ದೇಶ

ಅಟಲ್ ಬಿಹಾರಿ ವಾಜಪೇಯಿಯವರ ಬಗ್ಗೆ ಕೆಲವು ಕುತೂಹಲಕರ ಸಂಗತಿಗಳು

Sumana Upadhyaya
ವಾಜಪೇಯಿಯವರು ಕವಿತೆ ಪ್ರಿಯರು, ಸ್ವತಃ ಕವಿಯಾಗಿದ್ದರು. ಜಗ್ಜೀತ್ ಸಿಂಗ್ ಜೊತೆಗೆ 1999ರಲ್ಲಿ ನಯಿ ದಿಶಾ ಮತ್ತು 2002ರಲ್ಲಿ ಸಂವೇದನಾ ಎಂಬ ಎರಡು ಆಲ್ಬಂಗಳನ್ನು ಬಿಡುಗಡೆ ಮಾಡಿದ್ದರು.


ವಾಜಪೇಯಿಯವರು ಕವಿತೆ ಪ್ರಿಯರು, ಸ್ವತಃ ಕವಿಯಾಗಿದ್ದರು. ಜಗ್ಜೀತ್ ಸಿಂಗ್ ಜೊತೆಗೆ 1999ರಲ್ಲಿ ನಯಿ ದಿಶಾ ಮತ್ತು 2002ರಲ್ಲಿ ಸಂವೇದನಾ ಎಂಬ ಎರಡು ಆಲ್ಬಂಗಳನ್ನು ಬಿಡುಗಡೆ ಮಾಡಿದ್ದರು.<br><br><br>
ದೆಹಲಿ-ಲಾಹೋರ್ ಬಸ್ ಸಂಚಾರ ಸೇವೆಯನ್ನು ಅಟಲ್ ಬಿಹಾರಿ ವಾಜಪೇಯಿಯವರು ಆರಂಭಿಸಿದರು. ಪಾಕಿಸ್ತಾನದ ಜೊತೆ ಯಾವತ್ತಿಗೂ ಶಾಂತಿಯುತ ಮೈತ್ರಿಯನ್ನು ಬಯಸಿದ್ದರು. ಪೂರ್ಣ ಪ್ರಮಾಣದ ರಾಜತಾಂತ್ರಿಕ ಶಾಂತಿ ಪ್ರಕ್ರಿಯೆಯನ್ನು ತರಲು 1999ರಲ್ಲಿ ದೆಹಲಿ-ಲಾಹೋರ್ ನಡುವೆ ಬಸ್ ಸಂಚಾರ ಸೇವೆ ಪ್ರಾರಂಭಿಸಿದರು.


ಪರಮಾಣು ಶಸ್ತಾಸ್ತ್ರದ ಮೂಲಕ ದೇಶವನ್ನು ಸಶಕ್ತೀಕರಣಗೊಳಿಸಿದರು. 1998ರಲ್ಲಿ ಪೋಕ್ರಾನ್ ಪರಮಾಣು ಪರೀಕ್ಷೆಗೆ ಒಪ್ಪಿಗೆ ನೀಡಿದ್ದರು. ಅವರ ಅಧಿಕಾರಾವಧಿಯಲ್ಲಿ ಹಲವು ಪರಮಾಣು ಪರೀಕ್ಷೆಗಳು ಭಾರತದಲ್ಲಿ ನಡೆದವು.


ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 1977ರಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದರು. ಆಗ ಅವರು ವಿದೇಶಾಂಗ ಸಚಿವರಾಗಿದ್ದರು.


ರಾಜಕೀಯದಲ್ಲಿನ ಅಗಾಧ ಒಲವು, ಆಸಕ್ತಿ ಮತ್ತು ಅನುಭವಗಳಿಂದಾಗಿ ವಾಜಪೇಯಿಯವರು ಲೋಕಸಭೆಗೆ 10 ಬಾರಿ ಮತ್ತು ರಾಜ್ಯಸಭೆಗೆ 2 ಬಾರಿ ಆಯ್ಕೆಯಾಗಿದ್ದರು. ಕಾಂಗ್ರೆಸ್ಸೇತರ ಪ್ರಧಾನಿಯಾಗಿ ಸಂಪೂರ್ಣ 5 ವರ್ಷ ಆಡಳಿತ ನಡೆಸಿದ ಮೊದಲಿಗರು ವಾಜಪೇಯಿ.

ಅಟಲ್ ಬಿಹಾರಿ ವಾಜಪೇಯಿಯವರು ಮೊದಲ ಬಾರಿಗೆ ಚುನಾವಣೆಯಲ್ಲಿ ಗೆದ್ದದ್ದು 1957ರಲ್ಲಿ. ಶ್ಯಾಮ್ ಪ್ರಸಾದ್ ಮುಖರ್ಜಿಯವರ ಹಠಾತ್ ನಿಧನದಿಂದ ವಾಜಪೇಯಿಯವರು ಅಧಿಕಾರ ಪಡೆದು 1957ರಲ್ಲಿ ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಿದರು.

ವಾಜಪೇಯಿಯವರಿಗೆ ಪತ್ರಕರ್ತನಾಗಬೇಕೆಂಬ ಬಯಕೆಯಿತ್ತು. ಆದರೆ ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದರು.

1950ರ ದಶಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಾದ ಪತ್ರಿಕೆಯೊಂದನ್ನು ನಡೆಸಲು ಕಾನೂನು ಪದವಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಯಿತಂತೆ. ವಾಜಪೇಯಿಯವರ ತಂದೆ ಸರ್ಕಾರಿ ನೌಕರರಾಗಿದ್ದರಿಂದ ಆರ್ ಎಸ್ಎಸ್ ನ ಖಾಕಿ ಸಮವಸ್ತ್ರವನ್ನು ಧರಿಸಲು ಬಿಡುತ್ತಿರಲಿಲ್ಲ. ಹೀಗಾಗಿ ವಾಜಪೇಯಿಯವರ ಸೋದರಿ ವಾಜಪೇಯಿಯವರ ಬಟ್ಟೆಯನ್ನು ಹೊರಗೆ
ಅಟಲ್ ಜೀಯವರು ತಮ್ಮ ಕಾಲೇಜಿಗೆ ಹೋಗುತ್ತಿದ್ದುದು ತಂದೆಯವರ ಜೊತೆ. ಕಾನ್ಪುರದ ಡಾವ್ ಕಾಲೇಜಿಗೆ ತಂದೆಯ ಜೊತೆ ಹೋಗುತ್ತಿದ್ದರು. ಅವರ ತಂದೆಗೆ ಸಹ ಓದಿನಲ್ಲಿ ಆಸಕ್ತಿ ಇದ್ದುದರಿಂದ ಮಗನ ಜೊತೆ ಕಾಲೇಜಿಗೆ ಅಧ್ಯಯನ ನಡೆಸಲು ಹೋಗುತ್ತಿದ್ದರಂತೆ. ತಂದೆ ಮಗ ಇಬ್ಬರೂ ಒಂದೇ ತರಗತಿಯಲ್ಲಿ ಮತ್ತು ಒಂದೇ ಹಾಸ್ಟೆಲ್ ನಲ್ಲಿ ಉಳಿದ
ಜೀವನವಿಡೀ ಅವಿವಾಹಿತರಾಗಿಯೇ ಉಳಿದರು. ಆದರೂ ನಮಿತಾ ಎಂಬ ಹೆಣ್ಣು ಮಗಳನ್ನು ದತ್ತು ಪಡೆದಿದ್ದರು.




 
SCROLL FOR NEXT