ಮಾರ್ಚ್ 15ರಂದು ಜಸ್ ಪ್ರೀತ್ ಬುಮ್ರಾ ಟಿವಿ ನಿರೂಪಕಿ ಸಂಜನಾ ಗಣೇಶನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಇನ್ನು ಪತ್ನಿ ಸಂಜನಾ ಜೊತೆಗಿನ ಸಂಭ್ರಮದ ಫೋಟೋವನ್ನು ಬುಮ್ರಾ ಟ್ವೀಟ್ ಮಾಡಿದ್ದರು. ಈ ಫೋಟೋ ನೋಡಿದ ನೆಟ್ಟಿಗರು ಗರಂ ಆಗಿದ್ದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಇದೇ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಸಹ ಬುಮ್ರಾ ವಿರುದ್ಧ ಕಿಡಿಕಾರಿದ್ದು ಪಟಾಕಿ ಬೇಡ ಎಂದು ದೀಪಾವಳಿ ಸಮಯದಲ್ಲಿ ಮಾತ್ರ ಹೇಳಿದರೆ ಸಾಕೆ? ಹಿಂದೂಗಳ ಹಬ್ಬದ ಸಮಯದಲ್ಲಿ ಮಾತ್ರವೇ ನಮ್ಮ ಜನಪ್ರಿಯ ವ್ಯಕ್ತಿಗಳು ಪರಿಸರವಾದಿಗಳಾಗುತ್ತಾರೆ ಎಂದು ಟೀಕಿಸಿದ್ದಾರೆ.ಅದಕ್ಕೆ ಕಾರಣ ಕಳೆದ ದೀಪಾವಳಿಯಂದು ಬುಮ್ರಾ ಪಟಾಕಿ ಹೊಡೆಯುವುದು ಬೇಡ ಎಂದು ಟ್ವೀಟಿಸಿದ್ದರು. ಆದರೆ ಅವರ ಮದುವೆ ಸಂಭ್ರಮದ ವೇಳೆ ಬುಮ್ರಾ ಮತ್ತು ಪತ್ನಿ ಸಂಜನಾ ಸುರಸುರಬತ್ತಿ ಹಚ್ಚಿಕೊಂಡು ನಿಂತಿದ್ದವರ ಮಧ್ಯದಲ್ಲೆ ನಡೆದುಕೊಂಡು ಬರುತ್ತಿರುವ ಫೋಟೋ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.ಬುಮ್ರಾ-ಸಂಜನಾಬುಮ್ರಾ-ಸಂಜನಾಸಂಜನಾಬುಮ್ರಾ