ಮರಾಠಿಯನ್ನರು ಗುಡಿ ಪಡ್ವಾದಂದು ಬೇವಿನ ಎಲೆ, ಬೆಲ್ಲವನ್ನು ದೇವರಿಗೆ ಅರ್ಪಿಸಿ ಕುಟುಂಬದವರು, ಅಕ್ಕಪಕ್ಕದ ಮನೆ ಮತ್ತು ನೆಂಟರಿಷ್ಟರಿಗೆ ಹಂಚುತ್ತಾರೆ. ಗುಡಿ ಪಡ್ವಾದ ಅಂಗವಾಗಿ ಮರಾಠಿ ಮಹಿಳೆಯರು ನೃತ್ಯ ಮಾಡುತ್ತಿರುವುದು.
ಹಿಂದೂ ಪಂಚಾಂಗ ಪ್ರಕಾರ, ಈ ದಿನ ವಸಂತ ಕಾಲದ ಆರಂಭ ಎಂದರ್ಥ. ಚಿತ್ರದಲ್ಲಿ ಮಹಾರಾಷ್ಟ್ರದ ಮಹಿಳೆಯರು ಸಾಂಪ್ರದಾಯಿಕವಾಗಿ ಮರಾಠಿ ಸ್ಟೈಲ್ ನಲ್ಲಿ ವೇಷ ತೊಟ್ಟು ಮುಂಬೈಯಲ್ಲಿ ಗುಡಿ ಪಡ್ವಾ ಮೆರವಣಿಗೆ ಹೋಗುತ್ತಿದ್ದಾರೆ.
ಈ ದಿನ ಬ್ರಹ್ಮ ದೇವರು ಜಗತ್ತನ್ನು ಮರು ಸೃಷ್ಟಿಸಿದ ಎಂಬ ಮಾತಿದೆ. ನೆರೆ ಬಂದು ಜಗತ್ತೆಲ್ಲಾ ನಾಶವಾಗಿರುತ್ತದೆ. ಆ ನಂತರ ಬ್ರಹ್ಮ ಮರು ಸೃಷ್ಟಿಸುತ್ತಾನೆ. ಈ ದಿನ ರಾಮ ದೇವರು ದೊರೆ ವಾಲಿಯನ್ನು ಕೊಂದು ಜಯಶಾಲಿಯಾದ ದಿನ. ಹೀಗಾಗಿ ಯುಗಾದಿ ಹಿಂದೂಗಳ ಪಾಲಿಗೆ ಅತ್ಯಂತ ವಿಶೇಷ ಹಬ್ಬ.