ಮಸ್ರತ್ ಫರೀದ್ ನೇತೃತ್ವದ ಕೊರೊನಾ ವಾರಿಯರ್ ಗಳ ತಂಡ ಬೆಳಿಗ್ಗೆ ಲಸಿಕೆ ಪೆಟ್ಟಿಗೆ ಹಿಡಿದು ಹೊರಟು ಬಾಗಿಲಿಂದ ಬಾಗಿಲಿಗೆ ತೆರಳಿ ಗ್ರಾಮಸ್ಥರಿಗೆ ಲಸಿಕೆ ನೀಡುತ್ತಿದ್ದಾರೆ.ಮಸ್ರತ್ ಮತ್ತು ಆಕೆಯ ಸಹಾಯಕರು ಕಳೆದ ವರ್ಷ 1000ಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ನೀಡಿದ್ದರು.ಹಲವು ಗ್ರಾಮಸ್ಥರು ಲಸಿಕೆ ಕುರಿತಾಗಿ ಸಂದೇಶ ವ್ಯಕ್ತಪಡಿಸುತ್ತಿದ್ದು ಅವರ ಮನವೊಲಿಸುವುದೇ ಕಷ್ಟದ ಕೆಲಸ ಎನ್ನುತ್ತಾರೆ ಮಸ್ರತ್.ಕುಗ್ರಾಮಗಳಲ್ಲಿ ಕೊರೊನಾ ಲಸಿಕೆ ಕುರಿತು ಮೂಢನಂಬಿಕೆ ಹರಡಿದ್ದು ಯುವತಿಯರೂ ಆ ಸುಳ್ಳುಸುದ್ದಿಗಳನ್ನು ನಂಬಿ ಲಸಿಕೆ ಪಡೆಯಲು ಹಿಂದೇಟುಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.ಕೊರೊನಾ ವಾರಿಯರ್ ಜಾಫರ್ ಅಲಿ ಅವರು ಹೇಳುವಂತೆ ಚಳಿಯಲ್ಲಿ ಲಸಿಕೆ ಹಾಕಲು ತೆರಳುವುದು ಅತಿ ದೊಡ್ಡ ಸವಾಲು.ಇದುವರೆಗೂ ರಾಜ್ಯದ ಶೇ.72 ಪ್ರತಿಶತ ಮಂದಿಗೆ ಕೊರೊನಾ ಲಸಿಕೆ ನೀಡಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.ಹಿಮಪಾತದಿಂಡ ಹಲವು ಕುಗ್ರಾಮಗಳು ಹೊರಜಗತಿನೊಂದಿಗೆ ಸಂಪರ್ಕ ಕಡಿದುಕೊಂಡಿದ್ದು ಅಲ್ಲಿಗೆ ತಲುಪಲು ಮಸ್ರತ್ ನಂಥ ಕೊರೊನಾ ವಾರಿಯರ್ ಗಳು ಹರಸಾಹಸ ಪಡುತ್ತಿದ್ದಾರೆ.ಕೊರೊನಾ ವಾರಿಯರ್ ಗಳ ತಂಡ ಬುದ್ಗಾಂ ನಲ್ಲಿ ಲಸಿಕೆ ಪೆಟ್ಟಿಗೆ ಹೊತ್ತು ಸಾಗುತ್ತಿರುವುದುಕಾಶ್ಮೀರಿ ಯುವತಿ ತನ್ವೀರಾ ಬನೂ ಲಸಿಕೆ ಪಡೆದು ತನ್ನ ಮನೆಯ ಬಾಗಿಲಲ್ಲಿ ಕೊರೊನಾ ವಾರಿಯರ್ ಗಳಿಗೆ ವಿದಾಯ ಹೇಳುತ್ತಿರುವುದು.