ಕಾಶ್ಮೀರದ ಕುಗ್ರಾಮಗಳಲ್ಲಿ ಕೊರೊನಾ ವಾರಿಯರ್ ಗಳು ಲಸಿಕೆಯ ಪೆಟ್ಟಿಗೆಯನ್ನು ಹೊತ್ತು ಮೂಳೆ ನಡುಗಿಸುವ ಚಳಿಯನ್ನೂ ಲೆಕ್ಕಿಸದೆ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದಾರೆ. ಮಸ್ರತ್ ಫರೀದ್ ಅವರಲ್ಲೊಬ್ಬರು. 
ದೇಶ

ಕಾಶ್ಮೀರ: ಮೂಳೆಯನ್ನೂ ಕೊರೆವ ಚಳಿ ಲೆಕ್ಕಿಸದೆ ಕೊರೊನಾ ವಾರಿಯರ್ ಗಳ ಕರ್ತವ್ಯನಿಷ್ಠೆ; ಕೊರೊನಾ ವಿರುದ್ಧ ಹೋರಾಟ

ಕಾಶ್ಮೀರದ ಕುಗ್ರಾಮಗಳಲ್ಲಿ ಕೊರೊನಾ ವಾರಿಯರ್ ಗಳು ಲಸಿಕೆಯ ಪೆಟ್ಟಿಗೆಯನ್ನು ಹೊತ್ತು ಮೂಳೆ ನಡುಗಿಸುವ ಚಳಿಯನ್ನೂ ಲೆಕ್ಕಿಸದೆ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದಾರೆ. ಮಸ್ರತ್ ಫರೀದ್ ಅವರಲ್ಲೊಬ್ಬರು.

ಮಸ್ರತ್ ಫರೀದ್ ನೇತೃತ್ವದ ಕೊರೊನಾ ವಾರಿಯರ್ ಗಳ ತಂಡ ಬೆಳಿಗ್ಗೆ ಲಸಿಕೆ ಪೆಟ್ಟಿಗೆ ಹಿಡಿದು ಹೊರಟು ಬಾಗಿಲಿಂದ ಬಾಗಿಲಿಗೆ ತೆರಳಿ ಗ್ರಾಮಸ್ಥರಿಗೆ ಲಸಿಕೆ ನೀಡುತ್ತಿದ್ದಾರೆ.
ಮಸ್ರತ್ ಮತ್ತು ಆಕೆಯ ಸಹಾಯಕರು ಕಳೆದ ವರ್ಷ 1000ಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ನೀಡಿದ್ದರು.
ಹಲವು ಗ್ರಾಮಸ್ಥರು ಲಸಿಕೆ ಕುರಿತಾಗಿ ಸಂದೇಶ ವ್ಯಕ್ತಪಡಿಸುತ್ತಿದ್ದು ಅವರ ಮನವೊಲಿಸುವುದೇ ಕಷ್ಟದ ಕೆಲಸ ಎನ್ನುತ್ತಾರೆ ಮಸ್ರತ್.
ಕುಗ್ರಾಮಗಳಲ್ಲಿ ಕೊರೊನಾ ಲಸಿಕೆ ಕುರಿತು ಮೂಢನಂಬಿಕೆ ಹರಡಿದ್ದು ಯುವತಿಯರೂ ಆ ಸುಳ್ಳುಸುದ್ದಿಗಳನ್ನು ನಂಬಿ ಲಸಿಕೆ ಪಡೆಯಲು ಹಿಂದೇಟುಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೊರೊನಾ ವಾರಿಯರ್ ಜಾಫರ್ ಅಲಿ ಅವರು ಹೇಳುವಂತೆ ಚಳಿಯಲ್ಲಿ ಲಸಿಕೆ ಹಾಕಲು ತೆರಳುವುದು ಅತಿ ದೊಡ್ಡ ಸವಾಲು.
ಇದುವರೆಗೂ ರಾಜ್ಯದ ಶೇ.72 ಪ್ರತಿಶತ ಮಂದಿಗೆ ಕೊರೊನಾ ಲಸಿಕೆ ನೀಡಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.
ಹಿಮಪಾತದಿಂಡ ಹಲವು ಕುಗ್ರಾಮಗಳು ಹೊರಜಗತಿನೊಂದಿಗೆ ಸಂಪರ್ಕ ಕಡಿದುಕೊಂಡಿದ್ದು ಅಲ್ಲಿಗೆ ತಲುಪಲು ಮಸ್ರತ್ ನಂಥ ಕೊರೊನಾ ವಾರಿಯರ್ ಗಳು ಹರಸಾಹಸ ಪಡುತ್ತಿದ್ದಾರೆ.
ಕೊರೊನಾ ವಾರಿಯರ್ ಗಳ ತಂಡ ಬುದ್ಗಾಂ ನಲ್ಲಿ ಲಸಿಕೆ ಪೆಟ್ಟಿಗೆ ಹೊತ್ತು ಸಾಗುತ್ತಿರುವುದು
ಕಾಶ್ಮೀರಿ ಯುವತಿ ತನ್ವೀರಾ ಬನೂ ಲಸಿಕೆ ಪಡೆದು ತನ್ನ ಮನೆಯ ಬಾಗಿಲಲ್ಲಿ ಕೊರೊನಾ ವಾರಿಯರ್ ಗಳಿಗೆ ವಿದಾಯ ಹೇಳುತ್ತಿರುವುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Video- ಒಮಾನ್ ಗೆ ಬಂದಿಳಿದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ: ಇಂದು ಹಲವು ಒಪ್ಪಂದಗಳಿಗೆ ಸಹಿ ನಿರೀಕ್ಷೆ

Operation Sindoor ವೇಳೆ ಭಾರತ ಸೋತಿತ್ತು: ನನ್ನ ಹೇಳಿಕೆಯಲ್ಲಿ ತಪ್ಪಿಲ್ಲ, ಕ್ಷಮೆ ಕೇಳಲ್ಲ ಎಂದ ಪೃಥ್ವಿರಾಜ್ ಚವಾಣ್

ಮುಂಬೈ: ಗಂಟೆಗೆ 252 ಕಿ.ಮೀ ವೇಗದಲ್ಲಿ ಕಾರು ಚಾಲನೆ; ಲಾಂಬೋರ್ಘಿನಿ ಜಪ್ತಿ, FIR ದಾಖಲು

Suburban rail: ಕಂಟೋನ್ಮೆಂಟ್‌ನಲ್ಲಿ ಮರಗಳನ್ನು ಕಡಿಯದಂತೆ ಹೈಕೋರ್ಟ್ ಆದೇಶ

'ಭದ್ರಾ ಮೇಲ್ದಂಡೆ ಯೋಜನೆ ಅನುದಾನ, ನರೇಗಾ, ಜಲ ಜೀವನ್ ಮಿಷನ್ ಬಾಕಿ ಅನುದಾನ ಬಿಡುಗಡೆ ಮಾಡದ ಕೇಂದ್ರ ಸರ್ಕಾರ ದಿವಾಳಿಯಾಗಿದೆಯೇ?'

SCROLL FOR NEXT