ವಿದ್ಯುತ್ ತಂತಿ 
ರಾಜಕೀಯ

ನಗರದೊಳಗೆ ಲೈನ್ ಕಷ್ಟ

ನಗರಕ್ಕೆ ಅಗತ್ಯವಿರುವ ವಿದ್ಯುತ್ ಪೂರೈಸಲಾಗುತ್ತಿಲ್ಲ. ವರ್ಷಗಳ ಹಿಂದೆ ಸರಿಯಾದ ಯೋಜನೆ ರೂಪಿಸಿಲ್ಲ. ನಮ್ಮ ಬಳಿ ವಿದ್ಯುತ್ ಇದ್ದರೂ...

ಬೆಂಗಳೂರು: ನಗರಕ್ಕೆ ಅಗತ್ಯವಿರುವ ವಿದ್ಯುತ್ ಪೂರೈಸಲಾಗುತ್ತಿಲ್ಲ. ವರ್ಷಗಳ ಹಿಂದೆ ಸರಿಯಾದ ಯೋಜನೆ ರೂಪಿಸಿಲ್ಲ. ನಮ್ಮ ಬಳಿ ವಿದ್ಯುತ್ ಇದ್ದರೂ ಅದನ್ನು ನಗರದೊಳಗೆ ತರಲು ವಿದ್ಯುತ್ ತಂತಿ ಹಾಕಲು ಆಗುತ್ತಿಲ್ಲ ಹಾಗಾಗಿ ಕೆಪಿಟಿಸಿಎಲ್ ಅಧಿಕಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಭೂಮಿಯ ಬೆಲೆ ಗಗನಕ್ಕೇರಿರುವುದರಿಂದ ಸಾರ್ವಜನಿಕರು ಕಂಬಗಳನ್ನು ನೆಡಲು ಜಾಗ ನೀಡುತ್ತಿಲ್ಲ. ಅದನ್ನು ನಾವೇ ಖರೀದಿಸಿ ಹಣ ಪರಿಹಾರ ನೀಡುವುದು ಕಷ್ಟವಾಗುತ್ತದೆ. ಹಾಗಾಗಿ ಬಾಡಿಗೆಗೆ ತಮ್ಮ ಜಮೀನು ಅಥವಾ ಸ್ಥಳ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ನಗರದಲ್ಲಿ ಎಲ್ಲೇ ವಿದ್ಯುತ್ ತಂತಿ ಹಾದುಬಂದರೆ ಮಾರುಕಟ್ಟೆ ದರದಲ್ಲಿ ಶೇ.75ರಷ್ಟು, ಟವರ್ ನಿರ್ಮಾಣ ಮಾಡಿದಲ್ಲಿ ಶೇ.100ರಷ್ಟು ಪರಿಹಾರ ನೀಡಲಾಗುವುದು.

ಗ್ರಾಮೀಣ ಪ್ರದೇಶಗಳಲ್ಲಾದರೆ ತಂತಿ ಹಾದುಬಂದಿರುವ ನಿರ್ದಿಷ್ಟ ಪ್ರದೇಶಕ್ಕೆ ಶೇ.50 ಹಾಗೂ ಟವರ್ ಇದ್ದಲ್ಲಿ ಶೇ.100 ಪರಿಹಾರ ನೀಡಲಾಗುವುದು ಎಂದರು. ವಿವಿಧೆಡೆಯಿಂದ ಆಗಮಿಸಿದ್ದ ಕೈಗಾರಿಕೋದ್ಯಮಿಗಳು ವಿದ್ಯುತ್ ಕೊರತೆ ಬಗ್ಗೆ ಅಹವಾಲು ತೋಡಿಕೊಂಡರು. ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ್ ನಾಯಕ್, ಕಾಸಿಯಾ ಅಧ್ಯಕ್ಷ ಸಿ.ಎ .ರಾಜಮನೆ ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT