2020ನೇ ಇಸವಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದು ಕೊರೋನಾ ವೈರಸ್ ನಿಂದ. ಪಡಬಾರದ ಕಷ್ಟಗಳನ್ನು ಜನರು ಪಟ್ಟರು. ಆದರೆ ಅದರಿಂದ ಜನರು ಕನಸು, ಆಸೆಗಳನ್ನು ಕಳೆದುಕೊಂಡಿಲ್ಲ, 2021ನೇ ಇಸವಿಗೆ ಕಾಲಿಟ್ಟಿದ್ದು ಒಂದಷ್ಟು ಆಸೆ, ಆಕಾಂಕ್ಷೆಗಳು, ಕನಸುಗಳನ್ನು ಹೊತ್ತು ಮುಂದಡಿಯಿಟ್ಟಿದ್ದಾರೆ. 
ಇತರೆ

2021ಕ್ಕೆ ಸ್ವಾಗತ: ಹೊಸ ದಶಕದ ಆರಂಭವನ್ನು ದೇಶಗಳು ಸ್ವಾಗತಿಸಿದ್ದು ಹೀಗೆ

2020ರಲ್ಲಿ ಕೊರೋನಾ ದಿಂದ ಪಡಬಾರದ ಕಷ್ಟಪಟ್ಟ ಜನರು, ಕನಸು, ಆಸೆಗಳನ್ನು ಕಳೆದುಕೊಂಡಿಲ್ಲ, 2021ನೇ ಇಸವಿಗೆ ಕಾಲಿಟ್ಟಿದ್ದು ಒಂದಷ್ಟು ಆಸೆ, ಆಕಾಂಕ್ಷೆಗಳು, ಕನಸುಗಳನ್ನು ಹೊತ್ತು , ಸಂತೋಷದಿಂದ ಮುಂದಡಿಯಿಟ್ಟಿದ್ದಾರೆ.

ಆಸ್ಟ್ರೇಲಿಯಾದ ಸಿಡ್ನಿಯ ಒಪೆರಾ ಹೌಸ್ ಮತ್ತು ಹಾರ್ಬರ್ ಬ್ರಿಡ್ಜ್ ನಲ್ಲಿ ಹೊಸ ವರ್ಷಾಚರಣೆ 2021 ಕಂಡುಬಂದದ್ದು ಹೀಗೆ. ಸಾಮಾನ್ಯವಾಗಿ ಪ್ರತಿವರ್ಷ ಹೊಸ ವರ್ಷಾಚರಣೆ ಸಂಭ್ರಮ ಇಲ್ಲಿ ಮುಗಿಲುಮುಟ್ಟುತ್ತದೆ. ಸಿಡ್ನಿ ಬಂದರು ತೀರದಲ್ಲಿ ಈ ದಿನ ಸುಮಾರು 10 ಲಕ್ಷ ಜನ ಸೇರಿ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಆದರೆ ಈ
ನ್ಯೂಜಿಲ್ಯಾಂಡ್ ನ ಔಕ್ನಾಂಡ್ ನ ಸ್ಕೈ ಟವರ್ ನಲ್ಲಿ ಹೊಸ ವರ್ಷ 2021ನ್ನು ಸ್ವಾಗತಿಸಿದ್ದು ಹೀಗೆ. ನ್ಯೂಜಿಲ್ಯಾಂಡ್ ಮತ್ತು ಅದರ ದಕ್ಷಿಣ ಫೆಸಿಫಿಕ್ ದ್ವೀಪದಲ್ಲಿ ಕೊರೋನಾ ಸೋಂಕು ಇಲ್ಲ, ಹೀಗಾಗಿ ಎಂದಿನಂತೆ ನಿನ್ನೆ ಕೂಡ ಹೊಸ ವರ್ಷ ಸಂಭ್ರಮಾಚರಣೆ ನೆರವೇರಿತು.
ತೈವಾನ್ ನ ತೈಪೈ 101 ಕಟ್ಟಡದಲ್ಲಿ ನಿನ್ನೆ ಕಂಡುಬಂದ ಪಟಾಕಿ ಹಚ್ಚುವಿಕೆಯ ದೃಶ್ಯ
ಜಕಾರ್ತದ ಹೊಟೇಲ್ ಇಂಡೋನೇಷಿಯಾ ರೌಂಡಬೌಟ್ ನಲ್ಲಿ ನಿನ್ನೆ ಕಂಡು ಬಂದ ದೃಶ್ಯ.ಜಕಾರ್ತದ ಇದೇ ಹೊಟೇಲ್ ನಲ್ಲಿ ಡಿಸೆಂಬರ್ 31, 2016ರಲ್ಲಿ ಜನದಟ್ಟಣೆ ಸೇರಿ ಕಂಡುಬಂದದ್ದು ಹೀಗೆ.
ಟೊಕ್ಯೊದ ಸೆನ್ಸೊಜಿ ದೇವಾಲಯಕ್ಕೆ ನಿನ್ನೆ ಭೇಟಿ ನೀಡಿದ ಜನತೆ.
ಇದು ಹೊಸ ದಶಕದ ಆರಂಭವಾಗಿರಬಹುದು. ಆದರೆ ಇನ್ನೂ ಕೊರೋನಾ ವೈರಸ್ ಹೋಗಿಲ್ಲ, ಚಿತ್ರದಲ್ಲಿ ಮಹಿಳೆಯೊಬ್ಬರು ಮಾಸ್ಕ್ ಧರಿಸಿಕೊಂಡು ಪಬ್ ಸಮೀಪ ನಡೆದುಕೊಂಡು ಹೋಗುತ್ತಿದ್ದಾರೆ. ಇದು ಕಂಡುಬಂದಿದ್ದು ಬ್ರುಝೆಲ್ಸ್ ನಲ್ಲಿ.
ತೆರೆಯ ಮೇಲೆ ಫಿಯೊನಿಕ್ಸ್ ಕಂಡುಬರುತ್ತಿದೆ. ಚೀನಾದ ಬೀಜಿಂಗ್ ನಲ್ಲಿ ಕಟ್ಟಡ ಮುಂದೆ ಸೆಕ್ಯುರಿಟಿ ಗಾರ್ಡ್ ನಿಂತಿದ್ದಾರೆ.
ಭಾರತದಲ್ಲಿ ಹೊಸ ದಶಕ ಆರಂಭದ ವರ್ಷದಲ್ಲಿ ಜನರಲ್ಲಿ ಇರುವ ಬಹುದೊಡ್ಡ ಭರವಸೆ ಕೊರೋನಾ ವೈರಸ್ ಗೆ ಲಸಿಕೆ ಬರಬಹುದು ಎಂದು. ಅಹ್ಮದಾಬಾದ್ ನಲ್ಲಿ ಜನರು 2021ನ್ನು ಸ್ವಾಗತಿಸಲು ಫಲಕಗಳನ್ನು ಹಿಡಿದುಕೊಂಡಿರುವುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT