ಇತರೆ

ಫೋಟೋ ಕ್ಲಿಕ್ ಮಾರ್ಚ್ 2019

Lingaraj Badiger
ಶರಣಬಸವೇಶ್ವರ ಜಾತ್ರಾ ಮಹೋತ್ಸವ.... ಕಲಬುರಗಿಯಲ್ಲಿ 11 ದಿನಗಳ ಕಾಲ ನಡೆಯುವ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಸಾವಿರಾರು ಭಕ್ತರು ಭಾಗವಹಿಸಿದ್ದರು.
<b>ಶರಣಬಸವೇಶ್ವರ ಜಾತ್ರಾ ಮಹೋತ್ಸವ....</b> ಕಲಬುರಗಿಯಲ್ಲಿ 11 ದಿನಗಳ ಕಾಲ ನಡೆಯುವ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಹ್ಯಾಪಿ ಬರ್ತ್ ಡೇ ಕ್ವೀನ್.... ಬಾಲಿವುಡ್ ನಟಿ ಕಂಗನಾ ರಣೌತ್ ಅವರು ಶನಿವಾರ ಮುಂಬೈನ ತಮ್ಮ ನಿವಾಸದಲ್ಲಿ 32ನೇ ಹುಟ್ಟು ಹಬ್ಬ ಆಚರಿಸಿಕೊಂಡರು.
ವಿದೇಶಿಗರ ಹೋಳಿ ಸಂಭ್ರಮ..... ಜೋಧ್ ಪುರದಲ್ಲಿ ವಿದೇಶಿ ಪ್ರವಾಸಿಗರು ಮಂಗಳವಾರ ಹೋಳಿ ಆಚರಿಸಿದ್ದು ಹೀಗೆ.
ಹುಟ್ಟುಹಬ್ಬದಂದು ಅಭಿಮಾನದ ಸೆಲ್ಫಿ..... ಮುಂಬೈನಲ್ಲಿ ಗುರುವಾರ ತಮ್ಮ 54ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್ ನಟ ಆಮಿರ್ ಖಾನ್ ಅವರು ತಮ್ಮ ನಿವಾಸಕ್ಕೆ ಆಗಮಿಸಿದ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ದಯವಿಟ್ಟು ಮತದಾನ ಮಾಡಿ.... 2019ರ ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಅಲಹಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮರಳು ಕಲಾಕೃತಿ ನಿರ್ಮಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.
ಪೋಸ್ಟರ್‌ ಬಾಯ್ಸ್‌.... ಹಾವೇರಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪರಿವರ್ತನಾ ರ್ಯಾಲಿಯಲ್ಲಿ ಪೋಸ್ಟರ್ ಬಾಯ್ಸ್ ಗಳು ಜನರ ಗಮನ ಸೆಳೆದರು.
ಬಿಸಿಲ ಬೇಗೆ ತಣಿಸಿದ ಕಲ್ಲಂಗಡಿ.... ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗುಟ್ಟಹಳ್ಳಿಯಲ್ಲಿ ಜನ ಬಿಸಿಲಿನ ಬೇಗೆ ತಣಿಸಿಕೊಳ್ಳಲು ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿರುವ ದೃಶ್ಯ ಕಾಣಿಸಿದ್ದು ಹೀಗೆ.
ಮಹಾಶಿವರಾತ್ರಿ ಸಂಭ್ರಮ.... ಸೋಮವಾರ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು, ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ಶಿವನ ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಆಭರಣ ಸುಂದರಿ.... ಬೆಂಗಳೂರಿನ ಜೆಡಬ್ಲ್ಯು ಮಾರಿಯಟ್ ಹೋಟೆನ್ ಲ್ಲಿ ನಟಿ ಹರ್ಷಿಕಾ ಪೂಣಚ್ಚ ಅವರು ಶನಿವಾರ ಏಷ್ಯಾ ಜ್ಯೂವೆಲ್ಸ್ ಫೇರ್ 2019 ಅನ್ನು ಉದ್ಘಾಟಿಸಿದರು.
ಮಹಿಳಾ ಸಾಹಿತ್ಯ ಸಮ್ಮೇಳನ... ಚಿಕ್ಕಮಗಳೂರಿನಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಅದ್ಧೂರಿ ಚಾಲನೆ ನೀಡಲಾಗಿದ್ದು, ಮೆರವಣಿಗೆಯಲ್ಲಿ ಸಮ್ಮೇಳನ ಅಧ್ಯಕ್ಷೆ ಸುಧಾಮೂರ್ತಿ ಭಾಗವಹಿಸಿದ್ದರು.
ಮಹಿಳಾ ಸಾಹಿತ್ಯ ಸಮ್ಮೇಳನ... ಚಿಕ್ಕಮಗಳೂರಿನಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಅದ್ಧೂರಿ ಚಾಲನೆ ನೀಡಲಾಗಿದ್ದು, ಮೆರವಣಿಗೆಯಲ್ಲಿ ಸಮ್ಮೇಳನ ಅಧ್ಯಕ್ಷೆ ಸುಧಾಮೂರ್ತಿ ಭಾಗವಹಿಸಿದ್ದರು.
SCROLL FOR NEXT