ಇತರೆ

ಫೋಟೋ ಕ್ಲಿಕ್ ಜನವರಿ 2016

Vishwanath S
ಮಹಾತ್ಮನಿಗೆ ಪುಷ್ಪ ನಮನ... ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
<b>ಮಹಾತ್ಮನಿಗೆ ಪುಷ್ಪ ನಮನ...</b> ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ಹ್ಯಾಪಿ ಬರ್ತ್ ಡೇ... ಗುರುವಾರ ಚೆನ್ನೈನಲ್ಲಿ ನಡೆದ ಅಂಧ ಮಕ್ಕಳ ರಕ್ಷಿಸಿ ಅಭಿಯಾನದಲ್ಲಿ ನಟಿ ಶೃತಿ ಹಾಸನ್ ಅವರು ಅಂಧ ಮಕ್ಕಳೊಂದಿಗೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು.
ಮಹಾತ್ಮಗಾಂಧಿ ಪ್ರತಿಮೆಗೆ ಪುಷ್ಪ ನಮನ...
67ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಭಾರತದ ರಾಯಭಾರಿ ಅರುಣ್ ಕೆ ಸಿಂಗ್ ಮಹಾತ್ಮ ಗಾಂದಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಕೆಂಪು ಬನಾರಸ್ ರೇಷ್ಮೆ ಸೀರೆಯಲ್ಲಿ ಮಿಂಚಿದ ಐಶ್...
67ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರಿಗಾಗಿ ಮಂಗಳವಾರ ಏರ್ಪಡಿಸಲಾಗಿದ್ದ ವಿಶೇಷ ಭೋಜನಕೂಟದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರು ಕೆಂಪು ಬನಾರಸ್ ರೇಷ್ಮೆ ಸೀರೆಯಲ್ಲಿ ಮಿಂಚಿದರು.
ಗಣರಾಜ್ಯೋತ್ಸವದಲ್ಲಿ ಮಿಂಚಿದ ಕರ್ನಾಟಕದ ಸ್ತಬ್ದಚಿತ್ರ...|
67ನೇ ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ರಾಜಪಥದಲ್ಲಿ ಕರ್ನಾಟಕ ಕಾಫಿ ನಾಡಿನ ಘಮಲು ಪಸರಿಸಿತ್ತು. ಚುಮು ಚುಮು ಚಳಿಗೆ ಮೈಯೊಡ್ಡಿ ಕುಳಿತಿದ್ದ ಲಕ್ಷಾಂತರ ದೇಶಭಕ್ತರಿಗೆ ಕರ್ನಾಟಕದ ಸ್ತಬ್ಧ ಚಿತ್ರ ಬಿಸಿ ಬಿಸಿ ಕಾಫಿ ನೀಡಿ ಮೈ
ಸಂಭ್ರಮದ ರಥೋತ್ಸವ...
ಬಾದಾಮಿ ಸಮೀಪದ ಸುಕ್ಷೇತ್ರ ಶ್ರೀಬನಶಂಕರಿ ದೇವಿ ಜಾತ್ರಾ ಮಹೋತ್ಸವದ ರಥೋತ್ಸವ ಸಹಸ್ರಾರು ಭಕ್ತಾದಿಗಳ ಭಕ್ತಿ ಭಾವದ ಮಧ್ಯೆ ಸಂಭ್ರಮದಿಂದ ಭಾನುವಾರ ಜರುಗಿತು.
ಡೇರ್ ಡೆವಿಲ್ಸ್ ಪೊಲೀಸರ ಕಸರತ್ತು...
ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆ ರಾಜಸ್ಥಾನದ ಡೇರ್ ಡೆವಿಲ್ಸ್ ಪೊಲೀಸರು ಕಸರತ್ತು ನಡೆಸುತ್ತಿರುವ ದೃಶ್ಯ.

ನೇತಾಜಿಗೆ ನಮನ... ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 119ನೇ ಜನ್ಮದಿನಾಚರಣೆಯ ಪ್ರಯುಕ್ತ ಶನಿವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿರುವ ನೇತಾಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಬಾಸ್ಕೆಟ್ ಬಾಲ್ ಮಸ್ತಿ...
ವೆಮುಲ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ರಾಜಿನಾಮೆಗೆ ಒತ್ತಾಯಿಸಿ ಪ್ರತಿಭಟನೆಗಳು ಭುಗಿಲೆದ್ದಿದ್ದರೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಗುರುವಾರ ಉತ್ತರ ಪ್ರದೇಶದ ಅಲಿಘರ್ ನ ಟಿಕಾ ರಾಮ್ ಪದವಿ ಕಾಲೇಜಿನಲ್ಲಿ ಬಾಸ್ಕೆಟ್ ಬಾಲ್ ಆಟದ ಮೂಡಿನಲ್ಲಿದ್ದರು.

ಕಡ್ಡಾಯ ಹೆಲ್ಮೆಟ್ ಪ್ರಭಾವ...
ಹೆಲ್ಮೆಟ್ ಕಡ್ಡಾಯ ಹಿನ್ನೆಲೆಯಲ್ಲಿ ಬುಧವಾರ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳಿಗೂ ಹೆಲ್ಮೆಟ್ ತೊಡೆಸಿದ್ದ ದೃಶ್ಯ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿ ಕಂಡು ಬಂದಿತು.
ಅಲ್ಲಿ ನೋಡು ಇಸ್ರೋ ರಾಕೆಟ್.... ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ( ಇಸ್ರೋ) ಬುಧವಾರ ಶ್ರೀಹರಿಕೋಟಾದಲ್ಲಿ ಉಡಾವಣೆ ಮಾಡಿದ 5ನೇ ನೌಕಾಯಾನ ಉಪಗ್ರಹ ಐಆರ್ ಎನ್ಎಸ್ಎಸ್-1ಸಿ ಯನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಕುಟುಂಬ.
ಆಡ್ವಾಣಿಗೆ ಅಭಿನಂದನೆ... ಸೋಮವಾರ ಉಡುಪಿಯ ಪರ್ಯಾಯ ಮಹೋತ್ವವದಲ್ಲಿ ಭಾಗವಹಿಸಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರಿಗೆ ಪೇಜಾವರ ಶ್ರೀಗಳು ಅಭಿನಂದನೆ ಸಲ್ಲಿಸಿದರು.
ನಾ ಯಾರು ಗೊತ್ತಾ...
ನಾಗಶೇಖರ್ ನಿರ್ದೇಶನದ ಮಾಸ್ತಿ ಗುಡಿ ಚಿತ್ರದಲ್ಲಿ ನಟ ದುನಿಯಾ ವಿಜಯ್ ಇಂಥ ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಿಚ್ಚು ಹಾಯುತ್ತಿರುವ ಹಸು...
ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ಸಮೀಪದ ಗೋಶಾಲೆಯಲ್ಲಿ ಸಂಕ್ರಾಂತ್ರಿ ಅಂಗವಾಗಿ ಹಸುಗಳನ್ನು ಕಿಚ್ಚು ಹಾಯಿಸುವ ಮೂಲಕ ಪಾರಂಪರಿಕ ಆಚರಣೆ ನಡೆಸಲಾಯಿತು.
ಗಂಗಾ ನದಿಯಲ್ಲಿ ಸಾಧು ಪವಿತ್ರ ಸ್ನಾನ...
ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಹರಿದ್ವಾರ ಬಳಿಯ ಗಂಗಾ ನದಿಯಲ್ಲಿ ಸಾಧು ಒಬ್ಬರು ಪವಿತ್ರ ಸ್ನಾನ ಮಾಡುತ್ತಿರುವುದು.

ಫುಟ್ಟಾನಿಸ್ ಡ್ಯಾನ್ಸ್ ಸೂಪರ್...
ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಪುತ್ರಿ ಸನಾ ಗಂಗೂಲಿ ಜತೆಗೆ ಮಾತನಾಡಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್.
ಕಾನೂನೆಲ್ಲಾ ಸಾರ್ವಜನಿಕರಿಗೆ ಮಾತ್ರ...
ಎಲ್ಲ ಕಾನೂನುಗಳನ್ನು ಅನುಷ್ಠಾನಗೊಳಿಸಲು ಮೊದಲು ಮುಂದಾಗಬೇಕಾದ ಪೊಲೀಸರೇ ಅದನ್ನು ಉಲ್ಲಂಘಿಸಿದರೆ? ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂದು ಆದೇಶ ಹೊರಬಿದ್ದಿದ್ದರೂ ತಲೆಕೆಡಿಸಿಕೊಳ್ಳದೆ ಬೈಕ್ ಚಲಾಯಿಸಿದ ಪೊಲೀಸರು.
ಗರುಡ ಕಮಾಂಡೋ ಕಾರ್ಯಾಚರಣೆ...
ಉಗ್ರರ ಟಾರ್ಗೆಟ್ ಹಿನ್ನೆಲೆಯಲ್ಲಿ ವಿಧಾನಸೌಧ ಸೇರಿದಂತೆ ನಾನಾ ಕಾರ್ಯಸೌಧಗಳಲ್ಲಿ ವಿಶೇಷ ಗರುಡ ಕಮಾಂಡೋಗಳು ಮಿಂಚಿನ ಕಾರ್ಯಾಚರಣೆ ನಡೆಸಿದರು. ಸಂಭಾವ್ಯ ಪರಿಸ್ಥಿಗಳನ್ನು ಕಮಾಂಡೋಗಳು ಹೇಗೆ ನಿರ್ವಹಿಸಲಿದ್ದಾರೆ.
ಬಾಲಿವುಡ್ ತಾರೆಯರ ಕುಶಲೋಪರಿ...
ನಿಮ್ಮಂತೆ ನನಗೂ ಪ್ರಶಸ್ತಿ ಸಿಕ್ಕಿದೆ. ಹೀಗೆಂದು ಹಿಂದಿ ಚಿತ್ರರಂಗದ ಹಿರಿಯ ನಟಿ ರೇಖಾ, ದೀಪಿಕಾ ಪಡುಕೋಣೆ ಅವರಿಗೆ ಹೇಳುವಂತಿದೆ. ಮುಂಬೈನಲ್ಲಿ ಖಾಸಗಿ ವಾಹಿನಿ ಶನಿವಾರ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಇಬ್ಬರು ನಟಿಯರು ಪ್ರಶಸ್ತಿ ಸ್ವೀಕರ
ಟ್ವಿನ್ ಸಿಟಿ ಸುಂದರಿಯರು... ಹೈದರಾಬಾದ್ ನಲ್ಲಿ ನಡೆದ ಮಿಸ್ ಟ್ವಿನ್ ಸಿಟಿ - 2016 ಸ್ಪರ್ಧೆಯ ವಿಜೇತೆ ಅಕ್ಷಿತಾ ಶ್ರೀನಿವಾಸ್ ಅವರು ರನ್ನರ್ ಅಪ್ ಗಳೊಂದಿಗೆ ಶುಕ್ರವಾರ ಪೋಸ್ ನೀಡಿದ್ದು ಹೀಗೆ.
ಮೋದಿ ಸಾಂತ್ವನ ನುಡಿ... ಗುರುವಾರ ನಿಧನರಾದ ಜಮ್ಮು-ಕಾಶ್ಮೀರ ಸಿಎಂ ಮುಫ್ತಿ ಸಯೀದ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ.
ಇದು ಕ್ರಿಕೆಟ್ ದೇವರು ಕೊಟ್ಟ ಕಾಣಿಕೆ... ಅಂತರ ಶಾಲಾ  ಕ್ರಿಕೆಟ್ ಟೂರ್ನಿಯಲ್ಲಿ ಕೇವಲ 323 ಎಸೆತಗಳಲ್ಲಿ 1009ರನ್‌ಗಳನ್ನು ಗಳಿಸಿ ವಿಶ್ವ ದಾಖಲೆ ಮಾಡಿದ ಪ್ರಣವ್‌ ಧನಾವಡೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ತಮಗೆ ಕಾಣಿಕೆಯಾಗಿ ನೀಡಿದ ಬ್ಯಾಟ್ ಅನ್ನು ಗುರುವಾರ ಮುಂಬೈನಲ್ಲಿ ಪ್ರದರ್ಶಿಸಿ
ಹುತಾತ್ಮ ಯೋಧರಿಗೆ ನಮನ... ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಬೀಚ್‌ನಲ್ಲಿ ಪಠಾಣ್‌ಕೋಟ್ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸಿದ್ದು ಹೀಗೆ.
ಮಂಜಿನಿಂದ ಬೆಳಕಿನುಂಗುರ... ಸದಾ ಹಿಮಾವೃತವಾಗಿಯೇ ಇರುವ ಅಂಟಾಕ್ರ್ಟಿಕಾದಲ್ಲಿ ಇದೀಗ ಮಂಜುಗಡ್ಡೆಗಳು ಸೂರ್ಯನ ಕಿರಣಗಳನ್ನೇ ವಕ್ರಗೊಳಿಸಿದ್ದು ಅದರಿಂದ ಸೂರ್ಯನ ಬೆಳಕು ಉಂಗುರಾಕಾರವನ್ನು ಸೃಷ್ಟಿಸಿ ದೆಯಂತೆ. ಪೂರ್ವ ಅಂಟಾಕ್ರ್ಟಿಕಾದಲ್ಲಿ ಈ ಅಪ ರೂಪದ ದೃಶ್ಯವೈಭವ ಸೃಷ್ಟಿಯಾಗಿದೆ. 22 ಡಿಗ್ರಿ ಹಾಲೋ ಎಂದೇ ಕರ
ಹೊಸ ವರ್ಷದ ಸೆಲ್ಫಿ... ಬಿರ್ಭೂಮ್ ನಲ್ಲಿ ಸೋಮವಾರ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬುಡಕಟ್ಟು ಕಲಾವಿದರೊಂದಿಗೆ ಮಣಿಪುರಿ ಯುವತಿಯೊಬ್ಬಳು ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ಸಿದ್ದಗಂಗಾ ಶ್ರೀಗೆ ವಂದಿಸಿದ ಮೋದಿ... ಮೈಸೂರಿನಲ್ಲಿ ನಡೆದ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀಗಳಿಗೆ ಮೋದಿ ವಂದನೆ.
ಪ್ರಧಾನಿಗಾಗಿ ಸಿದ್ಧವಾಗುತ್ತಿದೆ ವೇದಿಕೆ... ಭಾನುವಾರ ತುಮಕೂರಿನಲ್ಲಿ ಎಚ್‌ಎಎಲ್‌ನ ನೂತನ ಹೆಲಿಕಾಪ್ಟರ್ ನಿರ್ಮಾಣ ಘಟಕಕ್ಕೆ ಶಂಕುಸ್ಥಾಪನೆ ಮಾಡಲು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಸಿದ್ಧಗೊಂಡಿರುವ ವೇದಿಕೆ.
ಹೊಸ ವರ್ಷದ ಸಂಭ್ರಮಾಚರಣೆ ವೇಳೆ ವಿಶ್ವ ವಿಖ್ಯಾತ ಕಟ್ಟಡ ಬುರ್ಜ್ ಖಲೀಫಾದ ಬಳಿಯೇ ಇರುವ ದುಬೈನ ಅಡ್ರೆಸ್ ಡೌನ್ ಟೌನ್ ಎಂಬ ವೈಭವೋಪೇತ 63 ಮಹಡಿಗಳ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸುಮಾರು 12 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ಶಮನಗೊಳಿಸಲಾಯಿತು.
SCROLL FOR NEXT