧಾನಿ ನರೇಂದ್ರ ಮೋದಿ ಅವರ ಹೇರ್ ಸ್ಟೈಲ್ ಬದಲಾಗಿದೆ. ಈ ಹಿಂದೆ ಎಡಗಡೆಯಿಂದ ಬಲಗಡೆಗೆ ಬಾಚುತ್ತಿದ್ದ ಮೋದಿ ಅವರು ಇದೀಗ ಸಂಪೂರ್ಣವಾಗಿ ಹಿಂದಕ್ಕೆ ಬಾಚುವ ಮೂಲಕ ಹೊಸ ಸ್ಟೈಲ್ ಗೆ ಬದಲಾಗಿದ್ದಾರೆ.
ಚೆಲುವೆಯರ ಸಂತಸದ ನಗೆ...
ನವದೆಹಲಿಯಲ್ಲಿ ಖಾಸಗಿ ಸಂಸ್ಥೆಯೊಂದು ಆಯೋಜಿಸಲಿರುವ ವೀಕ್ ಸ್ಪರ್ಧೆಗಾಗಿ ಆಡಿಷನ್ ನಲ್ಲಿ ಭಾಗವಹಿಸಿದ ವಿಜೇತರಾದ ಚೆಲುವೆಯರ ಸಂತಸದ ನಗೆ.
ಗುಂಡಿಗೆ ಬಿದ್ದ ಆನೆಗಳ ತೊಳಲಾಟ...
ಕೊಡಗು ಜಿಲ್ಲೆಯ ಸಿದ್ದಾಪುರ ಗ್ರಾಮದ ಕಸದ ಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮರಿಯಾನೆ ಹಾಗೂ ತಾಯಿಯಾನೆಯನ್ನು ಜೆಸಿಬಿ ನೆರವಿನೊಂದಿಗೆ ಕಾಡಿಗೆ ಮರಳಲು ಅವಕಾಶ ಮಾಡಿಕೊಡಲಾಯಿತು.
ಅಮೀಶಾ ಕುಣಿತ...
ಅಲಹಾಬಾದ್ ನಲ್ಲಿ ನಡೆದ ತ್ರಿವೇಣಿ ಮಹೋತ್ಸವ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಅಮಿಶಾ ಪಟೇಲ್ ನೃತ್ಯ ಪ್ರದರ್ಶನ.
SCROLL FOR NEXT