ರಾಜಕೀಯ

ಕೋಲಾರದಲ್ಲಿ ಕಾಂಗ್ರೆಸ್‍ಗೆ ಬಿಕ್ಕಟ್ಟು

Srinivasamurthy VN

ಬೆಂಗಳೂರು: ಕೋಲಾರ ವಿಧಾನ ಪರಿಷತ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‍ನ ಮೂವರು ಹಿರಿಯ ಮುಖಂಡರಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ.

ಆರ್.ಎಲ್. ಜಾಲಪ್ಪ ಅವರ ಅಳಿಯ ನಾಗರಾಜ್ ಪರವಾಗಿ ಸಿಎಂ ಸಿದ್ದರಾಮಯ್ಯ, ಎಲವಳ್ಳಿ ರಮೇಶ್ ಪರವಾಗಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಅನಿಲ್ ಕುಮಾರ್ ಪರವಾಗಿ ಕೆ.ಎಚ್. ಮುನಿಯಪ್ಪ ಲಾಬಿ ನಡೆಸುತ್ತಿದ್ದಾರೆ. ಈ ಬಾರಿಯ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಅವರನ್ನು ಸಂಪೂರ್ಣವಾಗಿ  ನಿರ್ಲಕ್ಷಿಸಲಾಗಿದ್ದು, ಅವರ ಯಾವುದೇ ಸಲಹೆಗೂ ಸಿಎಂ ಸಿದ್ದರಾಮಯ್ಯ ಅವರಾಗಲಿ, ಹೈಕಮಾಂಡ್ ಆಗಲಿ ಕಿವಿಗೊಟ್ಟಿಲ್ಲ.

SCROLL FOR NEXT